ಸರ್ಕಾರ ಮೆರಿಟ್ ಪದ್ಧತಿಯನ್ನು ಕೈ ಬಿಟ್ಟು ಅತಿಥಿ ಶಿಕ್ಷಕರ ನೇಮಕಾತಿಗೆ ಮೊದಲನೆ ಆದ್ಯತೆಗೆ ಒತ್ತಾಯ

ಸರ್ಕಾರ ಮೆರಿಟ್ ಪದ್ಧತಿಯನ್ನು ಕೈ ಬಿಟ್ಟು ಅತಿಥಿ ಶಿಕ್ಷಕರ ನೇಮಕಾತಿಗೆ ಮೊದಲನೆ ಆದ್ಯತೆಗೆ ಒತ್ತಾಯ ....
ಜೇವರ್ಗಿ ,
ಶೈಕ್ಷಣಿಕ ವರ್ಷದ ಆರಂಭದಲ್ಲಿ ಆಯಾ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಎಂದು ಅತಿಥಿ ಶಿಕ್ಷಕ ಸಂಘದ ಯಡ್ರಾಮಿ ತಾಲೂಕ ತಾಲೂಕು ಘಟಕ ಅಧ್ಯಕ್ಷರಾದ ಶರಣು ಎಮ್ ಪೂಜಾರಿ ಅವರು ಸರ್ಕಾರದ ವಿರುದ್ಧ ಒತ್ತಾಯಿಸಿದರು ಅದೇ ರೀತಿಯಾಗಿ ಗಣನೀಯ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗಳನ್ನು ಖುಸಿಯುತ್ತಿರುವ ಪರಿಣಾಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಟ್ಟಣದ ಕಡೆ ಮುಖ ಮಾಡಿರುವ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದೆ ಇದನ್ನು ರಾಜ್ಯ ಸರ್ಕಾರ ಕೂಡಲೇ ಸರಿಪಡಿಸಬೇಕು ಅದೇ ರೀತಿಯಾಗಿ ಅತಿಥಿ ಶಿಕ್ಷಕರ ಗೌರವ ಧನವನ್ನು 25,000 ಕ್ಕೆ ಹೆಚ್ಚಿಸಬೇಕು ಅದೇ ರೀತಿಯಾಗಿ ರಾಜ್ಯ ಸರ್ಕಾರವು ಮೆರಿಟ್ ಪದ್ಧತಿಯನ್ನು ಕೈ ಬಿಟ್ಟು ಅತಿಥಿ ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡಬೇಕು ಹತ್ತು ವರ್ಷಗಳಿಗಿಂತ ಹೆಚ್ಚು ಸೇವೆ ನೀಡಿದ ಅತಿಥಿ ಶಿಕ್ಷಕರನ್ನು ಕಾಯಂ ಆಗಿ ನೇಮಕಾತಿ ಮಾಡಿಕೊಳ್ಳಬೇಕೆಂದು ಅತಿಥಿ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಶರಣು ಎಮ್ ಪೂಜಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು
ವರದಿ ಜೆಟ್ಟೆಪ್ಪ ಎಸ ಪೂಜಾರಿ