ವಾಟ್ಸಪ್ ಸ್ಟೇಟಸ್ ಕಾರಣ – ವಾಡಿಯಲ್ಲಿ ಬಿಜೆಪಿ ಮುಖಂಡ ಯಾರಿ ಮೇಲೆ ಹಲ್ಲೆ

ವಾಟ್ಸಪ್ ಸ್ಟೇಟಸ್ ಕಾರಣ – ವಾಡಿಯಲ್ಲಿ ಬಿಜೆಪಿ ಮುಖಂಡ ಯಾರಿ ಮೇಲೆ ಹಲ್ಲೆ
ವಾಡಿ ಪಟ್ಟಣದಲ್ಲಿ ನೀರಿನ ಅವ್ಯವಸ್ಥೆ – ಬಿಜೆಪಿ ಕಾರ್ಯಕರ್ತರಿಗೆ ದೊರೆತಿಲ್ಲ ನೀರು, ಕಾಂಗ್ರೆಸ್ ಮುಖಂಡರ ಮನೆಗೆ ನಿರಂತರ ಪೂರೈಕೆ ಎಂಬ ಆರೋಪ
ವಾಡಿ (ಜ) ಪಟ್ಟಣದಲ್ಲಿ ಪುರಸಭೆಯ ನೀರಿನ ಪೂರೈಕೆ ಯೋಜನೆಗೆ ಸಂಬಂಧಿಸಿದಂತೆ ಪಕ್ಷಪಾತದ ಆರೋಪಗಳು ಕೇಳಿಬಂದಿವೆ. ಪಟ್ಟಣದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀ ವೀರಣ್ಣ ಯಾರಿ ಅವರು ತಮ್ಮ ವಾಟ್ಸಪ್ ಸ್ಟೇಟಸ್ನಲ್ಲಿ ಬಿಜೆಪಿಯವರಿಗೆ ನೀರು ನೀಡದೆ, ಕಾಂಗ್ರೆಸ್ ಮುಖಂಡರ ಮನೆಗಳಿಗೆ ನಿರಂತರವಾಗಿ ನೀರು ಪೂರೈಸಲಾಗುತ್ತಿದೆ ಎಂಬ ಆರೋಪ ಹೊರಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರು ಬಿಜೆಪಿ ಮುಖಂಡರ ಅಂಗಡಿಗೆ ತೆರಳಿ ವಾಗ್ವಾದದಲ್ಲಿ ತೊಡಗಿದ್ದು, ಮಾತಿನ ಚಕಮಕಿ ನಡೆದು ಬಿಜೆಪಿ ಮುಖಂಡರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದ ವಿವರವನ್ನು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪ್ರಿಯಾಂಕ ಖರ್ಗೆ ಅವರ ಕ್ಷೇತ್ರದಲ್ಲಿ ನಡೆಯುತ್ತಿದ್ದಂತೆ, ನೇರವಾಗಿ ಆಡಳಿತದ ಪಕ್ಷದ ವರ್ತನೆಗೆ ಸಂಬಂಧಿಸಿದಂತೆ ರಾಜಕೀಯ ಅಲೆಯು ಎದ್ದಿದೆ.
ಸ್ಥಳೀಯರು ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಜನತೆಗೆ ನೀರಿನಂತಹ ಮೂಲಭೂತ ಸೌಕರ್ಯವನ್ನು ಪಕ್ಷಪಾತವಿಲ್ಲದೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.