ಹ್ಯಾಂಗಾನ ಗುರುವು ಹ್ಯಾಂಗಾನೋ ತತ್ವಪದ ಪುಸ್ತಕ ಬಿಡುಗಡೆ

ಹ್ಯಾಂಗಾನ ಗುರುವು ಹ್ಯಾಂಗಾನೋ ತತ್ವಪದ ಪುಸ್ತಕ ಬಿಡುಗಡೆ

ಮುರಗೆಪ್ಪ ಆರ್.ಹೆಚ್ ಹಣಮನಹಳ್ಳಿ 

ಸೇಡಂ : ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಸೇಡಂ ಹಾಗೂ ಕೊಡೇಕಲ್ಲ ಚನ್ನಬಸವಣ್ಣ ಅಭಿಮಾನಿ ಬಳಗ ಸಹಯೋಗದಲ್ಲಿ   ಮುರಗೆಪ್ಪ. ಆರ್. ಹೆಚ್. ಹಣಮನಹಳ್ಳಿ ಅವರ ರಚಿಸಿದ ಹ್ಯಾಂಗಾನ ಗುರುವು ಹ್ಯಾಂಗಾನೋ ಕೃತಿಯ ಲೋಕಾರ್ಪಣೆಯನ್ನು ದಿನಾಂಕ ೦೩-೦೮-೨೦೨೪.ರಂದು ಮುಂಜಾನೆ ೧೧: ೩೦ ಕ್ಕೆ ಸೇಡಂ ನಗರದ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದಾರೆ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ,ಕಲಬುರಗಿ ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರಾದ  ಅಜಯಕುಮಾರ ಅವರು ಕಾರ್ಯಕ್ರಮ ಉದ್ಘಾಟಿಸುವರು ,  ಸೇಡಂನ ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷರಾದ  ಪ್ರಭಾಕರ ಜೋಶಿರವರು ಪುಸ್ತಕ ಬಿಡುಗಡೆಮಾಡಲಿದ್ದಾರೆ, ಅಜೀಂ ಪ್ರೇಮಜಿ ಫೌಂಡೇಷನ್ ತಾಲೂಕಿನ ಸಂಯೋಜಕರಾದ ಗಂಗಾಧರ ಸ್ವಾಮಿ ರವರು ಪುಸ್ತಕ ಪರಿಚಯಸುವರು. 

ಹಿರಿಯ ಸಾಹಿತಿಗಳಾದ ಲಿಂಗಾರೆಡ್ಡಿ ಶೇರಿ ,ಸೇಡಂ.ಸೇಡಂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರುತಿ ಹುಜರಾತಿ ,ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶಂಕರಲಿಂಗಪ್ಪ ,ಹಣಮನಹಳ್ಳಿ ವೆಂಕಟರೆಡ್ಡಿ ಮಾಲಿ ಪಾಟೀಲ ,.  ಕ. ಸಾ. ಪ. ಸೇಡಂ ತಾಲೂಕಾ ಅಧ್ಯಕ್ಷರಾದ ಸುಮಾ.ಎಲ್ ಚಿಮ್ಮನಚೋಡಕರ್,ಶಿವಶಂಕರಯ್ಯ ಸ್ವಾಮಿ ತಾಲೂಕಾ ಅಧ್ಯಕ್ಷರು ಕ.ರಾ.ಸ.ನೌ.ಸಂ.ಸೇಡಂ.ಬಸವರಾಜ ಸಾಗರ ತಾಲೂಕಾ ಅಧ್ಯಕ್ಷರು ಕ.ರಾಪ್ರಾ.ಶಾ.ಶಿ.ಸಂಘ ಸೇಡಂ.  ರವಿರಾಜ ಆವಂಟಿ. ನಿರ್ದೇಶಕರು. ಕ. ರಾ. ಸ. ನೌ. ಸಂ. ಸೇಡಂ. ರವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಮುರಗೆಪ್ಪ ಆರ್. ಹೆಚ್. ಹಣಮನಹಳ್ಳಿ ಅವರು ಉಪಸ್ಥಿತಿ ವಹಿಸಲಿದ್ದಾರೆ,

    ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಅಧ್ಯಕ್ಷರಾದ ಸಿದ್ದಪ್ಪ ತಳಳ್ಳಿ ರವರು ಅಧ್ಯಕ್ಷತೆವಹಿಸಲಿದ್ದಾರೆ ,ಹಣಮಂತ ಮುಖ್ಯಗುರುಗಳು ಸ. ಹಿ. ಪ್ರಾ. ಶಾಲೆ ಜಾಕನಪಲ್ಲಿರವರ ತಂಡದವರಿಂದ ಸಂಗೀತ ಸೇವೆ ನಡೆಸಿಕೊಡುವರು. ಲಕ್ಷ್ಮಣ ರಂಜೋಳಕರ ನಿರೂಪಣೆ ಮಾಡಲಿದ್ದಾರೆ ,ಸೇಡಂನ

ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಕಾರ್ಯದರ್ಶಿಗಳಾದ ಮಹಿಪಾಲರೆಡ್ಡಿ ಮುನ್ನೂರುರವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.