ಮಕ್ಕಳ ಸಾಹಿತಿ ಎ .ಕೆ ರಾಮೇಶ್ವರ ಜೊತೆ ದೂರದರ್ಶನ ಸಂದರ್ಶನ

ಮಕ್ಕಳ ಸಾಹಿತಿ ಎ .ಕೆ ರಾಮೇಶ್ವರ ಜೊತೆ ದೂರದರ್ಶನ ಸಂದರ್ಶನ
ಕಲಬುರಗಿ: ದೂರದರ್ಶನ ಕೇಂದ್ರದ ಚಂದನ ವಾಹಿನಿಯಲ್ಲಿ ಶನಿವಾರ ಮಧ್ಯಾಹ್ನ 2:30ಕ್ಕೆ (ಜೂ 28) ಕ್ಕೆ "ಸಾಹಿತಿಗಳೊಡನೆ ಸಂವಾದ" ದಲ್ಲಿ ಖ್ಯಾತ ಮಕ್ಕಳ ಸಾಹಿತಿ ಎ.ಕೆ ರಾಮೇಶ್ವರ ಅವರ ಜೊತೆ ನಡೆಸಿದ ಸಂದರ್ಶನವನ್ನು ಪ್ರಸಾರ ಮಾಡಲಿದೆ.
ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಉತ್ತರ ಕರ್ನಾಟಕದ ಹಿರಿಯ ಕವಿಗಳಾದ ಸಿಸು ಸಂಗಮೇಶ ಕಂಚ್ಯಾಣಿ ಶರಣಪ್ಪ ಪಂಕ್ತಿಯಲ್ಲಿ ನಿಲ್ಲುವ ಎ.ಕೆ ರಾಮೇಶ್ವರ್ ಮಕ್ಕಳ ಮನಸ್ಸು ಕಟ್ಟುವ ಸಾಹಿತ್ಯ ರಚನೆ ಮಾಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಸರು ಮಾಡಿದವರು.
ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ನಡೆದು ಬಂದ ಬದುಕಿನ ಯಾನದ ಬಗ್ಗೆ ಹಾಗೂ ಪ್ರಶಸ್ತಿ ಗೌರವಗಳ ಬಗ್ಗೆ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇವರನ್ನು ದೂರದರ್ಶನದ ವಿಶೇಷ ಕಾರ್ಯಕ್ರಮ ನಿರೂಪಕರಾದ ಡಾ. ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಸೋಮಶೇಖರ ಎಸ್ ರುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ