ರಾಷ್ರೀಯ ಕೃಷಿ ಡ್ರೋನ್ ಪೈಲೇಟ್ ತರಬೇತಿ

ರಾಷ್ರೀಯ ಕೃಷಿ ಡ್ರೋನ್ ಪೈಲೇಟ್ ತರಬೇತಿ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು,ಕೃಷಿ ಮಹಾವಿದ್ಯಾಲಯ, ಕಲಬುರಗಿ,ದಿನಾಂಕ: ೧೬.೦೭.೨೦೨೫

ರಾಷ್ರೀಯ ಕೃಷಿ ಡ್ರೋನ್ ಪೈಲೇಟ್ ತರಬೇತಿ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು. ಕೃಷಿ ಮಹಾವಿದ್ಯಾಲಯ, ಕಲಬುರಗಿ ಹಾಗೂ ಎಕ್ಸೆಲಿಜೆಂಟ್ ಟೆಕ್ನೊ ಪವರ ಪ್ರೆöÊವೇಟ್ ಲೀಮಿಟೆಡ್, ಕಲಬುರಗಿ ಇವರ ಸಂಯುಕ್ತ ಆಸ್ರಯದಲ್ಲಿ ಐದು ದಿನಗಳ ರಾಷ್ರೀಯಮಟ್ಟದ ಕೃಷಿ ಡ್ರೋನ್ ಪೈಲೇಟ್ ತರಬೇತಿ – ೨೦೨೫ ನ್ನು ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯ ಆವರಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದ ಕಲಬುರಗಿ ಜಿಲ್ಲೆಯ ಜಂಟಿ ನಿರ್ದೇಶಕರಾದ ಡಾ. ಸಮದ ಪಟೇಲ್ ಮಾತನಾಡಿ ಕೃಷಿಯಲ್ಲಿ ಡ್ರೋನ್ ಬಳಕೆ ಈಗ ಅನಿವಾರ್ಯವಾಗಿದೆ. ಮಾನವ ಸಂಪನ್ಮೂಲದ ಕಡಿಮೆ ಬಳಕೆ ಮಾಡಿ ನಿಖರವಾಗಿ ಬೆಳೆ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಕಡಿಮೆ ರಸಾಯನಿಕಗಳ ಬಳಕೆ ಮಾಡಲು ಡ್ರೋನ್‌ಗಳು ಸಹಕಾರಿಯಾಗಲಿವೆ. ಕೃಷಿ ಇಲಾಖೆಯಿಂದ ವಿವಿಧ ಸೌಲಭ್ಯ ಪಡೆಯಲು ಅನುಕೂಲವಾಗಿದೆ.

 ಅಧ್ಯಕ್ಷತೆವಹಿಸಿ ಮಾತನಾಡಿದ ಕೃಷಿ ಮಹಾವಿದ್ಯಾಲಯ, ಕಲಬುರಗಿ ಡೀನ್‌ರಾದ ಡಾ. ಶಿವಶರಣಪ್ಪ ಬಿ. ಗೌಡಪ್ಪ ಮಾತನಾಡಿ ಮಾನವ ರಹಿತ ವಾಹನ ಈ ಡ್ರೋನಗಳು ಬಗ್ಗೆ ರೈತರು ಹಾಗೂ ನಿರುದ್ಯೋಗಿ ಯುವ-ಯುವತಿಯರು ಹಾಗೂ ವಿದ್ಯಾರ್ಥಿಗಳಿಗೆ ಸ್ವಂ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಆಯೋಜಿಸಿದ್ದು, ಈ ವಿನೂತನ ತರಬೇತಿಯು ಪ್ರಾಯೋಗಿಕವಾಗಿದ್ದು ಶಿಬಿರಾರ್ಥಿಗಳು ಡ್ರೋನ್‌ಗಳ ಚಾಲನೆ ಸಮಗ್ರ ಮಾಹಿತಿ ಪಡೆಯಲು ಅನುಕೂಲವಾಗಲಿದೆ ಎಂದರು. ತರಬೇತಿಯ ನಿರ್ದೇಶಕರಾದ ಹಾಗೂ ಪ್ರಾಧ್ಯಾಪಕರಾದ ಡಾ. ರಾಚಪ್ಪ ಹಾವೇರಿ ಪ್ರಸ್ಥಾವಿಕ ನುಡಿಗಳನ್ನು ಹೇಳುತ್ತಾ ಈ ತರಬೇತಿಗೆ ರಾಜ್ಯ ಹಾಗೂ ಹೊರರಾಜ್ಯದ ಶಿಬಿರಾರ್ಥಿಗಳು ಆಕರ್ಶಿಸಿದ್ದು. ಡ್ರೋನ್‌ಗಳ ಕುರಿತು ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ರಾಜು ತೆಗ್ಗಳ್ಳಿ ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಡ್ರೋನ್‌ಗಳ ಬಳಕೆಯಿಂದ ನಿಖರವಾಗಿ ಬೆಳೆಗಳಿಗೆ ಸಿಂಪರಿಸಲು ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಉಪ ಕೃಷಿ ನಿರ್ದೇಶಕರಾದ ಶ್ರೀಮತಿ.ಅನುಸುಯಾ ಹೂಗಾರ್, ಶ್ರೀ ಸೋಮಶೇಖರ್ ಬಿರಾದರ್, ಪ್ರಾಧ್ಯಾಪಕರಾದ ಡಾ.ಎಸ್.ಕೆ. ಜಯಲಕ್ಷಿö್ಮÃ, ಡಾ.ಬಿ.ಎಸ್.ರೆಡ್ಡಿ, ಡಾ.ಸುನಿಲಕುಮಾರ ಎನ್.ಎಮ್, ಡಾ.ಸಿದ್ರಾಮ ವಾಡೇದ್, ಡಾ. ಸತೀಶಕುಮಾರ, ಡಾ. ಮಹೇಶ, ಡಾ. ರಾಜಶೇಖರ ಬಸನಾಯಕ, ತರಬೇತಿ ನಿರ್ದೇಶಕರಾದ ಡಾ. ಕುಶಾಲ ಕುಮಾರ ಪೊದ್ದಾರ್ ಮತ್ತು ಶ್ರೀ ಶುಭಮ್ ಗಾಯಕವಾಡ್ ಉಪಸ್ಥಿತರಿದ್ದರು. ತರಬೇತಿಯಲ್ಲಿ ಒಟ್ಟು ತೊಂಭತ್ತೇರಡು ಜನ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.