ಅಖಂಡ ಹರಿನಾಮ ಸಪ್ತಾಹ ಮತ್ತು ಜ್ಞಾನೇಶ್ವರಿ ಪಾರಾಯಣ ಸಮಾರಂಭ ಭೀತಿಪತ್ರ ಬಿಡುಗಡೆ

ಅಖಂಡ ಹರಿನಾಮ ಸಪ್ತಾಹ ಮತ್ತು ಜ್ಞಾನೇಶ್ವರಿ ಪಾರಾಯಣ ಸಮಾರಂಭ ಭೀತಿಪತ್ರ ಬಿಡುಗಡೆ
ಕಮಲನಗರ ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಪತ್ರಿ ವರ್ಷದಂತೆ ಈ ವರ್ಷವೂ 53ನೇ ವರ್ಷದ ಅಖಂಡ ಹರಿನಾಮ ಸಪ್ತಾಹ ಮತ್ತು ಜ್ಞಾನೇಶ್ವರಿ ಪಾರಾಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀ ಸುಕ್ಷೇತ್ರದ ಶ್ರೀ ಸದ್ಗುರು ಹರಿನಾಥ ಮಹಾರಾಜರ ಕೃಪಾಶೀರ್ವಾದದಿಂದ ಹಾಗೂ ಶ್ರೀ.ಹ. ಭ. ಪ.ಏಕನಾಥ ಮಹಾರಾಜ ಹಂಡೆ ಪಂಢರಪುರ ಅವರ ಅಧ್ಯಕ್ಷತೆಯಲ್ಲಿ ಇಂದಿನಿಂದ (20/04/2025) ಭಾನುವಾರ (27/04/2025) ವರೆಗೆ ಅಖಂಡ ಹರಿನಾಮ ಸಪ್ತಾಹ ಜ್ಞಾನೇಶ್ವರಿ ಪಾರಾಯಣ ಸೋಹಾಳವನ್ನು ಆಚರಿಸಲಾಗುತ್ತಿದೆ.
ಪ್ರತಿ ದಿನ ಬೆಳಗ್ಗೆ 4 ರಿಂದ 6 ಕಾಕಡ ಭಜನೆ, 7 ರಿಂದ 10 ಜ್ಞಾನೇಶ್ವರಿ ಪಾರಾಯಣ, ಮಧ್ಯಾಹ್ನ 10 ರಿಂದ 12 ರವರೆಗೆ ಶ್ರೀ ತುಕೋಭಾರಾಯ ಗಾಥಾ ಭಜನೆ, 5 ರಿಂದ 6 ಪ್ರಚನ, ಸಾಯಂಕಾಲ 6 ರಿಂದ8 ಹರಿಪಾಟ್ , ರಾತ್ರಿ 9 ರಿಂದ 12 ಹರಿಕೀರ್ತನೆ 12 ರಿಂದ 4 ರವರೆಗೆ ಹರಿಜಾಗರ . ದೈನಂದಿನ ಕಾರ್ಯಕ್ರಮಗಳು ಜರುಗುತ್ತವೆ.
ಹ.ಭ.ಪ.ಮಧುಕರ ಮಹಾರಾಜ ಹಂಡೆ,ಹ.ಭ.ಪ. ಪ್ರವೀಣ ಮಹಾರಾಜ ಹೊಳೆಸಮುದ್ರ, ಹ.ಭ.ಪ. ಮೌಲಿ ಮಹಾರಾಜ ಹಂಡೆ ಇವರ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಜರಗಲಿದೆ
: ಕೀರ್ತನಕಾರರಾದ:ಹ. ಭ.ಪ.ಭಾಗವತ್ ಮಹಾರಾಜ್ ಹಂಡೆ,ಹ.ಭ.ಪ.
ದತ್ತ ಮಹಾರಾಜ ತಂಡೂಲ್ವಾಡಿಕರ್,ಹ.ಭ.ಫ.ಶಿವಾಜಿ ಮಹಾರಾಜ ಹ.ಭ.ಪ.ಶೌಕತ ಶೇಖ್ ,ಹಭಪ ಡಾ.ಜಲಾಲ್ ಮಹಾರಾಜ (ಕರಂಜಿಕರ್)ಹ.ಭ.ಪ.ಮಾವುಲಿ ಮಹಾರಾಜ, ಧರ್ಮಕೀರ್ತಿ ಮಹಾರಾಜ,ಹಭಪ ರಾಜೇಶ್ ಮಹಾರಾಜ, ಹ.ಭ.ಪ.ಏಕನಾಥ ಮಹಾರಾಜ ಹಂಡೆ ಪ್ರಮುಖ ಕೀರ್ತನ ಕಾರು ಭಾಗವಹಿಸುವರು.
ಪ್ರವಚನಕಾರರಾದ ಹ.ಭ.ಪ. ಜ್ಞಾನೇಶ್ವರ್ ಮಹಾರಾಜ್, ಹ.ಭ.ಪ. ಅನಂತರಾವ ಬಾಜಿ ಪಳೆ, ಹ.ಭ.ಪ. ರಘುನಾಥ್ ಮಹಾರಾಜ್,ಹ.ಭ.ಪ. ಜಾಲಿಂದ್ರ ಮಹಾರಾಜ್,ಹ.ಭ.ಪ.ಯುವರಾಜ ಮಹಾರಾಜ್, ಪರಮಪೂಜ್ಯ ೧೦೮ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಜಿ ಇವರ ಪ್ರವಚನ ಕಾರ್ಯಕ್ರಮವನ್ನು ನಡೆಯುತ್ತವೆ.
ಈ ಸಂದರ್ಭದಲ್ಲಿ ಭಾಗವಂತ ಹಂಡೆ, ಪ್ರವೀಣ್ ಮಹಾರಾಜ,ಶ್ರೀ ಮಾಧವರಾವ್ ಯೆಂಕೆ, ಶ್ರೀ ಪ್ರಕಾಶರಾವ್ ಕದಂ,ವಿಠಲರಾವ ಬೀರಾದಾರ, ಹಮೋನಿಯಂ ಗೋಪಾಲ್ ಸೂರ್ಯವಂಶಿ , ಶಂಕರರಾವ್ ಪೂಜಾರಿ, ಮಧುಕರ ಶಿಂಧೆ, ಚಂದ್ರಕಾಂತ ಪಂಚಾಲ್, ಸೂರ್ಯಕಾಂತ್ ಕಾಡೊದೆ, ಜ್ಞಾನೋಬ ಶಿಂಧೆ,ದತ್ತಾ ಜಾಧವ, ಲಕ್ಷ್ಮಣ್ ಪಾಟೀಲ್ ಮಾಧುರಾವ ದನ್ನ, ಸುಖದೇವ್ ಬಾಲ್ಕೆ,ವಿಲಾಸರಾವ ಜಾಧವ. ಉಪಸ್ಥಿತಿ ಇದ್ದರು.
ಈ ಕಾರ್ಯಕ್ರಮಕ್ಕೆ ಹೊಳೆಸಮುದ್ರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಲಿದ್ದಾರೆ.