ಪ್ರಾಮಾಣಿಕ ಪ್ರಯತ್ನ ಪಟ್ಟರೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ.

ಪ್ರಾಮಾಣಿಕ ಪ್ರಯತ್ನ ಪಟ್ಟರೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ.
ಕಲಬುರಗಿ: ಪ್ರತಿಯೋಬ್ಬ ಹೋರಾಟಗಾರ ಅಭಿವೃದ್ಧಿ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಪಟ್ಟರೆ ಸಮಾಜ ಸುಧಾರಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ ಅಭಿಪ್ರಾಯ ಪಟ್ಟರು.
ನಗರದ ಪೂರ್ಣಾನಂದ ಫಂಕ್ಷನ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಹೋರಾಟಗಾರ ಡಾ.ಲಿಂಗರಾಜ ಸಿರಗಾಪೂರ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೋರಾಟಗಾರರ ಕೊಡುಗೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ.ಪ್ರಾಮಾಣಿಕ ಪ್ರಯತ್ನ ಪಟ್ಟರೆ ಪ್ರಶಸ್ತಿಗಳು ತಾನೆ ಹುಡುಕಿಕೊಂಡು ಬರುತ್ತವೆ.ಬಾಕಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿದರೆ ಸ್ವಲ್ಪ ಮಟ್ಟಿಗೆ ನಿರುದ್ಯೋಗ ನಿವಾರಣೆ ಸಾಧ್ಯ ಎಂದ ಅವರು ಎರಡು ದಶಕಗಳ ಹೋರೋಟದ ಫಲವಾಗಿ ಸಿರಗಾಪೂರ ಅವರಿಗೆ ಗೌರವ ಡಾಕ್ಟರೇಟ್ ದೊರೆತಿರುವುದು ನಿಜಕ್ಕೂ ಸ್ವಾಗತಾರ್ಹ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುವಿವಿಯಕನ್ನಡ ಪ್ರಸಾರಾಂಗದ ನಿರ್ದೇಶಕ ಪ್ರೊ,ಎಚ್.ಟಿ.ಪೋತೆ ಮಾತನಾಡಿ ಹೋರಾಟಗಾರರು ತಮ್ಮ ಅಮೂಲ್ಯ ವೇಳೆಯನ್ನು ಸಮಾಜ ಸೇವೆಗೆ ಮೀಸಲಿಟ್ಟು ಹೋರಾಡುತ್ತಾರೆ.ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು.ಡಾ.ಬಾಬಾಸಾಹೇಬರ ವಿಚಾರ ಧಾರಣೆ ಇಂದಿನ ಯುವಕರಿಗೆ ತಿಳಿ ಹೇಳಬೇಕು ಎಂದರು.ಹಿರಿಯ ಹೋರಾಟಗಾರ ಡಾ.ಲಕ್ಷ್ಭಣ ದಸ್ತಿ ಮಾತನಾಡಿ 371 ಜೆ ಕಲಂ ಸವಲತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಸಿಗುವಂತಾಗಬೇಕು.ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗಬೇಕು.ಸಾಮಾಜಿಕ ಹೋರಾಟದಲ್ಲಿ ಸಿರಗಾಪೂರ ಅವರ ಪಾತ್ರ ಪ್ರಮುಖವಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ,ಚಿಂತಕ ಡಾ.ಬಸವರಾಜ ಕುಮ್ನೂರ,ವಿಜ್ಞಾನೇಶ್ವರ ಪ್ರತಿಷ್ಠಾನ ನಿರ್ದೇಶಕ ಡಾ.ಬಸವರಾಜ ಪಾಟೀಲ ಮರತೂರ, ಹೋರಾಟಗಾರ ಡಾ.ಸಾಜೀದ ಅಲಿ ರಂಜೋಳ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ರ್ಯಾಂಕ ಗಳಿಸಿದ ಕುಮಾರಿ ಸ್ಪಂದನ ಹಾಗೂ ಕುಮಾರಿ ಅಮೃತಾ ಅವರನ್ನು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಸನ್ಮಾನಿಸಿದರು.ಹೋರಾಟಗಾರ ಡಾ.ಲಿಂಗರಾಜ ಸಿರಗಾಪೂರ ತಮ್ಮ ಎರಡು ದಶಕದ ಹೋರಾಟದ ಬಗ್ಗೆ ಅನುಭವ ಹಂಚಿಕೊಂಡರು.
ಮುಖಂಡರಾದ ಸೂರ್ಯಕಾಂತ ಕೆ.ಬಿ ಸ್ವಾಗತಿಸಿದರು,ಸಾಹಿತಿ ಜಿ.ಜಿ.ವಣಿಕ್ಯಾಳ ವಂದಿಸಿದರು.ಅಶೋಕ ಕಮಲಾಪುರ ವಂದಿಸಿದರು.ಬಸವರಾಜ ಮಾಗಿ,ದೇವಿಂದ್ರ ದೇಸಾಯಿ ಕಲ್ಲೂರ,ಅಮೃತ ಪಾಟೀಲ,ಗಿರೀಶಗೌಡ ಧುಮ್ಮುದ್ರಿ, ಆದಿನಾಥ ಹೀರಾ,ವಿರೇಶ ದಂಡೋತಿ,ಎಂ.ಡಿ.ಮಠಪತಿ, ವಿಶ್ವನಾಥ ಪಾಟೀಲ ಗೌನಳ್ಳಿ,ಮಾಲಾ ಕಣ್ಣಿ,ಬಸವಂತ್ರಾಯ ಕೋಳ್ಕುರ, ಆನಂದ ತೆಗನೂರ,ಜೈರಾಜ ಕಿಣಿಗೀಕರ,ರುಕ್ಕಪ್ಪ ಕಾಂಬಳೆ,ರಾಜು ಜೈನ್,ಹಣಮಂತ್ರಾಯ ಅಟ್ಟೂರ, ಗುಂಡಣ್ಣ ಡಿಗ್ಗಿ, ಮಂಜುನಾಥ ಸಿರಗಾಪೂರ,ಪ್ರಭು ಪಾಟೀಲ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಮಹಿಳೆಯರು ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕೊನೆಯಲ್ಲಿ ಹೋರಾಟಗಾರ ಲಿಂಗರಾಜ ಸಿರಗಾಪೂರ ಅವರಿಗೆ ಹಲವರಿಂದ ಸನ್ಮಾನಗಳು ನಡೆದವು.