ಉಳ್ಳಿoಜ ಪಾರ್ವತಿ ಜಯರಾಮ್ ಭಟ್ ನಿಧನ (ಕುಮಾರ್ ಪೆರ್ನಾಜೆ ಸಹೋದರಿ ಪಾರ್ವತಿ ಭಟ್ ನಿಧನ )

ಉಳ್ಳಿoಜ ಪಾರ್ವತಿ ಜಯರಾಮ್ ಭಟ್ ನಿಧನ (ಕುಮಾರ್ ಪೆರ್ನಾಜೆ ಸಹೋದರಿ ಪಾರ್ವತಿ ಭಟ್ ನಿಧನ )
ಪೆರ್ನಾಜೆ: ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಉಳ್ಳಿoಜ ನಿವಾಸಿ ಕಾಕುಂಜೆ ಜಯರಾಮ್ ಭಟ್ ರವರ ಪತ್ನಿ ಉಳ್ಳಿoಜ ಪಾರ್ವತಿ(61ವ )ಜುಲೈ 28 ರಂದು ಅಲ್ಪ ಕಾಲದ ಅಸೌಖದಿಂದ ಸ್ವಾಗ್ರಹದಲ್ಲಿ ಅವರು ನಿಧನರಾದರು.
ಅವರು ಹತ್ತು ವರ್ಷಕ್ಕೂ ಮಿಕ್ಕಿ ಕ್ಯಾನ್ಸರ್ ರೋಗವನ್ನು ಗೆದ್ದು ಅಳುಕದೆ ಬದುಕಿ ತೋರಿಸಿಕೊಟ್ಟ ಮಹಿಳೆ, ಅಲ್ಲದೆ ವೇಣೂರು ಮಹಿಳಾ ಮಂಡಲದ ಮಾಜಿ ಅಧ್ಯಕ್ಷರಾಗಿ, ಹಲವಾರು ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿದ್ದವು ಅವರು ಜಯಶಾಲಿಯಾಗಿಯೂ ಮದುವೆ ಮಕ್ಕಳ ವಧು ಸಿಂಗಾರ ಹಾಗೆ ಅಡಿಕೆ ಇಂಗಾರದ ಮಾಲೆ ಕುಸುರಿ ಕಲೆಯಾದ ಮಣಿ ಮಾಲೆ,
ತೋರಣ, ವೈರ್ ಬ್ಯಾಗ್ ಶೃಂಗಾರ ಆಭರಣಗಳನ್ನು ತಯಾರಿಸಿ ತನ್ನ ಬಿಡುವಿನ ವೇಳೆಯಲ್ಲಿ ಸಾಧನೆಯನ್ನು ಮಾಡುತ್ತಾ ಎಲ್ಲರನ್ನೂ ಒಗ್ಗೂಡಿಸಿ ಕಲಾ ನಿರೂಪಕರು ಸಂಘದ ಚಟುವಟಿಕೆಯಲ್ಲಿ ಸಕ್ರಿಯ ರಾಗಿದ್ದರು .
ಮೃತರ ತಾಯಿ ಶಾರದಮ್ಮ ಪೆರ್ನಾಜೆ ಸಹೋದರರಾದ ಸತ್ಯನಾರಾಯಣ ಭಟ್ ಪಿಲ್ಯ ಪೆರ್ನಾಜೆ, ಕುಮಾರ್ ಪೆರ್ನಾಜೆ ಬರಹಗಾರರು ಜೇನು ತಜ್ಞ. ಆರ್ ಎನ್ ಶೆಟ್ಟಿ ಕಾಲೇಜ್ ಮುರ್ಡೇಶ್ವರ ಉಪನ್ಯಾಸಕರು ಕೃಷ್ಣ ಪ್ರಸಾದ್ ಪೆರ್ನಾಜೆ, ಸಹೋದರಿಯೆರಾದ ಸರಸ್ವತಿ ಪ್ರಕಾಶ್ ಕೋಟೆ ಸುಳ್ಯ, ಶಂಕರಿ ಬಾಲಕೃಷ್ಣ ಶರ್ಮ ಪುದುಕೋಳಿ ನಿರ್ಚಾಲು, ಪತಿ ಜಯರಾಮ್ ಭಟ್ ಪುತ್ರರಾದ ರವೀಂದ್ರ ಭಟ್ ಉಳ್ಳಿoಜ ಸೊಸೆ ವಿನಯ, ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ರಘುನಂದನ ಉಳ್ಳಿಂಜ ಸೊಸೆ ಕಾವ್ಯಶ್ರೀ ,ಪುತ್ರಿ ರಮ್ಯಾ ಶ್ಯಾಮ್ ಉಡುಪಿ
ಅಳಿಯ ವಿಜಯಶ್ಯಾಮ್ ಗುತ್ತು ಉಡುಪಿ ಮೊಮ್ಮಕ್ಕಳಾದ ಚಿರಂತನ,ವೈಷ್ಣವಿ,ಪರ್ಜನ್ಯ ರಾಮ,ಹೃತಿಕ್ ಕೃಷ್ಣ , ಸ್ವದಾ ಅವರ ಅಚ್ಚುಮೆಚ್ಚಿನ ಅಜ್ಜಿಯಾಗಿದ್ದು ಹಲವಾರು ಮಂದಿ ಬಂದು ಮಿತ್ರರನ್ನು ಅಗಲಿದ್ದಾರೆ.