ಶ್ರೀ ಬಸವೇಶ್ವರ ಸೇವಾ ಸಮಾಜದ ವತಿಯಿಂದ ಎತ್ತುಗಳಿಂದ ಕರಿ ಕಡಿಯುವ ಕಾರ್ಯಕ್ರಮ

ಶ್ರೀ ಬಸವೇಶ್ವರ ಸೇವಾ ಸಮಾಜದ ವತಿಯಿಂದ ಎತ್ತುಗಳಿಂದ ಕರಿ ಕಡಿಯುವ ಕಾರ್ಯಕ್ರಮ
ಕಲಬುರಗಿ: ಕಾರ ಹುಣ್ಣಿಮೇ ಹಿನ್ನಲೆ ನಗರದ ಜಗತ್ ಬಡಾವಣೆಯಲ್ಲಿ ಶ್ರೀ ಬಸವೇಶ್ವರ ಸೇವಾ ಸಮಾಜದ ವತಿಯಿಂದ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಎತ್ತುಗಳಿಂದ ಕರಿ ಕಡಿಯಲಾಯಿತು.
ಕಾರಹುಣ್ಣಿಮೆ ಪ್ರಯುಕ್ತ ನಗರದ ಜಗತ್ ಬಡಾವಣೆಯ ವಾರ್ಡ ನಂ. 34 ರಲ್ಲಿ ಶ್ರೀ ಬಸವೇಶ್ವರ ಸೇವಾ ಸಮಾಜದ ನೇತೃತ್ವದಲ್ಲಿ ರೈತರಾದ ಮಲ್ಲೇಶಪ್ಪ, ಪೀರಪ್ಪ, ಸೋಮಾ ಮತ್ತು ನಾಗೇಶ ದಂಡಪ್ಪಗೋಳ ಅವರ ಮನೆಯ ಎತ್ತುಗಳನ್ನು ವಿವಿಧ ಬಣ್ಣಗಳಿಂದ ಶೃಂಗರಿಸಿ ಸಂಪ್ರದಾಯದಂತೆ ಕರಿ ಕಡೆಯುವ ಮೂಲಕ ಸಂಭ್ರಮಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ಮಳೆಗಾಲ ಆರಂಭವಾದ ಹಿನ್ನಲೆ ರೈತರ ಹಬ್ಬವಾದ ಕಾರಹುಣ್ಣಿಮೇಯನ್ಮು ನಮ್ಮ ಪೂರ್ವಜರು ನಡೆಸುಕೊಂಡು ಬಂದತೆ ಈ ವರ್ಷವು ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಭಿಷೆಕ ಪಾಟೀಲ, ನೀಲಕಂಠರಾವ ಮೂಲಗೆ, ವಿಜಯಕುಮಾರ ಕಟ್ಟಿಮನಿ, ರಾಜೇಶ ಹಡಗಿಲಕರ್, ಸಮಿತಿ ಮುಖಂಡರಾದ ಅಪ್ಪಣ್ಣಾ ಗುಡ್ಡ, ರಾಮಣ್ಣಾ ಸೋಮಾ, ಸಿದ್ದಣ್ಣಾ ಅಪ್ಪಣ್ಣಾ ಗುಡ್ಡ, ಚನ್ನಬಸಪ್ಪ ಕಾಳಗಿ, ಶರಣಬಸಪ್ಪ ಅವಂಟಿಗಿ, ಮಹಾದೇವ ಅಂಬಣ್ಣಾಗೋಡಿ, ಶರಣಬಸಪ್ಪ ಮಹಾದೇವಪ್ಪ, ದೇವಣ್ಣಾ ಗಾಂಜಿ, ಶರಣಪ್ಪ ಬುಳ್ಳಾ, ಭೀಮರಾಯ ಕಟ್ಟಿಮನಿ ಸೇರಿದಂತೆ ಬಡಾವಣೆಯ ಅನೇಕ ಮುಖಂಡರು ಭಾಗವಹಿಸಿದ್ದರು.