ರಾಯಚೂರು ರಾಜಕೀಯ ಕರ್ಮಭೂಮಿ: ಎನ್.ಎಸ್. ಭೋಸರಾಜು ಅವರ ನಿಜವಾದ ನಾಯಕತ್ವದ ಪ್ರತೀಕ

ರಾಯಚೂರು ರಾಜಕೀಯ ಕರ್ಮಭೂಮಿ: ಎನ್.ಎಸ್. ಭೋಸರಾಜು ಅವರ ನಿಜವಾದ ನಾಯಕತ್ವದ ಪ್ರತೀಕ

ರಾಯಚೂರು ರಾಜಕೀಯ ಕರ್ಮಭೂಮಿ: ಎನ್.ಎಸ್. ಭೋಸರಾಜು ಅವರ ನಿಜವಾದ ನಾಯಕತ್ವದ ಪ್ರತೀಕ

ರಾಜಕೀಯದಲ್ಲಿ ಕೆಲವರು ಜನಪ್ರಿಯರಾಗುತ್ತಾರೆ, ಕೆಲವರು ಅಧಿಕಾರಕ್ಕೋಸ್ಕರ ಮುಡಿಪಾಗುತ್ತಾರೆ. ಆದರೆ ಕೆಲವರು ಇತಿಹಾಸದ ಪುಟಗಳಲ್ಲಿ *ರಾಜಕೀಯ ಕರ್ಮಭೂಮಿ* ಎಂಬ ಹೆಸರು ಪಡಿಸುವಷ್ಟು ದಿಟ್ಟ, ದೃಢ ನಡಿಗೆ ಇಡುತ್ತಾರೆ. ಅಂಥವರಲ್ಲಿ ರಾಯಚೂರಿನ ರಾಜಕೀಯ ನಕ್ಷೆ ಮೇಲೆ ಪ್ರಭಾವ ಬೀರಿದ ನಾಯಕನ ಹೆಸರು – ಎನ್.ಎಸ್. ಭೋಸರಾಜು

ಮೂಲತಃ ಆಂಧ್ರಪ್ರದೇಶದ ಮೊಗಲ್ಲುವಿನಿಂದ, 1968 ರಲ್ಲಿ ರಾಯಚೂರಿನ ಮಾನ್ವಿ ತಾಲ್ಲೂಕಿನ ಜೀನೂರಿಗೆ ಬಂದ ಭೋಸರಾಜು, ತನ್ನ ಜೀವನದ ದಿಕ್ಕನ್ನೇ ರಾಯಚೂರಿನ ನವೋದ್ಯಮಕ್ಕೆ ಮೀಸಲಿಟ್ಟರು. ರಾಜಕೀಯದ ಅಂಗಣಕ್ಕೆ ಕಾಲಿಟ್ಟ ಮೇಲೆ ಅವರು ರಾಯಚೂರನ್ನು ತಮ್ಮ ಕಾರ್ಯಭೂಮಿಯಾಗಿ ಮಾತ್ರವಲ್ಲ, ಕರ್ಮಭೂಮಿಯಾಗಿ ಪರಿವರ್ತಿಸಿಕೊಂಡರು. ರಾಯಚೂರಿಗೆ ಅವರು ನೀಡಿದ ಅಭಿವೃದ್ಧಿಯ ನೋಟವಿರುವ ಪ್ರತಿ ಯೋಜನೆ, ಅವರ ದೂರದೃಷ್ಟಿ, ಕಠಿಣ ಪರಿಶ್ರಮ ಮತ್ತು ಜನಪರಳತೆಯ ಸಾಕ್ಷಿಯಾಗಿದೆ.

ಆಧುನಿಕ ರಾಯಚೂರಿನ ಶಿಲ್ಪಿ

ಮಾವಿನಕೆರೆ ಪುನರುಜ್ಜೀವನದಿಂದ ಹಿಡಿದು, ₹220 ಕೋಟಿ ವೆಚ್ಚದ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಕಾಮಗಾರಿಗೆ ಶಕ್ತಿ ತುಂಬುವವರೆಗೆ, ಅವರು ಕೈ ಹಾಕಿದ ಪ್ರತಿಯೊಂದು ಯೋಜನೆಯು ಅಭಿವೃದ್ಧಿಗೆ ವಾತಾವರಣ ಒದಗಿಸಿತು. ಮಾನ್ವಿಯಿಂದ ರಾಯಚೂರಿಗೆ ನಿರ್ಮಾಣವಾದ ನಾಲ್ಕು ಪಥದ ರಸ್ತೆಯು ಮಾತ್ರವಲ್ಲ, ಮೇಯರ್ ಮತ್ತು ಡೆಪ್ಯುಟಿ ಮೇಯರ್ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಜಯದ ನಗೆ ತಂದ ಹಿನ್ನಲೆಯಲ್ಲಿ, ರಾಯಚೂರಿನ ಶಕ್ತಿಶಾಲಿ ರಾಜಕೀಯವನ್ನೇ ಪರಿವರ್ತಿಸುವಲ್ಲಿ ಭೋಸರಾಜು ಪ್ರಮುಖ ಪಾತ್ರವಹಿಸಿದರು.

ಸಂಘಟನೆವೆಂಬ ಚಕ್ರವ್ಯೂಹದಲ್ಲಿ ನಾಯಕನ ನಡಿಗೆ

ಭೋಸರಾಜು ಅವರು ಶಿಸ್ತು, ಪ್ರಾಮಾಣಿಕತೆ ಮತ್ತು ನಿಷ್ಠೆ ಎಂಬ ಗುಣಗಳಿಂದ ಜೆ. ಪರಮೇಶ್ವರ ಅಧ್ಯಕ್ಷರಾಗಿದ್ದ ಕಾಲದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಉಜ್ವಲ ಸೇವೆ ಸಲ್ಲಿಸಿದರು. ಬೆಳಿಗ್ಗೆ ಕಚೇರಿಗೆ ಬರುವವರು, ಮಧ್ಯಾಹ್ನ ಊಟದೊಡನೆ ಮರಳುವವರು, ದಿನದ ಕೆಲಸ ಮುಗಿಯುವವರೆಗೂ ಕಾಲ ಮಿತಿಯನ್ನು ಕಡೆಗಣಿಸುವವರು – ಅವರ ಈ ನಿರಂತರ ಕಾರ್ಯಶೀಲತೆಯು ಯುವ ನಾಯಕರಿಗೆ ಆದರ್ಶವಾಗಿ ಉಳಿಯುತ್ತದೆ.

ಪಕ್ಷ ಸಂಘಟನೆಯೊಳಗೆ ವೃತ್ತಿಪರತೆ ಮತ್ತು ತ್ಯಾಗದ ಮೂಲಕ ಹೆಸರು ಗಳಿಸಿದ ಭೋಸರಾಜು, ಪಕ್ಷದಲ್ಲಿ ಯಾವುದೇ ತೊಂದರೆ ಉದ್ಭವಿಸಿದಾಗ ತಕ್ಷಣ ರಾಜ್ಯದಾದ್ಯಂತ ಸಂಚರಿಸಿ ಸಮಸ್ಯೆ ಪರಿಹರಿಸುವ *"ಟ್ರಬಲ್ ಶೂಟರ್"* ಎಂಬ ಪದ್ಯವನ್ನು ತಮ್ಮ ಹೆಸರಿಗೆ ಸೇರ್ಪಡಿಸಿಕೊಂಡವರು.

ಅಖಿಲ ಭಾರತ ಮಟ್ಟದ ನಾಯಕನಾಗಿ 

ಅವರ ರಾಜಕೀಯ ಚಾಣಾಕ್ಷತನದ ಪರಿಣಾಮವಾಗಿ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ಸ್ಥಾನ ಲಭಿಸಿದ್ದು, ಅಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕಾರ್ಯದಲ್ಲಿ ಅವರು ಮುಂದಾಳತ್ವ ವಹಿಸಿದರು. ಈ ಕಾರ್ಯತತ್ಪರತೆ, ನೇತೃತ್ವ ಹಾಗೂ ಸಂಘಟನಾ ಶಕ್ತಿಯ ಮೂಲಕ ಭೋಸರಾಜು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಿಕಟವರ್ತಿಗಳಾಗಿ ಗುರುತಿಸಲ್ಪಟ್ಟರು.

ರಾಯಚೂರಿಗೆ ಭೋಸರಾಜು ಎಂಬ ಹೆಸರೇ ಅಭಿವೃದ್ಧಿ, ಶಿಸ್ತು, ಚಾಣಾಕ್ಷತೆ, ಹಾಗೂ ಶುದ್ಧ ನಿಷ್ಠೆಯ ಪ್ರತಿರೂಪವಾಗಿದೆ. ಅವರು ವಹಿಸಿಕೊಂಡ ಪ್ರತಿ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿ, ತಮ್ಮ ಜೀವನವನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿರುವುದು, ಇಂದಿನ ಯುವ ರಾಜಕಾರಣಿಗಳಿಗೆ ದಿಕ್ಕು ತೋರಿಸುವ ದೀಪವಾಗಿದೆ.