ಪದವಿಪೂರ್ವ ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಕರಿಗೆ ಸನ್ಮಾನ

ಪದವಿಪೂರ್ವ ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಕರಿಗೆ ಸನ್ಮಾನ
ಕಲಬುರ್ಗಿ: ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ವಿಭಾಗಕ್ಕೆ ಕಲಬುರ್ಗಿ ಜಿಲ್ಲೆಯ ಉಪನಿರ್ದೇಶಕರಾಗಿ ನೇಮಕಗೊಂಡಿರುವ ಸುರೇಶ್ ಅಕ್ಕಣ್ಣ ಅವರಿಗೆ ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಕಲಬುರ್ಗಿಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಲಬುರ್ಗಿ ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ನಂದಗಾಂವ, ಪ್ರಧಾನ ಕಾರ್ಯದರ್ಶಿಗಳಾದ ಗುಂಡಯ್ಯ ಸ್ವಾಮಿ, ಕಾರ್ಯಾಧ್ಯಕ್ಷರಾದ ಲಕ್ಷ್ಮಿಕಾಂತ್, ರಾಜ್ಯ ಕಾರ್ಯದಕ್ಷರಾದ ಮಲ್ಲಿಕಾರ್ಜುನ ಆನಂದಕರ ಉಪಾಧ್ಯಕ್ಷರಾದ ಅನಂತ ರಾಜಾಪೂರ, ಎಂ ವೀರನಗೌಡ, ಮಹಿಳಾ ಪ್ರತಿನಿಧಿಗಳಾದ ಶಿಲ್ಪಾ ಅಲ್ಲದ, ಮೀನಾಕ್ಷಿ ಪಾಟೀಲ್,ಡಾ ಸೇಲ್ವಿ ದೇಶಮಾನೆ, ಸುಧಾ ಎಲ್ಲಾ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರು ಉಪನ್ಯಾಸಕರು ಹಾಜರಿದ್ದರು