ಫ.ಗು.ಹಳಕಟ್ಟಿ 146ನೇ ಜಯಂತಿ – ಉತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

ಫ.ಗು.ಹಳಕಟ್ಟಿ 146ನೇ ಜಯಂತಿ – ಉತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ
ಕಲಬುರಗಿ:ವಚನ ಪಿತಾಮಹರಾದ ಫ.ಗು.ಹಳಕಟ್ಟಿ ಅವರ 146ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಉದ್ದೇಶದಿಂದ ಪೂರ್ವಭಾವಿ ಸಭೆಯು ಶನಿವಾರ ಸಂಜೆ ಕಲಬುರ್ಗಿಯ ಕನ್ನಡ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಪೊಲೀಸ್ ಅಧಿಕಾರಿ ಆರ್.ಸಿ. ಘಾಳೆ ವಹಿಸಿದ್ದರು. ಹಿರಿಯ ಕಲಾವಿದರಾದ ಶಿವಶರಣಪ್ಪ ಬಡದಾಳ ಅವರು ಕಾರ್ಯಕ್ರಮದ ಪೂರ್ವ ಸ್ವಾಗತ ಗೀತೆ ಹಾಡಿದರು.
ಸಭೆಯಲ್ಲಿ ಉತ್ಸವ ಸಮಿತಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಅವಕಾಶದಲ್ಲಿ ಆಯ್ಕೆಯಾದವರು ಈ ಕೆಳಗಿನಂತಿದ್ದಾರೆ:
*ಗೌರವಾಧ್ಯಕ್ಷರು: ಶರಣಪ್ಪ ಜನವರಿ
* ಉತ್ಸವ ಸಮಿತಿಯ ಅಧ್ಯಕ್ಷರು: ಆರ್.ಸಿ. ಘಾಳೆ
*ಕಾರ್ಯಾಧ್ಯಕ್ಷರು:ರವೀಂದ್ರ ಶಾಬಾದಿ
* ಉಪಾಧ್ಯಕ್ಷರು:ಶಿವಪುತ್ರಪ್ಪ ಭಾವಿ
*ಖಜಾಂಚಿ ಮತ್ತು ಕೋಶಾಧಿಕಾರಿ:ಡಾ. ಬಸವರಾಜ್ ಚನ್ನ
*ಸಂಚಾಲಕರು:ಶಿವಲಿಂಗಪ್ಪ ಅಸ್ಟಗಿ
* ಕಾರ್ಯದರ್ಶಿ: ನ್ಯಾಯವಾದಿ ವಿನೋದ್ ಕುಮಾರ್ ಜನವರಿ
ಅಧ್ಯಕ್ಷರಾಗಿ ಆಯ್ಕೆಯಾದ ಆರ್.ಸಿ. ಘಾಳೆ ಅವರಿಗೆ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು ಗೌರವ ಸಲ್ಲಿಸಿದರು.
ಸಭೆಯಲ್ಲಿ ಚಂದ್ರಶೇಖರ ಮ್ಯಾಳಗಿ, ಸತೀಶ ಜಮಖಂಡಿ, ಸಿದ್ಧಾರೂಢ ಧನ್ನಾ, ಶಿವರಾಜ ಅಂಡಗಿ, ಮೋಹನ್ ಚಾರ್ಮ, ಸಂತೋಷ ಗುರುಮಿಟಕಲ್, ರಾಜಗೋಪಾಲ ಬಂಢಾರಿ, ರಾಜು ಹುಲ್ಲೂರು, ಸಂಜೀವ ಕುಮಾರ ಡೋಂಗರಗಾಂವ್, ರಾಜೇಂದ್ರ ಮುಡಬೋಳ, ಘನಾತೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.