ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸಲು ಸರಕಾರಕ್ಕೆ ಮನವಿ – ನಾಗನಹಳ್ಳಿ

ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸಲು ಸರಕಾರಕ್ಕೆ ಮನವಿ – ನಾಗನಹಳ್ಳಿ

ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸಲು ಸರಕಾರಕ್ಕೆ ಮನವಿ – ನಾಗನಹಳ್ಳಿ

ಕಲಬುರ್ಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಗ್ರಾಮಗಳಲ್ಲಿ ನಿರಂತರ ಧಾರಾಕಾರ ಮಳೆಯ ಪರಿಣಾಮವಾಗಿ ಬಲಿಷ್ಠ ಬೆಳೆ ಹಾನಿ ಸಂಭವಿಸಿದೆ. ಈ ಪ್ರದೇಶದಲ್ಲಿ ಈ ಬಾರಿ ಸುರಿದ ಮಳೆಯ ಪ್ರಮಾಣ ಸಾಮಾನ್ಯ ಮಿತಿಯನ್ನು ಬಹಳಷ್ಟು ಮೀರಿದೆ.

ಸೋಯಾಬೀನ್, ಉದ್ದು, ಹೆಸರು, ಜೋಳ, ಹತ್ತಿ ಮುಂತಾದ ಪ್ರಮುಖ ಕೃಷಿ ಬೆಳೆಗಳು ನೀರುಪಾಲಾಗಿ ಸಾವಿರಾರು ಹೆಕ್ಟೇರ್ ಭೂಮಿಯು ಹಾನಿಗೊಳಗಾಗಿದ್ದು, ರೈತರ ಜೀವನ ಭವಿಷ್ಯ ಗೊಂದಲಕ್ಕೆ ಒಳಗಾಗಿದೆ.

ಈ ತುರ್ತು ಪರಿಸ್ಥಿತಿಯನ್ನು ಮನಗಂಡು, ಹಾನಿಗೊಳಗಾದ ರೈತರು ಮತ್ತು ಜನತೆಗೆ ತಕ್ಷಣ ಪರಿಹಾರ ನೀಡುವಂತೆ ಈ ಗ್ರಾಮಗಳನ್ನು ಅತೀವೃಷ್ಟಿ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ, ಅಧ್ಯಕ್ಷರು ಕೋಟನೂರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೂಲಕ ಸರಕಾರಕ್ಕೆ ವಿನಂತಿ ಸಲ್ಲಿಸಿದ್ದಾರೆ.