ವೀರಶೈವ ಮಹಾಸಭೆ : ನೂತನ ಅಧ್ಯಕ್ಷರಾಗಿ ಭೀಮಾಶಂಕರ ಕುಂಬಾರ ಆಯ್ಕೆ :..

ವೀರಶೈವ ಮಹಾಸಭೆ : ನೂತನ ಅಧ್ಯಕ್ಷರಾಗಿ ಭೀಮಾಶಂಕರ ಕುಂಬಾರ ಆಯ್ಕೆ :..
ಶಹಾಬಾದ : - ತಾಲ್ಲೂಕಿನ ಅಖಿಲ ಭಾರತ ವೀರಶೈವ ಮಹಾಸಭೆಯ ನೂತನ ಅಧ್ಯಕ್ಷರಾಗಿ ಭೀಮಾಶಂಕರ ಕುಂಬಾರ ಮತ್ತು ಮಹಿಳಾ ಘಟಕದ ಅಧ್ಯಕ್ಷರಾಗಿ ರಾಜೇಶ್ವರಿ ರೇವಣಸಿದ್ದ ಧನಶೆಟ್ಟಿ ಅವರನ್ನು ಮುಂದಿನ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಮಾಜಿ ಅಧ್ಯಕ್ಷ ಶರಣಬಸಪ್ಪ ಕೋಬಾಳ ಮಾತನಾಡಿ, ನೂತನ ಅಧ್ಯಕ್ಷರಾಗಿ ಭೀಮಾಶಂಕರ್ ಕುಂಬಾರ ಮತ್ತು ರಾಜೇಶ್ವರಿ ಧನಶೆಟ್ಟಿ ರವರ ಆಯ್ಕೆ ಸಮಾಜದ ಒಳಿತು ಮತ್ತು ಸಮೃದ್ಧಿಗಾಗಿ ಮತ್ತಷ್ಟು ಸೇವೆ ಪ್ರೇರಣೆ ನೀಡುವ ಮೂಲಕ ಮಹಾಸಭೆಯ ಪ್ರಾಮುಖ್ಯತೆಯನ್ನು ಹೆಚ್ಚಿಸಲಿದೆ ಎಂದಿದ್ದಾರೆ.
ತಮ್ಮ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿರುವ ಭೀಮಾಶಂಕರ್ ಕುಂಬಾರ ರವರು, ನನ್ನನ್ನು ಬೆಂಬಲಿಸಿದ ಮತ್ತು ಅವಿರೋಧವಾಗಿ ಗೆಲ್ಲಲು ಸಹಾಯ ಮಾಡಿದ ಪ್ರತ್ಯೇಕ ಹಾಗೂ ಪರೋಕ್ಷವಾಗಿ ಬೆಂಬಲಿಸಿ ಮತ್ತು ಸಹಕರಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಹಾಗೆ ತಾಲೂಕಿನ ಪ್ರತಿಯೊಂದು ಸಮುದಾಯವನ್ನು ವೀರಶೈವ ಸಮಾಜವು ಸ್ನೇಹ, ವಿಶ್ವಾಸದಿಂದ ಜತೆಗೂಡಿ ಹೋಗುತ್ತಿದೆ, ಸಮುದಾಯದ ಸಮಗ್ರ ಅಭಿವೃದ್ಧಿ ಮತ್ತು ಸಮಾಜದಲ್ಲಿ ಹೆಚ್ಚಿನ ಐಕ್ಯತೆಗಾಗಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಆಯ್ಕೆಯ ಸಂಧರ್ಭದಲ್ಲಿ ಮಾಜಿ ಅಧ್ಯಕ್ಷರಾದ ವಿಜಯಕುಮಾರ ಮುತ್ತಟ್ಚಿ, ಶರಣಬಸಪ್ಪ ಕೋಬಾಳ ಹಾಗೂ ಬಿಂದು ರಾಜು ಕೋಬಾಳ, ಮೃತ್ಯುಂಜಯ ಹಿರೇಮಠ, ಶಿವಕುಮಾರ ಇಂಗಿನಶೆಟ್ಟಿ, ಪ್ರಶಾಂತ ಮರಗೋಳ, ವಿಶ್ವರಾಧ್ಯ ಬಿರಾಳ, ಅರುಣ ಪಟ್ಟಣಕರ, ಸದಾನಂದ ಕುಂಬಾರ, ಶರಬು ಪಟ್ಟೇದಾರ, ನಾಗಣ್ಣ ರಾಂಪುರ, ರಾಜು ಕುಂಬಾರ, ಬಸವರಾಜ ಸಾತ್ಯಾಳ ಮತ್ತು ಮಹಿಳೆಯರು ಸೇರಿದಂತೆ ಸಾವಿರಾರು ಜನ ವೀರಶೈವ ಮಹಾಸಭಾದ ಸದಸ್ಯರು ಉಪಸ್ಥಿತರಿದ್ದರು