ನಾಡಿಗೆ ಕೀರ್ತಿ ತಂದ ಮಕ್ಕಳನ್ನು ಕೊಟ್ಟ ಮಾತೋಶ್ರೀ: ಜಾಧವ್

ನಾಡಿಗೆ ಕೀರ್ತಿ ತಂದ ಮಕ್ಕಳನ್ನು ಕೊಟ್ಟ ಮಾತೋಶ್ರೀ: ಜಾಧವ್

*ಪುಣ್ಯವತಿ ವೀರಭದ್ರಪ್ಪ ಮುದ್ದಾ ಆಗಲುವಿಕೆಗೆ ಶೋಕ*

ನಾಡಿಗೆ ಕೀರ್ತಿ ತಂದ ಮಕ್ಕಳನ್ನು ಕೊಟ್ಟ ಮಾತೋಶ್ರೀ: ಜಾಧವ್

ಕಲಬುರಗಿ : ಆದರ್ಶ ಕುಟುಂಬವಾಗಿ ಬೆಳೆಸಿ, ನಾಡಿಗೆ ತಜ್ಞರನ್ನು, ಚಿಂತಕರನ್ನು ವೈದ್ಯರನ್ನು ಮಾತೃಶ್ರೀ ಪುಣ್ಯವತಿ ವೀರಭದ್ರಪ್ಪ ಮುದ್ದಾ ಧಾರೆ ಎರೆದು ಕೊಟ್ಟ ಅವರ ಜೀವನ ಎಲ್ಲರಿಗೂ ಮಾದರಿ ಆಗಿದೆ ಎಂದು ಲೋಕಸಭಾ ಮಾಜಿ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದರು. 

    ಕಲಬುರಗಿಯ ಸಂಗಮೇಶ್ವರ ಬಡಾವಣೆಯಲ್ಲಿ ದಿವಂಗತ ಪುಣ್ಯವತಿ ವೀರಭದ್ರಪ್ಪ ಮುದ್ದಾ ಅವರ ನಿಧನದ ಐದನೇ ದಿನ ಜೂನ್ 30ರಂದು ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ ಮಕ್ಕಳನ್ನು ಹೇಗೆ ಬೆಳೆಸಬೇಕು ಮತ್ತು ನಾಡಿಗೆ ಕೀರ್ತಿ ಬರುವಂತೆ ಸಂಸ್ಕಾರ ನೀಡಿದ ಮಾತೃಶ್ರೀ ಪುಣ್ಯವತಿ ಅಮ್ಮನವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಕುಟುಂಬ ಪದ್ಧತಿ, ಶಿಥಿಲಗೊಳ್ಳುತ್ತಿರುವ ಈ ವೇಳೆಯಲ್ಲಿ ಪ್ರೀತಿ ವಿಶ್ವಾಸ ಮತ್ತು ಸಂಸ್ಕಾರ ನೀಡಿ ಮುದ್ದಾ ಕುಟುಂಬವು ನಾಡಿಗೆ ಹೆಮ್ಮೆ ಬ ರುವಂತೆ ದೊಡ್ಡ ಕೊಡುಗೆಯನ್ನು ನೀಡಿದೆ. ವೀರಭದ್ರಪ್ಪ ಅವರು ಹಿಂದಿ ಪ್ರಾಧ್ಯಾಪಕರಾಗಿ ಸ್ವತಹ ಸೈಕಲ್ ನಲ್ಲಿ ಓಡಾಡಿ ಬಂದ ಪಿಂಚಣಿ ದುಡ್ಡಿನಲ್ಲಿ ಸಾರ್ವಜನಿಕರಿಗಾಗಿ ಕಲ್ಯಾಣ ಮಂಟಪವನ್ನು ಕಟ್ಟಿ ಉಚಿತವಾಗಿ ಕೊಟ್ಟಿರುವುದು ಕೈಹಿಡಿದ ಧರ್ಮಪತ್ನಿ ಪುಣ್ಯವತಿಯವರ ಪ್ರೇರಣೆಯಾಗಿದೆ. ಮುದ್ದಾ ಕುಟುಂಬವನ್ನು ಹತ್ತಿರದಿಂದ ನೋಡಿದ ನನಗೆ ಪ್ರೇರಣೆಯಾಗಿದೆ ಎಂದು ಜಾಧವ್ ಹೇಳಿದರು. 

  ಕಾರ್ಯಕ್ರಮದಲ್ಲಿ ಡಾ. ಜಯಶ್ರೀ, ಅಮರನಾಥ ಮುದ್ದಾ, ಡಾ. ವಂದನಾ, ಡಾ. ಮಹದೇವಾ ಅವಟಿ, ಶ್ರೀಮತಿ ಶಮಾ, ಕರ್ನಾಟಕ ಸರ್ಕಾರದ ಮಾಜಿ ಸಲಹೆಗಾರರಾದ ಕೇದಾರನಾಥ ಮುದ್ದಾ, ವಿಜಯಲಕ್ಷ್ಮಿ, ಡಾ. ಆಕಾಶ್ ಅವಟಿ, ಡಾ. ಶ್ವೇತಾ, ಡಾ. ಅಮಿತ್ ಎ. ಮುದ್ದಾ, ಅಸಾವರಿ, ಕೇತನ್ ಮುದ್ದಾ, ಶ್ರೀಲೇಖಾ,ಶರಣ್ ಓ. ಮುದ್ದಾ, ಸಂಜನಾ ಕೌಶಿಕ್ ಮುದ್ದಾ ,ಡಾ. ಐಶ್ವರ್ಯ , ಡಾ. ರಾಜೇಂದ್ರ ಅವಟಿ, ಡಾ. ಅಕ್ಷಯ್ ಮುದ್ದಾ , ಅಕ್ಷಯ್ ಎ ಮುದ್ದಾ, ಡಾ. ಸದಾನಂದ ಪೆರ್ಲ ರಾಮಕೃಷ್ಣ, ವಿನೋದ್ ಕುಮಾರ್ ಮತ್ತಿತರರು ಗೌರವ ನಮನ ಸಲ್ಲಿಸಿದರು.