ಡಾ.ಶರಣಬಸಪ್ಪ ಅಪ್ಪ ಅವರಿಗೆ "ಕೇಂದ್ರ ಸರ್ಕಾರ ಪದ್ಮ ವಿಭೂಷಣ, ಮತ್ತು "ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ" ಕೊಡಬೇಕೆಂದು ಮನವಿ

ಡಾ.ಶರಣಬಸಪ್ಪ ಅಪ್ಪ ಅವರಿಗೆ "ಕೇಂದ್ರ ಸರ್ಕಾರ ಪದ್ಮ ವಿಭೂಷಣ, ಮತ್ತು "ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ" ಕೊಡಬೇಕೆಂದು ಮನವಿ
ಕಲಬುರಗಿಯ ಆರಾಧ್ಯ ಧೈವ ಶ್ರೀ ಶರಣಬಸವೇಶ್ವರ ಸಂಸ್ಥಾನದ 8 ನೇ ಪೀಠಾಧಿಪತಿ ಲಿಂಗೈಕ್ಯ ಡಾ.ಶರಣಬಸಪ್ಪ ಅಪ್ಪ ಅವರಿಗೆ "ಕೇಂದ್ರ ಸರ್ಕಾರ ಪದ್ಮ ವಿಭೂಷಣ, ಮತ್ತು "ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ" ಕೊಡಬೇಕೆಂದು ಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಮತ್ತು ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಲಬುರಗಿಯ ತ್ರಿವೀಧ ದಾಸೋಹಿಗಳಾದ ಲಿಂಗೈಕ್ಯ ಡಾ. ಶರಣಬಸಪ್ಪ ಅಪ್ಪ ರವರಿಗೆ ಭಾರತ ಸರ್ಕಾರ ಪದ್ಮ ವಿಭೂಷಣ ಮತ್ತು ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ಮತ್ತು ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಬಗ್ಗೆ.
ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ 8 ನೇ ಪೀಠಾದಿಪತಿಗಳಾದ ಲಿಂಗೈಕ್ಯ ಡಾ ಶರಣಬಸಪ್ಪ ಅಪ್ಪಾಜಿಯವರ ಸಾಮಾಜಿಕ ಸೇವೆ ಮತ್ತು ತ್ರೀವಿಧ ದಾಸೋಹ ಸೇವೆಯನ್ನು ಗುರುತಿಸಿ ಅವರಿಗೆ ಭಾರತ ಸರ್ಕಾರವು ಪದ್ಮವಿಭೂಷಣ ಮತ್ತು ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿಗಳನ್ನು ಕೊಡಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ವಿನಂತಿ ಮಾಡಿಕೊಳ್ಳಲಾಯಿತು.
ಸೂಫಿ ಶರಣರ ನಾಡು ಕಲಬುರಗಿಯ ಆರಾಧ್ಯ ಧೈವ ಶ್ರೀ ಶರಣಬಸವೇಶ್ವರ ಸಂಸ್ಥಾನವು ಕಲಬುರಗಿ ಜಿಲ್ಲೆಯಲ್ಲಿ ತ್ರಿವೀಧ ದಾಸೋಹ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಕಲಬುರಗಿಯು ಭಾವೈಕ್ಯತೆಯ ನಾಡಾಗಲು ಶ್ರೀ ಶರಣಬಸಶ್ವೇಶ್ವರ ಸಂಸ್ಥಾನ ಮತ್ತು ಖಾಜಾ ಬಂದೆ ನವಾಜ ಸಂಸ್ಥಾನಗಳು ಮಾಡಿರುವ ಸೇವೆಗಳು ಅಜರಾಮರವಾಗಿವೆ.
ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಲಿಂಗೈಕ್ಯ ಡಾ ಶರಣಬಸಪ್ಪ ಅಪ್ಪರವರು ಅನ್ನ, ಅಕ್ಷರ ಮತ್ತು ಕಾಯಕ ಎಂಬ ತ್ರೀವಿಧ ದಾಸೋಹ ಪರಂಪರೆಯನ್ನು ಯಾವುದೇ ಅಪೇಕ್ಷೆ ಇಲ್ಲದೆ ಜೀವದುದಕ್ಕೂ ಸಮಾಜ ಸೇವೆಯ ರೂಪದಲ್ಲಿ ಮಾಡಿಕೊಂಡು ಬಂದಿದ್ದರು.
ದಾಸೋಹ ಪರಂಪರೆಯಲ್ಲಿ ಅನ್ನ ದಾಸೋಹವು ಸಂಸ್ಥಾನದಲ್ಲಿ ಮೊದಲಿನಿಂದಲೂ ನಡೆದು ಕೊಂಡು ಬಂದಿದ್ದು ನಿತ್ಯವೂ ಲಕ್ಷಾಂತರ ಜನ ಅನ್ನ ಪ್ರಸಾದವನ್ನು ಸ್ವೀಕರಿಸುತ್ತಾರೆ. ಆದರೆ ಅಕ್ಷರ ಮತ್ತು ಕಾಯಕ ದಾಸೋಹಗಳು ಅಪ್ಪಾಜಿಯವರ ದೂರದೃಷ್ಟಿಯಿಂದ ಇಂದು ಉನ್ನತ ಮಟ್ಟದಲ್ಲಿ ಬೆಳೆದು ನಿಂತಿವೆ. ಅವರ ಸೇವೆಯನ್ನು ಒಂದು ಸಣ್ಣ ಮನವಿ ಮೂಲಕ ಬರೆಯಲು ಸಾಧ್ಯವಿಲ್ಲ.
ಶಿಕ್ಷಣ ಪ್ರೇಮಿಯಾಗಿದ್ದ ಅಪ್ಪಾಜಿಯವರು ಎಲ್ ಕೆ ಜಿ, ಯಿಂದ ಉನ್ನತ ಶಿಕ್ಷಣ ಕೇಂದ್ರವಾದ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಅಕ್ಷರ ದಾಸೋಹ ನೀಡುತ್ತಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿರುವ ಸಾವಿರಾರು ಜನ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಸ್ಥಾನ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಐದು ಸಾವಿರಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ನೀಡಲಾಗಿದ್ದು ಇದು ಕಾಯಕ ದಾಸೋಹಕ್ಕೆ ಅಪ್ಪಾಜಿಯವರು ನೀಡಿರುವ ಕೊಡುಗೆಯಾಗಿದೆ.
ಅಪ್ಪಾಜಿಯವರು ಯಾವುದೇ ಜಾತಿ, ಮತ, ಧರ್ಮಗಳ ಭೇದ ಭಾವ ಮಾಡದೇ ಎಲ್ಲರನ್ನು ಸಮಾನರಾಗಿ ಕಾಣುವ ಮೂಲಕ ಅಣ್ಣ ಬಸವಣ್ಣನ ತತ್ವ ಪಾಲನೆ ಮಾಡಿ ಆದರ್ಶ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ್ದರು.
ನಮ್ಮ ಭಾಗದ ದೊಡ್ಡ ಶಕ್ತಿಯಾಗಿದ್ದ ಅಪ್ಪಾಜಿಯವರ ಸಾಮಾಜಿಕ ಸೇವೆ ಮತ್ತು ತ್ರೀವಿಧ ದಾಸೋಹ ಸೇವೆಗಳ ಸ್ಮರಣೆಯು ಕೇವಲ ಸಂತಾಪಕ್ಕೆ ಸೀಮಿತವಾಗಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿಗೆ ಪ್ರಶಸ್ತಿ ವಿಷಯದಲ್ಲಿ ಮಲತಾಯಿ ಧೋರಣೆ ತೋರಿಸಬಾರದು.
ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿಯ ಆರಾಧ್ಯ ಧೈವ ಶ್ರೀ ಶರಣಬಸವೇಶ್ವರ ಸಂಸ್ಥಾನವು ಲಕ್ಷಾಂತರ ಭಕ್ತಾದಿಗಳು ಮತ್ತು ಅಭಿಮಾನಿ ಬಳಗ ಹೊಂದಿದ್ದು ಅವರೆಲ್ಲರ ಕಳಕಳಿಯ ಕೋರಿಕೆ ಅಪ್ಪಾಜಿಯವರಿಗೆ ಮರಣೋತ್ತರ ಭಾರತ ಸರ್ಕಾರ ಪದ್ಮವಿಭೂಷಣ ಮತ್ತು ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದರೆ, ಪ್ರಶಸ್ತಿಗೆ ನಮ್ಮ ಭಾಗದಲ್ಲಿ ಮೌಲ್ಯವು ಹೆಚ್ಚಾಗುತ್ತದೆ ಎನ್ನುವುದು ಕಲ್ಯಾಣ ಭಾಗದ ಜನರ ಒಕ್ಕೊರಲಿನ ಬೇಡಿಕೆಯಾಗಿದೆ ಎಂದು ಸರ್ಕಾರಕ್ಕೆ ವಿನಂತಿ ಮಾಡಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್ ನಡಗೇರಿ, ಜಿಲ್ಲಾ ಅಧ್ಯಕ್ಷ ಬಾಬು ಮದನಕರ ಮುಖಂಡರಾದ ಜೈಭೀಮ ಮಾಳಗೆ, ಮೋಹನ ಸಾಗರ, ಪ್ರವೀಣ ಖೇಮನ, ನಾಗು ಡೊಂಗರಗಾಂವ, ಮಲ್ಲು ಸಂಕನ, ದತ್ತು ಜಮಾದಾರ, ಪುಟ್ಟು ಸಿರಸಗಿ ಹಾಗೂ ಇತರರಿದ್ದರು.