ಛಲವಾದಿ ನಾರಾಯಣಸ್ವಾಮಿ , ರವಿಕುಮಾರ ಸದಸ್ಯತ್ವ ರದ್ದುಪಡಿಸುವಂತೆ ಆಗ್ರಹಿಸಿ ,ರಾಜ್ಯಪಾಲರಿಗೆ ಮನವಿ ಸಲ್ಲಿಕೆ

ಚಿಂಚೋಳಿ : ಸರ್ವ ಧರ್ಮ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ

ಛಲವಾದಿ ನಾರಾಯಣಸ್ವಾಮಿ , ರವಿಕುಮಾರ ಸದಸ್ಯತ್ವ ರದ್ದುಪಡಿಸುವಂತೆ ಆಗ್ರಹಿಸಿ ,ರಾಜ್ಯಪಾಲರಿಗೆ ಮನವಿ ಸಲ್ಲಿಕೆ

ಚಿಂಚೋಳಿ :ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಐಟಿಬಿಟಿ ಮತ್ತು ಕಲಬುರಗಿ ಉಸ್ತುವಾರಿ ಸಚಿವ ಪ್ರೀಯಾಂಕ್‌ ಖರ್ಗೆ ಅವರು ಸಂವಿಧಾನದ ಮೂಲ ಪರಿಕಲ್ಪನೆಯಂತೆ ಎಲ್ಲಾ ಜನಾಂಗದ ಕಲ್ಯಾಣಕ್ಕಾಗಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿರುವುದು ರಾಜ್ಯ ಬಿಜೆಪಿ ಪಕ್ಷದ ನಾಯಕರಿಗೆ ಸಹಿಸಿಕೊಳ‍್ಳಲು ಆಗದೇ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಖರ್ಗೆ ವಿರುದ್ಧ ಅಸಂವಿಧಾನಿಕ ಪದ ಉಪಯೋಗಿಸಿ ನಿಂದನೆ ಮಾಡಿರುವುದು ಖಂಡನೀಯ. ಅವರ ಸದಸ್ಯತ್ವ ರದ್ದುಪಡಿಸಬೇಕೆಂದು ಆಗ್ರಹಿಸಿ, ಚಿಂಚೋಳಿ ಸರ್ವ ಧರ್ಮ ಸಮನ್ವಯ ಸಮಿತಿ ಅಧ್ಯಕ್ಷ ಅಬ್ದುಲ್ ಬಾಷಿದ್ ನೇತೃತ್ವದಲ್ಲಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಬಳಿಕ ಮಾತನಾಡಿ, ಅಭಿವೃದ್ಧಿಗೆ ಹೆಸರಾಗಿರುವ ಸಚಿವ ಪ್ರೀಯಾಂಕ್ ಖರ್ಗೆ ಅವರನ್ನು ಅಸಂವಿಧಾನಿಕ ನಿಂದನೆಗೊಳಿಸಿ, ಅವರ ಬೆಳವಣಿಗೆ ಕುಗ್ಗಿಸುವ ಕೆಲಸ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ನಾಯಕರು ನಡೆಸುತ್ತಿದ್ದಾರೆ. ಖರ್ಗೆ ಅವರು ದಲಿತ ಸಮುದಾಯದಿಂದ ಬಂದು ಎಲ್ಲಾ ಜಾತಿ ಜನಾಂಗದವರಿಂದ ಜನಮಣನೆ ಪಡೆಯುತ್ತಿರುವದನ್ನು ಬಿಜೆಪಿಗರಿಗೆ ಸಹಿಸಿಕೊಳ್ಳಲು ಸಾಧ್ಯವಾಗದೇ, ಅವರ ವಿರುದ್ಧ ಹೋರಾಟಗಳು ನಡೆಸುತ್ತಿರುವ ಛಲವಾದಿ ನಾರಾಯಣಸ್ವಾಮಿ ಅವರ ಪರಿಷತ್ ಸದಸ್ಯತ್ವವನ್ನು ರದ್ದುಗೊಳಿಸಿ ಅಮಾನತುಗೊಳಿಸಬೇಕು. ಆಪರೇಷನ್‌ ಸಿಂಧೂರ ನೇತೃತ್ವ ವಹಿಸಿ, ಪಾಕಿಸ್ತಾನದ ಉಗ್ರರನ್ನು ಸದೇ ಬಡಿದಿರುವ ಸೇನಾಧಿಕಾರಿ ಸೊಫೀಯಾ ಖುರೇಶಿ ಹಾಗೂ ಉತ್ತಮ ಆಡಳಿತ ಮೂಲಕ ಸೇವೆ ಸಲ್ಲಿಸುತ್ತಿರುವ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ರವರು ಮುಸ್ಲಿಂ ಜನಾಂಗಕ್ಕೆ ಸೇರಿರುವ ಕಾರಣಕ್ಕೆ ಪಾಕಿಸ್ತಾನಿದಿಂದ ಬಂದಿದ್ದಾರೆಂದು ದಕ್ಷ ಮಹಿಳೆಯರನ್ನು ನಿಂದನೆ ಮಾಡಿ ಅವಮಾನಿಸಿರುವ ಪರಿಷತ್ ಸದಸ್ಯ ಎನ್. ರವಿಕುಮಾರ ರವರನ್ನು ಪರಿಷತ್ ಸದಸ್ಯತ್ವವನ್ನು ರದ್ದುಪಡಿಸಿ, ಕ್ರೀಮಿನಲ್ ಪ್ರಕರಣ ದಾಖಲಿಸಬೇಕೆಂದು ಬಾಷಿದ್ ಆಗ್ರಹಿಸಿದರು.

ಕೋಲಿ ಸಮಾಜದ ರಾಜ್ಯಕಾರ್ಯದರ್ಶಿ ಲಕ್ಷ್ಮಣ ಆವಂಟಿ, ಬಸವರಾಜ ಮಲಿ, ಆನಂದಕುಮಾರ ಟೈಗರ್, ಆರ್ ಗಣಪತರಾವ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸೈಯದ್ ಹಾದಿ ಸಾಬ್, ಸೈಯದ್ ಶಬ್ಬೀರ್, ಸಂತೋಷ ಗುತ್ತೇದಾರ, ಅಹ್ಮದ್ ಭಾಗವಾನ, ನಾಗೇಶ ಗುಣಾಜಿ, ಸುಭಾಷಚಂದ್ರ ಯಂಪಳ್ಳಿ, ಜಗನ್ನಾಥ ಗುತ್ತೇದಾರ, ಫರೀದ್, ಸೋಮಶೇಖರ ಕರಕಟ್ಟಿ ಅವರು ಇದ್ದರು.