ಪ್ರಾಮಾಣಿಕ ಆಫೀಸರ್ ದಿಲೀಪ್ ಸಾಗರ್ ಅವರಿಗೆ ಸನ್ಮಾನ ಮಂಜು ಕುಸನೂರು ಅವರಿಂದ ಗೌರವ ಅಭಿವ್ಯಕ್ತಿ

ಪ್ರಾಮಾಣಿಕ ಆಫೀಸರ್ ದಿಲೀಪ್ ಸಾಗರ್ ಅವರಿಗೆ ಸನ್ಮಾನ
ಮಂಜು ಕುನೂರು ಅವರಿಂದ ಗೌರವ ಅಭಿವ್ಯಕ್ತಿ
ಕಲಬುರ್ಗಿ: ಪ್ರಾಮಾಣಿಕತೆ, ನಿಷ್ಠೆ ಹಾಗೂ ಸಮರ್ಪಿತ ಸೇವೆಯಿಂದ ಸಾರ್ವಜನಿಕರಲ್ಲಿ ಶ್ರದ್ಧೆಯನ್ನೂ ವಿಶ್ವಾಸವನ್ನೂ ಗಳಿಸಿರುವ ಹಿರಿಯ ಅಧಿಕಾರಿಯಾಗಿರುವ ದಿಲೀಪ್ ಸಾಗರ್ ಸರ್ ಅವರನ್ನು ಇಂದು ಕನ್ನಡ ನಾಡು-ನಾಡಿನ ಹಿತಚಿಂತಕರಾಗಿ ಹೆಸರು ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥೆಯ ಜಿಲ್ಲಾ ಗೌರವ ಅಧ್ಯಕ್ಷರಾದ ಮಂಜು ಕುಸನೂರು ಸನ್ಮಾನಿಸಿದರು.
ಸಮಾರಂಭದಲ್ಲಿ ಮಾತನಾಡಿದ ಮಂಜು ಕುಸನೂರು ಅವರು, “ದಿಲೀಪ್ ಸಾಗರ್ ಸರ್ ಅವರ ಸೇವೆ ಸಾರ್ವಜನಿಕ ಜೀವನದಲ್ಲಿ ಮಾದರಿಯಾಗಿದ್ದು, ಇಂತಹ ಅಧಿಕಾರಿಗಳಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದರು.
ಸನ್ಮಾನದೊಂದಿಗೆ ಶಾಲು ಹೊದಿಸಿ ಗೌರವಿಸಲಾಯಿತು. ವಿವಿಧ ಗಣ್ಯರು, ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.