ಅಣವಾರ ಗ್ರಾಮದಲ್ಲಿ ಕಾರ್ತಿಕ ದೀಪೋತ್ಸವದ ಸಡಗರ: ಸೇವಾರತ್ನ ಪ್ರಶಸ್ತಿಯಿಂದ ಸಮದ್ ಪಟೇಲ್ ಮತ್ತು ಡಾ. ಜಗದೀಶ್ಚಂದ್ರ ಬುರ್ಳಾ ಗೌರವ

ಅಣವಾರ ಗ್ರಾಮದಲ್ಲಿ ಕಾರ್ತಿಕ ದೀಪೋತ್ಸವದ ಸಡಗರ: ಸೇವಾರತ್ನ ಪ್ರಶಸ್ತಿಯಿಂದ ಸಮದ್ ಪಟೇಲ್ ಮತ್ತು ಡಾ. ಜಗದೀಶ್ಚಂದ್ರ ಬುರ್ಳಾ ಗೌರವ

ನನಗೆ ನನ್ನ ಹುಟ್ಟೂರಿನಲ್ಲಿ ನೀವು ನೀಡಿದ ಸೇವಾರತ್ನ ಪ್ರಶಸ್ತಿ ನನಗೆ ಈವರೆಗೆ ಸಂದಿರುವ ಸನ್ಮಾನ ಮತ್ತು ಪ್ರಶಸ್ತಿಗಳಲ್ಲಿಯೇ ಅತ್ಯಂತ ದೊಡ್ಡದು. ನನ್ನ ಮೇಲೆ ಮಾತೃಭೂಮಿಯ ಋಣವಿದೆ ಅದನ್ನು ತೀರಿಸಲು ಜಿಲ್ಲೆಯಲ್ಲಿ ರೈತರ ಸೇವೆ ಮಾಡುತ್ತಿದ್ದೇನೆ

-ಸಮದ್ ಪಟೇಲ್ ಅಣವಾರ ಜಂಟಿ ಕೃಷಿ ನಿರ್ದೆಶಕರು (ಪ್ರಶಸ್ತಿ ಪುರಸ್ಕೃತರು)

ಮಕ್ಕಳಿಗೆ ತಂದೆ ತಾಯಿಗಳೇ ನಿಜವಾದ ಹೀರೋಗಳು. 3 ಗಂಟೆಗಳ ಸಿನಿಮಾಗಳ ನಟರು ಹೋರೋಗಳಲ್ಲ. ಗಡಿಕಾಯುವ ಯೋಧರು, ಸಮರ್ಪಣಾಭಾವದಿಂದ ಜ್ಙಾನಧಾರೆ ಎರೆಯುವ ಶಿಕ್ಷಕರು, ನಮಗೆಲ್ಲರಿಗೂ ಅನ್ನ ನೀಡುವ ರೈತರು ಹೀರೋಗಳು

ಯಶೋಧಾ ಕಟಕೆ ಸಬ್ ಇನಸ್ಪಕ್ಟರ್ ಕಲಬುರಗಿ

ಅಣವಾರ ಗ್ರಾಮದಲ್ಲಿ 15ನೇ ವರ್ಷದ ಕಾರ್ತಿಕ ದೀಪೋತ್ಸವ ಸಡಗರ 

ರೈತರ ಆದಾಯ ಹೆಚ್ಚಿಸಲು ಶ್ರಮಿಸುತ್ತಿರುವ ಸಮದ್ ಪಟೇಲ್, ಗ್ರಾಮೀಣ ಜನರ ನೆಚ್ಚಿನ ವೈದ್ಯ ಡಾ. ಜಗದೀಶ್ಚಂದ್ರ ಬುರ್ಳಾ ಅವರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ

ಚಿಂಚೋಳಿ: ನಾವು ಆದರ್ಶವ್ಯಕ್ತಿಗಳನ್ನು ಎಲ್ಲೆಲ್ಲೋ ಹುಡುಕುವ ಬದಲು ನಮ್ಮ‌ ಮಧ್ಯೆಯೇ ಇದ್ದು ಜನಪರ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಸೇವಾರತ್ನ ಪ್ರಶಸ್ತಿ‌ ಪ್ರದಾನ ಮಾಡುವ ಮೂಲಕ ಅಣವಾರ ಗ್ರಾಮಸ್ಥರು ಸಾಮಾಜಿಕ‌ಕಾಳಜಿ ಮೆರೆದಿದ್ದಾರೆ ಎಂದು ಪತ್ರಕರ್ತ ಜಗನ್ನಾಥ ಶೇರಿಕಾರ ತಿಳಿಸಿದರು. 

 ಬೆಳೆದು ಜನ ಸೇವೆಯೇ ಉಸಿರಾಗಿಸಿಕೊಂಡು ಯುವ ಜನರಿಗೆ ಪ್ರೇರಣೆಯಾಗಿರುವ ಮಾದರಿ ವ್ಯಕ್ತಿ ಕೃಷಿ‌ ಜಂಟಿ‌ ನಿರ್ದೇಶಕ‌ ಸಮದ ಪಟೇಲ್, ಗ್ರಾಮೀಣ ಜನರ ಆರೋಗ್ಯ ಸೇವೆಗೆ ಜೀವನ‌ ಮುಡಿಪಾಗಿಟ್ಟ ನಿವೃತ್ತ ವೈದ್ಯಾಧಿಕಾರಿ ಡಾ. ಜಗದೀಶ್ಚಂದ್ರ ಬುಳ್ಳಾ ಅವರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅಣವಾರ ಗ್ರಾಮಸ್ಥರು ಸಮಾಜಕ್ಕೆ ಸಂದೇಶ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಪತ್ರಕರ್ತ ಜಗನ್ನಾಥ ಡಿ. ಶೇರಿಕಾರ ತಿಳಿಸಿದರು. 

ಅವರು ತಾಲ್ಲೂಕಿನ ಅಣವಾರ ಗ್ರಾಮದಲ್ಲಿ ಮಾರುತೇಶ್ವರ ದೇವಾಲಯ ಟ್ರಸ್ಟ್ ಹಮ್ಮಿಕೊಂಡ 15ನೇ ವರ್ಷದ ಕಾರ್ತಿಕ ದೀಪೋತ್ಸವ ಹಾಗೂ 2025ನೇ ಸಾಲಿನ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಶನಿವಾರ ಮುಖ್ಯ ಅತಿಥಿಳಾಗಿ ಮಾತನಾಡಿದರು.

ಜಿಲ್ಲೆಯ ರೈತರಿಗೆ ಬೆಳೆ ಹಾನಿಯ ಪರಿಹಾರದ ಜತೆಗೆ ಬೆಳೆ ವಿಮೆಯ ಪರಿಹಾರ ಧನ ಗರೀಷ್ಠ ಪ್ರಮಾಣದಲ್ಲಿ ಕೊಡಿಸುವುದರೊಂದಿಗೆ ಜಿಲ್ಲೆಯಲ್ಲಿ ರೈತರ ಆದಾಯ ಹೆಚ್ಚಿಸಲು ಅವಿರತ ಪ್ರಯತ್ನಿಸುತ್ತಿರುವ ಜಂಟಿ ಕೃಷಿ ನಿರ್ದೆಶಕ ಸಮದ್ ಪಟೇಲ್ ಮತ್ತು ಮೂರು ದಶಕಗಳಿಂದ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಜನರ ನೆಚ್ಚಿನ ವೈದ್ಯ ಡಾ ಜಗದೀಶ್ಚಂದ್ರ ಬರ್ಳಾ ಅವರ ಸಾಧನೆ ಮತ್ತು ಸಾಮಾಜಿಕ‌ ಕಾಳಜಿ‌ ಶ್ಲಾಘನೀಯ ಎಂದರು.

ಕಲಬುರಗಿಯ ಸಬ್ ಇನಸ್ಪೆಕ್ಟರ್ ಯಶೋಧಾ ಕಟಕೆ ಮಾತನಾಡಿ ಪ್ರತಿಯೊಬ್ಬರು ಸತ್ಯದ ದಾರಿಯಲ್ಲಿ ಸಾಗಬೇಕು ಸುಳ್ಳು ಹೇಳುವುದು, ಚಾಡಿ ನಿಂದನೆಗಳಿಂದ ದೂರವಿರಬೇಕು. ಭಕ್ತಿ ಮತ್ತು ಅಧ್ಯಾತ್ಮ ಮಾನವ ಜೀವನದ ಸಾರ್ಥಕತೆಗೆ ಅತಿ ಅಗತ್ಯ. ಭಕ್ತಿ ಪರಿಶುದ್ಧವಾಗಿರಬೇಕು ಅದು ನೀರಿನ ಝರಿಯಂತೆ ಸದಾ ಹರಿಯುತ್ತಿರಬೇಕು. ಪೂಜೆ, ಧ್ಯಾನ, ಜಪತಪ, ಭಜನೆ ಭಕ್ತಿ ಮಾರ್ಗವಾದರೆ, ಅಧ್ಯಾತ್ಮ ಜ್ಞಾನ, ಏಕಾಗ್ರತೆ, ನಿಸ್ವಾರ್ಥಭಾವ, ಸಾಮಾಜಿಕ ಕಾಳಜಿ ಧರ್ಮ ಸಂಸ್ಕಾರ ಬೆಳೆಸುತ್ತದೆ ಎಂದರು.

ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠದ ಕರುಣೇಶ್ವರ ಶಿವಾಚಾರ್ಯರು ಹಾಗೂ ಚಂದನಕೇರಾದ ಬೃಂಗಿ ಪಾಚೇಶ್ವರ ಕಟ್ಟಿಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಶಿವನನ್ನು ಒಲಿಸಿಕೊಳ್ಳಲು ಅಧ್ಯಾತ್ಮ ಮತ್ತು ಭಕ್ತಿ ಎರಡೂ ಬೇಕು. ಜೀವನದ ಅಂಧಕಾರ ಕಳೆಯಲು ಜ್ಞಾನದ ದೀಪಬೆಳಗುವಂತೆ ನೀವು ಅಂತಕರಣದ ದೀಪ ಬೆಳಗಿ ಧರ್ಮ ಕಾರ್ಯದಲ್ಲಿ ತೊಡಗಬೇಕೆಂದರು.

ಪ್ರಶಸ್ತಿ ಪುರಸ್ಕೃತ ಡಾ. ಜಗದೀಶ್ಚಂದ್ರ ಬುರ್ಳಾ ಮಾತನಾಡಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ನನಗೆ ನೀವು ನೀಡಿದ ಪ್ರಶಸ್ತಿ ಖುಷಿ ತಂದಿದೆ. ನಿಸ್ವಾರ್ಥಭಾವದಿಂದ ಜನರ ಸೇವೆಗೆ ಇದು ಸಮರ್ಪಿಸುತ್ತೇನೆ ಎಂದು ತಿಳಿಸಿದರು.

ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಸಮದ್ ಪಟೇಲ್ ಮಾತನಾಡಿ, ಕಲಬುರಗಿ ಜಿಲ್ಲೆಯ ಜನರ ತಲಾ ಆದಾಯ ಅತ್ಯಂತ ಕಡಿಮೆಯಿದೆ. ಇದು ಹೆಚ್ಚಳವಾಗಬೇಕಾದರೆ ನೀರಾವರಿಗೆ ಒತ್ತು ನೀಡಬೇಕು. ರೈತರು ಹೊಸ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಜಂಟಿ ಕೃಷಿ ನಿರ್ದೆಶಕ ಸಮದ್ ಪಟೇಲ್ ಅಣವಾರ ತಿಳಿಸಿದರು.

ಮಲ್ಲಿಕಾರ್ಜುನ ರಾಚೋಟಿ, ಬಸವಂತರೆಡ್ಡಿ, ಶರಣಬಸಪ್ಪ ಮಡಿವಾಳ, ವಿಶ್ವನಾಥರೆಡ್ಡಿ, ಸುರೇಶ ಬೆಟಗೇರಿ,ಶಂಕರ ತೊಟ್ನಳ್ಳಿ ಮೊದಲಾದವರು ಇದ್ದರು.

ಟ್ರಸ್ಟ್ ಅಧ್ಯಕ್ಷ ರೇವಣಸಿದ್ದಪ್ಪ (ಬಾಬು)ಪಾಟೀಲ ಅಧ್ಯಕ್ಷತೆವಹಿಸಿದ್ದರು. ಸಂಗಯ್ಯಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಾಗೇಂದ್ರಪ್ಪ ಬಿರಾದಾರ ನಿರೂಪಿಸಿದರು. ಮಲ್ಲಿಕಾರ್ಜುನ ಭೂಶೆಟ್ಟಿ ವಂದಿಸಿದರು.