ಮತದಾನದಿಂದ ಪ್ರಜಾಪ್ರಭುತ್ವದ ಯಶಸ್ವಿಗೆ : ನೀಲಪ್ರಭಾ

ಮತದಾನದಿಂದ ಪ್ರಜಾಪ್ರಭುತ್ವದ ಯಶಸ್ವಿಗೆ : ನೀಲಪ್ರಭಾ
ಮತದಾನದಿಂದ ಪ್ರಜಾಪ್ರಭುತ್ವದ ಯಶಸ್ವಿಗೆ : ನೀಲಪ್ರಭಾ

ಮತದಾನದಿಂದ ಪ್ರಜಾಪ್ರಭುತ್ವದ ಯಶಸ್ವಿಗೆ : ನೀಲಪ್ರಭಾ 

ಪ್ರತಿಯೊಬ್ಬರೂ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಬೇಕು ಎಂದು ತಾಲೂಕ ದಂಡಾಧಿಕಾರಿ ಕು. ನೀಲಪ್ರಭಾ ಹೇಳಿದರು. ಅವರು ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ದಿ ಸಂಸ್ಥೆಯಲ್ಲಿ ಶಹಾಬಾದ ತಾಲೂಕ ಆಡಳಿತ ವತಿಯಿಂದ ನಡೆದ "ಸ್ವೀಪ್" ಕಾರ್ಯಕ್ರಮ ದಡಿಯಲ್ಲಿ ಈಶಾನ್ಯ ಶಿಕ್ಷಕರ ಚುನಾವಣೆ ಅಂಗವಾಗಿ ನಡೆದ ಮತದಾರ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳೇ ಬುನಾದಿ. ಪ್ರತಿಯೊಬ್ಬರೂ ಚುನಾವಣೆ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗಿಯಾದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ಅರ್ಹತೆ ಇರುವ ಶಿಕ್ಷಕರು ಕಡ್ಡಾಯವಾಗಿ ಈಶಾನ್ಯ ಶಿಕ್ಷಕರ ಚುನಾವಣೆಗೆ ಮತ ಚಲಾಯಿಸಲು ನೋಂದಣಿ ಮಾಡಿಕೊಳ್ಳಿ. ಚುನಾವಣೆ ಘೋಷಣೆ ಆದ ನಂತರ ತಪ್ಪದೇ ಮತ ಚಲಾಯಿಸಿ. ಸಾರ್ವಜನಿಕ ಚುವಾವಣೆಗಳಲ್ಲಿ ಜನಸಾಮಾನ್ಯರಿಗೆ ಮತದಾನದ ಅರಿವು ಮೂಡಿಸುವ ಹಾಗೇ ಶಿಕ್ಷಕರಿಗೂ ಅರಿವು ಮೂಡಿಸಲು ಇಂತಹ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನೋಂದಣಿಯಲ್ಲಿ ಶಿಕ್ಷಕರ ನಿರಾಸಕ್ತಿ ಎದ್ದು ಕಾಣುತ್ತಿದೆ. ಹೆಚ್ಚು ಹೆಚ್ಚು ನೋಂದಣಿಯಾದಾಗ ಮಾತ್ರ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯ. ಅಂತಹ ನಾಯಕರು ಮಾತ್ರ ನಿಮ್ಮ ಸಮಸ್ಯೆಗಳಿಗೆ ದ್ವನಿಯಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ತಾಲೂಕ ಸ್ವೀಪ್ ಅಧಿಕಾರಿ ಮಲ್ಲಿನಾಥ ರಾವೂರ ಪ್ರಾಸ್ಥಾವಿಕವಾಗಿ ಮಾತನಾಡಿ ನವೆಂಬರ್ 6 ರ ವರೆಗೆ ಶಿಕ್ಷಕರ ನೋಂದಣಿ ಕಾರ್ಯ ನಡೆಯಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ತಮ್ಮಲ್ಲಿಯೇ ಪ್ರಚಾರ ಮಾಡುವ ಮೂಲಕ ಹೆಚ್ಚಿನ ನೋಂದಣಿಗೆ ಸಹಕರಿಸಬೇಕು. ಹಾಗೇ ತಾಲ್ಲೂಕಿನ ವಿವಿಡೆದೆ ಮತದಾರರ ಜಾಗೃತಿ ಮುಡಿಸಲು ಹಾಗೂ ಅರ್ಹ ಶಿಕ್ಷಕರು ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನೋಂದಣಿ ಮಾಡಿಕೊಂಡು ತಪ್ಪದೇ ಭಾಗವಹಿಸುವಂತೆ ಮಾಡಲಾಗುತ್ತಿದೆ. ಚುನಾವಣೆಗಳ ಯಶಸ್ವಿ ನಿಮ್ಮ ಸಹಭಾಗಿತ್ವದ ಮೇಲೆ ಅವಲಂಬಿಸಿದೆ ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ಡಾ. ಕೆ. ಗುರಲಿಂಗಪ್ಪ ಮಾತನಾಡಿದರು.

ವೇದಿಕೆ ಮೇಲೆ ಸಂಸ್ಥೆಯ ಕಾಲೇಜು ವಿಭಾಗದ ಪ್ರಾಚಾರ್ಯ ಕೆ. ಐ. ಬಡಿಗೇರ್, ಪ್ರೌಢ ವಿಭಾಗದ ಮುಖ್ಯಗುರು ವಿದ್ಯಾಧರ ಖಂಡಾಳ ಇದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರೌಢ ಹಾಗೂ ಕಾಲೇಜು ವಿಭಾಗದ ಶಿಕ್ಷಕರು, ಉಪನ್ಯಾಸಕರು ಹಾಜರಿದ್ದರು.

 ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಈಶ್ವರಗೌಡ ಪಾಟೀಲ್, ಶಿವಕುಮಾರ್ ಸರಡಗಿ, ಶರಣಬಸಪ್ಪ ಸಜ್ಜನ್, ಸುಗುಣ ಕೊಳಕೂರ, ರಾಧಾ ರಾಠೋಡ, ಭುವನೇಶ್ವರಿ ಎಂ. ಗೀತಾ ಜಮಾದಾರ, ರವಿ ಕಣೆಕರ್, ನಾಗರಾಜ ಕುಲಕರ್ಣಿ, ಬಸವರಾಜ ರಾಠೋಡ್,ಬಸಮ್ಮ ಹಡಪದ, ಶೀಲಾ ಪೂಜಾರಿ, ವಿಜಯಲಕ್ಷ್ಮಿ ವಾಡಿ,ಶೀಲಾ ಅಚ್ಚೋಲಿ, ಮಂಜುಳಾ ನಡುವಿನಕೇರಿ, ಮಂಜುಳಾ ಪಾಟೀಲ್, ಮೈತ್ರಿಯಿ, ಅನೀಲ್ ಉಪಸ್ಥಿತರಿದ್ದರು.