ಹಡಪದ ಅಪ್ಪಣ್ಣ ವಚನ ಅನುಸಂಧಾನ

ದಿನಕ್ಕೊಂದು ವಚನ ಅನುಸಂಧಾನ
ಆಟದಲಿ ಕೆಲಹೊತ್ತುಗಳೆದು,
ಕೂಟದಲಿ ಕೆಲಹೊತ್ತುಗಳೆದು,
ನೋಟದಲಿ ಕೆಲಹೊತ್ತುಗಳೆದು, ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ,
ಊಟ ಮಾಟ ಕೂಟದಲ್ಲಿ ಕೋಟಲ ಗೊಳುತ್ತಿದೆನೆಂಬುವನೊಬ್ಬ ಪೋಟ.
ಇವರಿಬ್ಬರ ನೋಟ ಬೇಟಕ್ಕೆ ಸಿಕ್ಕದೆ ದಾಂಟಿಹೋದನು, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ
ಹಡಪದ ಅಪ್ಪಣ್ಣ ವಚನಅನುಸಂಧಾನ
ಕಾಯ ಅಂದ್ರೆ; ಶರೀರ/ಅಂಗ/ತನು ಇದು ಮತ್ತು ಇದರಿಂದ ನಿರ್ವಹಿಸುವ ಕಾಯಕ ಕೇಂದ್ರಿತವಾದ ಲಿಂಗಾಯತ/ಶರಣ/ಬಸವ ಎಂದೆಲ್ಲಾ ಗುರುತಿಸಿ ಹೇಳುವ ಈ ಧರ್ಮದಲ್ಲಿ; ಮುಖ್ಯವಾಗಿರುವಂಥ ಭಕ್ತನಾದವನು ಈ ಕಾಯಕ ತತ್ವದ ಮಹತ್ವವನ್ನು ಅರಿವಿನ ಗುರು ಮುಖೇನ ತಿಳಿದುಕೊಂಡು ತಮ್ಮ ಬದುಕಿನಲ್ಲಿ ಅದನ್ನು ಚಾಚೂ ತಪ್ಪದೆ ಆಚರಣೆ ಮಾಡುವುದು ಮತ್ತು ತನುತ್ರಯಗಳಾದ ಶರೀರ/ಕಾಯ/ಅಂಗ/ತನು ಮನ ಭಾವದ ಸಂರಚನಾ ವ್ಯವಸ್ಥೆ ಒಳಗೊಂಡಿರುವ ಬಹಿರಂಗದಲ್ಲಿ ತೋರಿ ಬರುವ ಭೌತಿಕವಾದ ಜ್ಞಾನೇಂದ್ರಿಯ ಕರ್ಮೇಂದ್ರಿ ಯಗಳು ಮತ್ತು ಅಂತರಂಗದಲ್ಲಿರುವ ಕರಣಂಗ ಳು ಮಾಡುವ ಕಾರ್ಯ ಚಟುವಟಿಕೆಗಳು ಮತ್ತು ಅವು ಹೊಂದಿರುವ ಗುಣಾವಗುಣ ಧರ್ಮಗಳ ಜೊತೆಗೆ ಅವುಗಳಲ್ಲಿ ತುಂಬಿದ ಅರಿಷಡ್ವರ್ಗಗಳು ಚತುಷ್ಟಯಗಳು ಮತ್ತು ಸಪ್ತವ್ಯಸನಗಳಂಥಾ ಈ ಮಾಯಾ ಮಲಗಳು ಮಾಡುವ ಕೇಡುಗಳ ಬಗ್ಗೆ ಹಾಗೂ ದುಷ್ಪರಿಣಾಮದ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡು, ಹೀಗೆ ಅರಿವುಗೊಂಡ ಮನದ ಮೂಲಕ ಇಷ್ಟಲಿಂಗವನ್ನು ಅರೆಬಿರಿದ ನೋಟ ಕೂಟದ ಶಿವಾನುಭವ ಹೊಂದುವುದರ ಜೊತೆಗೆ ಲೋಕಹಿತಾಕಾಂಕ್ಷೆ ಬಯಸುವ ಶರಣ ಧರ್ಮದ ಜೀವನ ಮೌಲ್ಯದ ಘನತೆಯನ್ನು ಹಾಗೂ ಅದರ ಮಹತ್ವಪೂರ್ಣ ತತ್ವ ಸಿದ್ಧಾಂತಗಳನ್ನಿಲ್ಲಿ ಅತ್ಯಂತ ಸರಳವಾದ ಎರಡು ಉದಾಹರಣೆ ಮೂಲಕ ಈ ಮೇಲಿನ ವಚನದಲ್ಲಿ ವಚನಕಾರ ಶರಣರಾದಂಥ ಹಡಪದ ಅಪ್ಪಣ್ಣವರು ತಿಳಿಸಿದ್ದಾರೆ. ಅದರಲ್ಲಿನ ಒಳನೋಟದ ತಿರುಳನ್ನಿಲ್ಲಿ ಈಗ ಅನುಸಂಧಾನ ಮಾಡಿ ತಿಳಿಯುವ ಒಂದು ಪ್ರಯತ್ನ ಮಾಡೋಣ
ಆಟದಲಿ ಕೆಲಹೊತ್ತುಗಳೆದು,
*ಕೂಟದಲಿ ಕೆಲಹೊತ್ತುಗಳೆದು,
ನೋಟದಲಿ ಕೆಲಹೊತ್ತುಗಳೆದು,
ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ,
ಊಟ ಮಾಟ ಕೂಟದಲ್ಲಿ ಕೋಟಲ ಗೊಳುತ್ತಿದೆನೆಂಬುವನೊಬ್ಬ ಪೋಟ.
ಸಾಮಾನ್ಯ ಜನಜೀವನದಲ್ಲಿ ಕಾಣಬರುವ ವ್ಯಕ್ತಿ ಬದುಕಿನ ಒಂದು ನೋಟವನ್ನ ಅಪ್ಪಣ್ಣ ಶರಣರು ಇಲ್ಲಿ ಉಲ್ಲೇಖ ಮಾಡಿ ಹೇಳಿದ್ದಾರೆಂದೆನಿಸುವ ಈ ವಚನದ ಸಾಲುಗಳಿಲ್ಲಿ ಲಿಂಗಾಯತ ಭಕ್ತರನ್ನು ಕುರಿತು ಹೇಳಿದ್ದಾಗಿವೆ. ದಿನದ ಬಹುಭಾಗದಲ್ಲಿನ ಸಮಯವನ್ನು ಆಟ ನೋಟ ಕೂಟದಲ್ಲಿ ಕಳೆದು, ಉಳಿದ ಅಲ್ಪಾವಧಿಯಲ್ಲಿ ಊಟ ಹೊತ್ತಿಗೆ ಲಿಂಗ ಪೂಜೆಯ ಮಾಡಿಕೊಂಡೆನೆಂಬ ಭಕ್ತನೋರ್ವನ ಆತುರಾತುರವಾಗಿ ಇಷ್ಟಲಿಂಗ ಅನುಸಂಧಾನದ ಬಗ್ಗೆ ಹಾಗೂ ಊಟ ಕೂಟ ಮಾಟದಲ್ಲಿ ಬಿದ್ದಂಥ ತೊಳಲಾಟವನ್ನ ಅನುಭವಿಸುವ ಭಕ್ತನೋರ್ವನ ಬದುಕಿನ ದುಸ್ಥಿ ತಿಯನ್ನು ಇಲ್ಲಿ ಅಪ್ಪಣ್ಣ ಶರಣರು ತೌಲನಿಕ ನೋಟದ ನುಡಿಚಿತ್ರದಲ್ಲಿ ಬಿಡಿಸಿಟ್ಟಿದ್ದು ತನ್ಮೂಲಕವಾಗಿ ಇವೆರಡೂ ಆತುರಾತುರದಲ್ಲಿನ ಕ್ರಿಯೆಗಳನ್ನ ಅವರು ಒಪ್ಪುವುದಿಲ್ಲ.
ಇವರಿಬ್ಬರ ನೋಟ ಬೇಟಕ್ಕೆ ಸಿಕ್ಕದೆ ದಾಂಟಿಹೋದನು, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
ಮೇಲೆ ಉಲ್ಲೇಖ ಮಾಡಿದಂಥ ಈರ್ವರೂ ಭಕ್ತರ ಕಾರ್ಯಚಟುವಟಿಕೆಗಳು ನೈಜತೆಯನ್ನು ಹೊಂದಿ ಲ್ಲದಿರುವ ಕಾರಣದಿಂದಾ ಈ ಭಕ್ತರಿಗೆ ತಮ್ಮಯ ಇಷ್ಟಲಿಂಗದ ಅನುಸಂಧಾನದ ನಿಜ ಸುಖವನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲದ ಈ ಫಜೀತಿಯ ಕಂಡು ಬಸವಪ್ರಿಯ ಕೂಡಲಚೆನ್ನಬಸವಣ್ಣನು ಅಂದ್ರೆ ಸಾಕ್ಷಾತ್ ಶಿವ ಸುಮ್ಮನೆ ದಾಟಿಹೋದನು ಎನ್ನುವ ಮೂಲಕ ಶರಣ ತತ್ವ ಸಿದ್ಧಾಂತಗಳನ್ನು ಸರಿಯಾಗಿ ಅರಿಯುವುದು ಎಷ್ಟು ಮುಖ್ಯವೋ
ಅಷ್ಟೇ ಪರಿಪೂರ್ಣ ಮನಸ್ಥಿತಿಯ ಆಚರಣೆಯ ಅವಶ್ಯಕತೆಯನ್ನೂ ಪ್ರಸ್ತುತ ಹಡಪದ ಅಪ್ಪಣ್ಣರ ಈ ಮೇಲಿನ ವಚನ ಸಹಜ ಸರಳ ನೋಟದಲ್ಲಿ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದೆ ಎಂದು ಇಲ್ಲಿ ಧೈರ್ಯದಿಂದ ಹೇಳಬಹುದಾಗಿದೆ.
ಅಳಗುಂಡಿ ಅಂದಾನಯ್ಯ