ಸರ್ಕಾರಿ ನೌಕರರ ಎಲ್ಲ ಬೇಡಿಕೆ ಈಡೇರಿಸಲು ಕ್ರಮ: ಶಾಸಕ ಪ್ರಭು ಚವ್ಹಾಣ

ಸರ್ಕಾರಿ ನೌಕರರ ಎಲ್ಲ ಬೇಡಿಕೆ ಈಡೇರಿಸಲು ಕ್ರಮ: ಶಾಸಕ ಪ್ರಭು ಚವ್ಹಾಣ

ಕಮಲನಗರ ನೂತನ ಸರ್ಕಾರಿ ನೌಕರರ ಪದಗ್ರಹಣ

 ಸರ್ಕಾರಿ ನೌಕರರ ಎಲ್ಲ ಬೇಡಿಕೆ ಈಡೇರಿಸಲು ಕ್ರಮ: ಶಾಸಕ ಪ್ರಭು ಚವ್ಹಾಣ

ಕಮಲನಗರ ತಾಲ್ಲೂಕಿನ ಸರ್ಕಾರಿ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕವಾಗಿ ಪ್ರಯತ್ನಿಸುವೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಕಮಲನಗರ ಪಟ್ಟಣದ ಸಂಗಮೇಶ್ವರ ಮಂಗಳ ಕಾರ್ಯಾಲಯದಲ್ಲಿ ಮೇ.30ರಂದು ಏರ್ಪಡಿಸಿದ್ದ ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ಮಹಿಳಾ ದಿನಾಚರಣೆ ಮತ್ತು ನೌಕರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೌಕರರ ಸಂಘಕ್ಕೆ ಭವನ ನಿರ್ಮಿಸಿಕೊಡುವುದು, ಕ್ರೀಡಾಂಗಣ ನಿರ್ಮಾಣ ಮತ್ತು ತಾಲೂಕು ಕೇಂದ್ರಗಳಲ್ಲಿ ಇಲಾಖೆ ಕಚೇರಿಗಳ ಸ್ಥಾಪನೆಯಂತಹ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಸಂಘದ ಕೆಲಸ ಕಾರ್ಯಗಳಿಗೆ ಅನುಕೂಲವಾಗಲು ತಾತ್ಕಾಲಿಕವಾಗಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಖಾಲಿಯಿರುವ ಒಂದು ಕೋಣೆಯ ವ್ಯವಸ್ಥೆ ಮಾಡಿಕೊಡುವಂತೆ ಸ್ಥಳದಲ್ಲಿದ್ದ ತಾಲ್ಲೂಕು ವೈದ್ಯಾಧಿಕಾರಿಗೆ ತಿಳಿಸಿದರು. ಅಲ್ಲದೇ ಸಂಘದ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಸರ್ಕಾರಿ ನೌಕರರು ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗರ ತಲುಪಿಸಲು ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಬೇಕು. ತಾಲ್ಲೂಕಿನ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದೇನೆ. ಸರ್ಕಾರಿ ನೌಕರರು ಸರಿಯಾಗಿ ಕೆಲಸ ಮಾಡುವ ಮೂಲಕ ಅಭಿವೃದ್ಧಿ ಕೆಲಸಗಳಿಗರ ಕೈಜೋಡಿಸಬೇಕು ಎಂದರು. ತಾಲ್ಲೂಕಿನ ಶಿಕ್ಷಕರ ಪ್ರಸಕ್ತ ಸಾಲಿನ ಸಾಧನೆ ತೀವ್ರ ಕಳಪೆಯಾಗಿದೆ. ವಿದ್ಯಾರ್ಥಿಗಳ ಫಲಿತಾಂಶ ವೃದ್ಧಿಯಾಗುವ ಬದಲು ಕುಸಿದಿದೆ. ಫಲಿತಾಂಶ ಸುಧಸರಣೆಗೆ ಪ್ರಮಾಣಿಕ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುನೀಲ ಕಸ್ತೂರೆ ಪ್ರಾಸ್ತಾವಿಕ ಮಾತನಾಡಿ ಕಮಲನಗರ ತಾಲ್ಲೂಕಿನ ನೌಕರರ ಸಮಸ್ಯೆಗಳು ಮತ್ತು ಆಗಬೇಕಾದ ಕೆಲಸಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಸಾಹಿತಿ ಪಾರ್ವತಿ ಸೋನಾರೆ ಮಾತನಾಡಿದರು. 

ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಪಂ ಇಒ ಮಾಣಿಕರಾವ ಪಾಟೀಲ, ಗ್ರಾಪಂ ಅಧ್ಯಕ್ಷೆ ಸುಶೀಲಾಬಾಯಿ ಮಹೇಶ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲಪ್ಪ ಡಿ.ಕೆ, ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ವಿದ್ಯಾಸಾಗರ ಪಾಂಚವರೆ, ರಾಜಕುಮಾರ ವಡಗಾವೆ, ಶಾಂತಕುಮಾರ ಗುಡಮೆ, ದತ್ತಾತ್ರೆ ಮಡಿವಾಳ, ನವನಾಥ ಗಾಯಕವಾಡ, ಸಂಗೀತಾ ಸಜ್ಜನಶೆಟ್ಟಿ, ಮುಜಿಬುರ್‌ ರೆಹಮಾನ್, ಡಾ.ಫೈಜಲ್, ಡಾ.ಸಂಗಮೇಶ್ವರ, ಸಂಜುಕುಮಾರ ಮೇತ್ರೆ, ಗೋಪಾಲಕೃಷ್ಣ ರಾಜೋಳಕರ್‌, ಶಿವಲಿಂಗಪ್ಪ, ಔರಾದ್ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪಂಡರಿ ಆಡೆ, ಕಸಾಪ ತಾಲೂಕಾಧ್ಯಕ್ಷ ಪ್ರಶಾಂತ ಮಠಪತಿ, ಡಾ.ಪವನ ನಿಡೋದಾ, ಧೋಂಡಿಬಾ, ವಾಗಂಭರ ಗಾಯಕವಾಡ, ಶೈಲೇಶ ಮಾಳಗೆ, ರೇಣುಕಾ, ಶೈಲಶ್ರೀ, ಬನಶಂಕರಿ, ಲಕ್ಷ್ಮಿ, ಸವಿತಾ ರಾಂಪುರೆ, ದಯಾನಂದ ರಾಜೋಳೆ, ಪ್ರಭಾವತಿ, ಭಾಗ್ಯಶ್ರೀ ಬಿರಾದಾರ, ಮಾದಪ್ಪ ಮಡಿವಾಳ, ಶ್ರೀಕಾಂತ ರಾಠೋಡ, ಶಿವಾನಂದ ನವಾಡೆ ಸೇರಿ ಇತರರಿದ್ದರು. ರಾಜಕುಮಾರ ವಡಗಾವೆ ಸ್ವಾಗತಿಸಿದರು. ರೋಹಿದಾಸ ಮೇತ್ರೆ ನಿರೂಪಿಸಿದರು.