ಚಿಂಚೋಳಿ ಬಸವಪರ ಸಂಘಟನೆಗಳು ಕೈಗೊಂಡಿರುವ ಅನಿರ್ದಿಷ್ಟ ಧರಣಿ ಮೊಟಕು ಬಸವ ಭವನ ನಿರ್ಮಾಣದ ಬೇಡಿಕೆ ಈಡೇರಿಸಿದ ಸಚಿವ ಪ್ರೀಯಾಂಕ್ ಖರ್ಗೆ

ಚಿಂಚೋಳಿ ಬಸವಪರ ಸಂಘಟನೆಗಳು ಕೈಗೊಂಡಿರುವ ಅನಿರ್ದಿಷ್ಟ ಧರಣಿ ಮೊಟಕು
ಬಸವ ಭವನ ನಿರ್ಮಾಣದ ಬೇಡಿಕೆ ಈಡೇರಿಸಿದ ಸಚಿವ ಪ್ರೀಯಾಂಕ್ ಖರ್ಗೆ
ಚಿಂಚೋಳಿ : ಬಸವ ಭವನ ನಿರ್ಮಾಣಕ್ಕೆ ನಿವೇಶನ ಕೋರಿ ಕಳೆದ ನಾಲ್ಕು ದಿನದಿಂದ ಅನಿರ್ದಿಷ್ಟ ಧರಣಿ ನಡೆಸುತ್ತಿದ್ದ ಚಿಂಚೋಳಿ ಬಸವಪರ ಸಂಘಟನೆಗಳ ಬಹುದಿನ ಬೇಡಿಕೆಯನ್ನು ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರು ಈಡೇರಿಸಿದರು.
ಬಸವ ಭವನ ನಿರ್ಮಾಣ ಕಾರ್ಯಕ್ಕಾಗಿ ಸಂಘಟನೆಗಳು ಜೂನ್ 21 ರಂದು ಸಾಂಯಕಾಲ ಸಾಂಸ್ಕೃತಿಕ ನಾಯಕ ಬಸವಣ್ಣನವರ ಫಲಕವನ್ನು ಹಳೆಯ ತಹಸೀಲ್ ಕಾರ್ಯಾಲಯದ ಆವರಣದ ನೆಲದಲ್ಲಿ ಅಳವಡಿಸಲಾಗಿತು. ಅಳವಡಿಸಿದ ಫಲಕವನ್ನು ಜೂನ್ 23 ರಂದು ತಾಲೂಕ ಆಡಳಿತ ಅಧಿಕಾರಿಗಳು ತೆರವುಗೊಳಿಸಿದರ ಹಿನ್ನಲೆಯಲ್ಲಿ ಆಕ್ರೋಶಗೊಂಡು ಬಸವಪರ ಸಂಘಟನೆಗಳು ಅನಿರ್ದಿಷ್ಟ ಧರಣಿ ಕುಳಿತುಕೊಳ್ಳುವಂತಾಗಿತ್ತು. ಬಸವ ಭವನ ನಿರ್ಮಾಣಕ್ಕೆ ನಿವೇಶನದ ಸ್ಥಳಾವಕಾಶ ನೀಡುವವರೆಗೆ ಧರಣಿ ಮುಂದುವರೆಸಲು ಪಟ್ಟು ಹಿಡಿದಿದ ಸಂಘಟನೆಗಳ ಬೇಡಿಕೆಯ ಮನವಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರು ತಕ್ಷಣಕ್ಕೆ ಸ್ಪಂದಿಸಿ, ಜಿಲ್ಲಾಧಿಕಾರಿಗಳ ಮೂಲಕ ಬೇಡಿಕೆ ಆದ್ಯತೆಯಂತೆ ಚಿಂಚೋಳಿ ವ್ಯಾಪ್ತಿಯ ಹೋಸಳ್ಳಿ ಕ್ರಾಸ್ ಹತ್ತಿರದ ಸರಕಾರಿ ಗೈರಾಣ ಸರ್ವೇ ನಂ. 242ರಲ್ಲಿ 2 ಎಕರೆ ಜಮೀನು ಮಂಜೂರಿ ಮಾಡಲು ಚಿಂಚೋಳಿ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಹಾಗೂ ಡಿವೈಎಸ್ಪಿ ಸಂಗಮನಾಥ ಹಿರೇಮಠ ಅವರು ಬಸವ ಸಂಘಟನೆಗಳ ಮುಖಂಡರಿಗೆ ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ಕೈಗೊಂಡಿರುವ ಅನಿರ್ದಿಷ್ಟ ಧರಣಿ ನಾಲ್ಕೇ ದಿನಕ್ಕೆ ಸಿಮಿತಗೊಳಿಸಿ ಮೊಟಕುಗೊಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕ ಶಾಖೆಯ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ, ಹಿರಿಯ ಮುಖಂಡ ಬಸವರಾಜ ಸಜ್ಜನ್, ನೀಲಕಂಠ ಸಿಳೀನ್, ಸುಭಾಶ ಸಿಳೀನ್, ನಂದಕುಮಾರ ಪಾಟೀಲ ನಂಪಾ, ಸೂರ್ಯಕಾಂತ ಚೆನ್ನೂರ್, ಮಲ್ಲಿಕಾರ್ಜುನ ಭೂಶೆಟ್ಟಿ, ಶಂಕರ ಶಿವಪೂರಿ, ಸಂಜುಕುಮಾರ ಪಾಟೀಲ್, ಆನಂದ ಹಿತ್ತಲ್, ಸಂತೋಷ ಕಶೆಟ್ಟಿ, ವೀರಣ್ಣ ಗಂಗಾಣಿ, ರಾಜಶೇಖರ ಹಿತ್ತಲ್, ಸುರೇಶ ಸುಂಕದ್, ಸುರೇಶ ದೇಶಪಾಂಡೆ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದರು.