ಮುಂಗಾರು ಬೆಳೆ ಬೀಜೊಪಚಾರ ಅತ್ಯಗತ್ಯ

ಮುಂಗಾರು ಬೆಳೆ ಬೀಜೊಪಚಾರ ಅತ್ಯಗತ್ಯ

ಮುಂಗಾರು ಬೆಳೆ ಬೀಜೊಪಚಾರ ಅತ್ಯಗತ್ಯ

ಕಲ್ಬುರ್ಗಿ ಜಿಲ್ಲೆಯಲ್ಲಿ ತೊಗರಿ, ಉದ್ದು, ಹೆಸರು, ಸೋಯಾ, ಹತ್ತಿ, ಕಬ್ಬು ಬೆಳೆಯಲಾಗುತ್ತಿದ್ದು ಭೂಮಿ ಇಂದ ಬರುವ ಹುಳ,ನೆಟೆ ರೋಗ ಹತೋಟಿಗೆ ಟ್ರಿಕೋಡೆರ್ಮ ಜೈವಿಕ ಬಿಜೋಪಚಾರ, ಜಮೀನಿಗೆ ಏರೆ ಹುಳ ಗೊಬ್ಬರ ಜೊತೆ ಮೆಟರೈಝಿಯಂ ಬೆರೆಸಿ ಭೂಮಿಗೆ ಸೇರಿಸುವಂತೆ ಬೆಂಗಳೂರು ಇಂಟೆಗ್ರಟೆಡ್ ಪೆಸ್ಟ್ ಮ್ಯಾನೇಜ್ಮೆಂಟ್ ಪ್ರದಾನ ವಿಜ್ಜಾನಿ ಹಾಗೂ ಜಂಟಿ ನಿರ್ದೇಶಕರು ಡಾ. ಎ. ಸಿದ್ದಿಕಿ ತಿಳಿಸಿದರು. ಕಲ್ಬುರ್ಗಿ ಜಿಲ್ಲಾ ಕೃಷಿ ತರಬೇತಿಯಲ್ಲಿ ನಡೆದ ಬೇಜಾಪಚಾರ ತರಬೇತಿ ಕಾರ್ಯಾಗಾರದಲ್ಲಿ ಸಹಾಯಕ ಕೃಷಿ ನಿರ್ದೇಶಕರು ಡಾ. ಅನಿಲ್ ರಾಠೋಡ್ ತರಬೇತಿ ಉದ್ದೇಶ ಹಾಗೂ ಸರ್ಕಾರಿ ಯೋಜನೆ ಮಾಹಿತಿ ನೀಡಿದರು. ತೊಗರಿ ಬೀಜಕ್ಕೆ ಬೆಲ್ಲದ ಪಾಕ ನೀರು ಚಿಮುಕಿಸಿ ನಂತರ ಟ್ರಿಕೋಡೆರ್ಮ ಉಪಕಾರಿ ಜೈವಿಕ ಶಿಲಿಂದ್ರ ಬೆರೆಸಿ ಬೀಜ ಉಪಚಾರ ಪ್ರತ್ಯಕ್ಷಕೆ ನೀಡಲಾಯಿತು. ಕೆ ವಿ ಕೆ ಕೃಷಿ ವಿಜ್ಜಾನಿ ಡಾ. ಜಹೀರ್ ಅಹಮದ್ ವಿಕಸಿತ ಕೃಷಿ ಸಂಕಲ್ಪ ಆಂದೋಲನ ಉದ್ದೇಶ ಹಾಗೂ ಹೆಸರು, ಉದ್ದು, ತೊಗರಿ, ಕಬ್ಬು ಸಸ್ಯ ರೋಗ ಹತೋಟಿ ಮಾಹಿತಿ ನೀಡಿದರು. ಆತ್ಮ ಯೋಜನೆಯ ಉದ್ದೇಶ ಹಾಗೂ ಬೆಳೆ ವಿಮೆ ಮಾಹಿತಿಯನ್ನು ಬಿ ಟಿ ಎಮ್ ಶ್ರೀ ಶಿವರಾಯ ನೀಡಿದರು. ಕೃಷಿ ಇಲಾಖೆ ಅಧಿಕಾರಿಗಳಾದ ಶ್ರೀಮತಿ ಸುಜಾತ, ಶ್ರೀಮತಿ ನೀಲಾ, ಶ್ರೀಮತಿ ಯಾಸ್ಮಿನ್, ಜೈವಿಕ ಸಂಶೋಧನೆ ಬೆಂಗಳೂರು ವಿಜ್ಜನಿಗಳು ಡಾ ವಿಕಾಸ್, ದಿವ್ಯ ತಾಂತ್ರಿಕ ಅಧಿಕಾರಿಗಳು, ರೈತ, ರೈತ ಮಹಿಳೆಯರು ಉಪಸ್ಥಿತರಿದ್ದರು