ಮಾದಕ ವಸ್ತುಗಳ ಸೇವನೆ ಬೇಡ; ವಿದ್ಯಾರ್ಥಿಗಳಿಗೆ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಸಲಹೆ

ಮಾದಕ ವಸ್ತುಗಳ ಸೇವನೆ ಬೇಡ; ವಿದ್ಯಾರ್ಥಿಗಳಿಗೆ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಸಲಹೆ

ಮಾದಕ ವಸ್ತುಗಳ ಸೇವನೆ ಬೇಡ; ವಿದ್ಯಾರ್ಥಿಗಳಿಗೆ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಸಲಹೆ

ಶಹಾಬಾದ : - ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳೆ ಮಾರಕವಾಗಿವೆ, ಡ್ರಗ್ ಸರ್ವೇಯರ್ ಗಳು ವಿದ್ಯಾರ್ಥಿಗಳು ಮತ್ತು ಯುವಕರನ್ನೆ ಗುರಿಯಾಗಿಸಿಕೊಂಡಿದ್ದಾರೆ ಎಂದು ಶಹಾಬಾದ ಉಪ ವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ ರವರು ಎಚ್ಚರಿಕೆಯ ಕರೆ ನೀಡಿದರು. 

ಅವರು ಸರಕಾರಿ ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಪೋಲಿಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. 

ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ನಿಗದಿ ಪಡಿಸಿಕೊಂಡು, ಸದಾ ಗುರಿಯ ಕಡೆಗೆ ಚಿಂತಿಸಬೇಕು, ಮಾದಕ ವ್ಯಸನಗಳು ನಿಮ್ಮ ಗುರಿಯ ದಾರಿಯನ್ನು ತಪ್ಪಿಸಬಹುದು, ಹಾಗಾಗಿ ಮಾದಕ ವ್ಯಸನಗಳ ಸೇವನೆ ಬೇಡ, ಹದಿ ಹರೆಯದವರಲ್ಲಿ ವಿವಿಧ ಕಾರಣಗಳಿಂದ ಮಾದಕ ವ್ಯಸನದ ಚಟ ಹೆಚ್ಚುತ್ತಿದೆ ಎಂದರು.

ಅಕ್ರಮ ಮಾದಕ ವಸ್ತು ಸಾಗಣಿಕೆ ವಿರುದ್ಧ ಎಲ್ಲರೂ ಶ್ರಮವಹಿಸಿ ಕೆಲಸ ಮಾಡಿದಾಗ ಮಾತ್ರ ಮಾದಕ ವಸ್ತುಗಳ ಮುಕ್ತ ಸಮಾಜವನ್ನಾಗಿ ಪರಿವರ್ತನೆ ಮಾಡಲು ಸಾಧ್ಯ, ಉತ್ತಮ ಸಮಾಜಕ್ಕೆ ಯುವ ಶಕ್ತಿಯೇ ಆಧಾರ ಸ್ತಂಭ, ಆದರೆ ಡ್ರಗ್ಸ್ ಚಟದಿಂದಾಗಿ ಯುವ ಶಕ್ತಿಯು ತಪ್ಪು ದಾರಿ ಹಿಡಿಯುತ್ತಿದೆ, ಯುವಕರಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಧ್ಯಾರ್ಥಿಳೊಂದಿಗೆ ಪಾಲ್ಗೊಂಡಿರುವದು ನನಗೆ ತುಂಬಾ ಖುಷಿ ನೀಡಿದೆ ಎಂದರು. 

ಇಂತಹ ಪ್ರಕರಣಗಳಲ್ಲಿ ಪೋಲಿಸರ ಕೈಗೆ ಸಿಕ್ಕಿಬಿದ್ದರೆ ಕಠಿಣ ಶಿಕ್ಷೆ ಜೊತೆ ಜೀವನದಲ್ಲಿ ಮುಂದೆ ಸರಕಾರಿ ಕೆಲಸ ಸಿಗುವದಿಲ್ಲ, ಮಾದಕ ದ್ರವ್ಯ ಸೇವನೆ ಮತ್ತು ಮಾರಾಟ ಕಂಡು ಬಂದರೆ ತಮ್ಮ ಪಾಲಕರಿಗೆ ಅಥವಾ ಪೋಲಿಸ್ ರಿಗೆ ತಿಳಿಸಿದರೆ ನಿಮ್ಮ ಹೆಸರು ಮತ್ತು ವಿಳಾಸ ಗೌಪ್ಯವಾಗಿಡಲಾಗುವದು ಎಂದು ಸೂಚ್ಯವಾಗಿ ಹೇಳಿದರು. 

ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರುದ್ಧ ಅರಿವು ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಜೂನ್ 26ರಂದು ಅಂತಾರಾಷ್ಟ್ರೀಯ ದಿನವನ್ನು ರಾಷ್ಟ್ರಾದಾದ್ಯಂತ ಆಚರಿಸಲಾಗುತ್ತದೆ ಎಂದರು. 

ಪ್ರಾಚಾರ್ಯರಾದ ಪರಮೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆ ಮೇಲೆ ಪಿಎಸಐ ಚಂದ್ರಕಾಂತ ಮಕಾಲೆ, ಶಾಮರಾಯ ಮತ್ತು ಉಪನ್ಯಾಸಕ ರವಿ ಚಹ್ವಾಣ, ಭಾವಲಾಲ ಚಹ್ವಾಣ ಇದ್ದರು.

ಪೊಲೀಸ್ ಸಿಬ್ಬಂದಿಗಳಾದ ಎಎಸಐ ಶ್ರೀಕಾಂತ ನಾಯಕ, ದೊಡ್ಡಪ್ಪ ಪೂಜಾರಿ, ಹುಸೇನ ಪಟೇಲ್ ಸೇರಿದಂತೆ ಪ್ರೌಡ ಶಾಲೆಯ ಮತ್ತು ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಹಾಬಾದ್ ಸುದ್ದಿ:- ನಾಗರಾಜ್ ದಂಡಾವತಿ