ಮಹಾಕಾವ್ಯ ‘ಬುದ್ಧ ಭಾರತ’ ಲೋಕಾರ್ಪಣೆ ಹಾಗೂ ಪ್ರೊ. ಕೆ.ಎಂ. ಭಾಸ್ಕರ್ ಅವರಿಗೆ ಅಭಿನಂದನಾ ಸಮಾರಂಭ

ಮಹಾಕಾವ್ಯ ‘ಬುದ್ಧ ಭಾರತ’ ಲೋಕಾರ್ಪಣೆ ಹಾಗೂ ಪ್ರೊ. ಕೆ.ಎಂ. ಭಾಸ್ಕರ್ ಅವರಿಗೆ ಅಭಿನಂದನಾ ಸಮಾರಂಭ

 ಮಹಾಕಾವ್ಯ ‘ಬುದ್ಧ ಭಾರತ’ ಲೋಕಾರ್ಪಣೆ ಹಾಗೂ ಪ್ರೊ. ಕೆ.ಎಂ. ಭಾಸ್ಕರ್ ಅವರಿಗೆ ಅಭಿನಂದನಾ ಸಮಾರಂಭ

ಕಲಬುರಗಿ: ಸಿರಿಗನ್ನಡ ವೇದಿಕೆ (ರಿ) ಜಿಲ್ಲಾ ಘಟಕ ಕಲಬುರಗಿ ಹಾಗೂ ಕರ್ನಾಟಕ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು, ಕಲಬುರಗಿ, ಸಾಕ್ಷಿ ಪ್ರತಿಷ್ಠಾನ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಪ್ರೊ. ಕೆ.ಎಂ. ಭಾಸ್ಕರ್ ಅವರ ಮಹಾಕಾವ್ಯ ‘ಬುದ್ಧ ಭಾರತ’ ಲೋಕಾರ್ಪಣೆ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಎಂ. ಭಾಸ್ಕರ್ ಅವರ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.

ಆಗಸ್ಟ್ 16ರಂದು ಬೆಳಿಗ್ಗೆ 10-30 ಗಂಟೆಗೆ ಕಲಬುರಗಿಯ , ನ್ಯೂ ಆರ್.ಟಿ.ಒ. ಹತ್ತಿರ ರಂಗಾಯಣದಲ್ಲಿ ಕಾರ್ಯಕ್ರಮ ನಡೆಯಲಿದೆ.

 ಕಾರ್ಯಕ್ರಮದ ಸಾನ್ನಿಧ್ಯವನ್ನು ಚಾಮರಾಜನಗರ ಪೂಜ್ಯ ಶ್ರೀ ಧಮ್ಮತಿಸ್ಸ ಬಂತೆಜಿ ವಹಿಸಲಿದ್ದು, 

ಕುಲಪತಿಗಳಾದ ಡಾ. ಶಶಿಕಾಂತ ಉಡಿಕೇರಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮಹಾಕಾವ್ಯ ‘ಬುದ್ಧ ಭಾರತ’ವನ್ನು ಡಾ. ಬಸವರಾಜ ಜಿ. ಕೋನೇಕ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಮಹಾಕಾವ್ಯದ ಕುರಿತು ಪ್ರೊ. ಎ. ವಿಶ್ವನಾಥ್ ಕವಿ-ವಿಮರ್ಶಕರು ಮಾತನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ಅಪ್ಪಾರಾವ್ ಆಕ್ಕೋಣೆ, ಡಾ. ಜಯದೇವಿ ಗಾಯಕವಾಡ ಹಾಗೂ ಇತರರು ಭಾಗವಹಿಸಲಿದ್ದಾರೆ. ಉತ್ಸವದ ಅಧ್ಯಕ್ಷತೆಯನ್ನು ಪ್ರೊ. ಕೆ.ಎಂ. ಭಾಸ್ಕರ್ ವಹಿಸಲಿದ್ದು, ಅಭಿನಂದನೆಯನ್ನು ಡಾ. ಹನುಮಂತರಾವ್ ಬಿ. ದೊಡ್ಮನಿ ನೆರವೇರಿಸಲಿದ್ದಾರೆ.

ಸಮಾರಂಭದಲ್ಲಿ ಡಾ. ಗವಿಸಿದ್ದಪ್ಪ ಎಚ್. ಪಾಟೀಲ ಹಾಗೂ ಶ್ರೀ ಸುರೇಶ ಕಾನೇಕರ್ ಅವರು ವಿಶೇಷವಾಗಿ ಉಪಸ್ಥಿತರಿರುವರು. ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.