ಎಂ ಆರ್ ಎಂ ಸಿ ಯ ಡಾ ಅನಿತಾ ಗೌರ ಕೋಣಿನ್ ವಿನ್ಯಾಸಗೊಳಿಸಿದ ಮಾತೃ ಸುರಕ್ಷಾ ಯ್ಯಾಪ್ ಬಿಡುಗಡೆ

ಎಂ ಆರ್ ಎಂ ಸಿ ಯ ಡಾ ಅನಿತಾ ಗೌರ ಕೋಣಿನ್ ವಿನ್ಯಾಸಗೊಳಿಸಿದ ಮಾತೃ ಸುರಕ್ಷಾ ಯ್ಯಾಪ್ ಬಿಡುಗಡೆ

ಎಂ ಆರ್ ಎಂ ಸಿ ಯ ಡಾ ಅನಿತಾ ಗೌರ ಕೋಣಿನ್ ವಿನ್ಯಾಸಗೊಳಿಸಿದ ಮಾತೃ ಸುರಕ್ಷಾ ಯ್ಯಾಪ್ ಬಿಡುಗಡೆ

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ ಅನಿತಾ ಗೌರಾ ಕೋಣಿನ್ ಅವರು ವಿನ್ಯಾಸಗೊಳಿಸಿದ ಮಾತೃ ಸುರಕ್ಷಾ ಯ್ಯಾಪ್ ಬಿಡುಗಡೆ ಕಾರ್ಯಕ್ರಮ ಇಂದು ಜರುಗಿತು 

ಈ ಯ್ಯಾಪ ನ ಬಿಡುಗಡೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಫೌಝಿಯಾ ತರನ್ನುಮ್ ಬಿಡುಗಡೆಗೊಳಿಸಿದರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ ಶರಣಬಸಪ್ಪ ಖ್ಯಾತನಾಳ ಭಾಗವಹಿಸಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ವಹಿಸಿದ್ದರು 

ಕಾರ್ಯಕ್ರಮದಲ್ಲಿ ಈ ಮಾತೃ ಸುರಕ್ಷಾ ಯ್ಯಾಪ್ ವಿನ್ಯಾಸ ಗೊಳಿಸಿದ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ ಅನಿತಾ ಗೌರಾ ಕೋಣಿನ್ ಈ ಯ್ಯಾಪನ ವಿಶೇಷತೆ ಹಾಗೂ ಇದರಿಂದ ಆಗುವ ಅನೂಕೂಲತೆಗಳ ಬಗ್ಗೆ ವಿವರಿಸಿದರು.

ಇತ್ತಿಚಿನ ದಿನಗಳಲ್ಲಿ ತಾಯಂದಿರ ಗರ್ಭಾವಸ್ಥೆಯಲ್ಲಿ ಮರಣ ಹೊಂದುತ್ತಿರುವದು ಅತ್ಯಂತ ಕಳವಳಕಾರಿಯಾಗಿದೆ ತಾಯಂದಿರ ಮರಣ ಮತ್ತು ಅನಾರೋಗ್ಯವು ದೇಶದ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದನ್ನು ಗಮನಿಸಿದ ನಾನು ಇಂತಹ ಗರ್ಭಿಣಿ ತಾಯಂದಿರ ಅನಾರೋಗ್ಯಕ್ಕೆ ಏನಾದರೂ ಸಹಾಯವಾಗಬೇಕು ಅನ್ನುವ ಉದ್ದೇಶದಿಂದ ಸಾ ಈ ಮಾತೃ ಸುರಕ್ಷಾ ಯ್ಯಾಪ್ ಬಿಡುಗಡೆಗೆ ಮುಂದಾದೆ ಇಂದಿನ ದಿನಗಳಲ್ಲಿ ಎಲ್ಲರೂ ಮೋಬೈಲ್ ಉಪಯೋಗಿಸುತ್ತಾರೆ ಈಗ ಎಲ್ಲರೂ ಅದನ್ನು ಸರಳವಾಗಿ ಉಪಯೋಗಿಸುತ್ತಾರೆ ಆದ್ದರಿಂದ ಈ ಮೋಬೈಲ್ ಮುಖಾಂತರ ಗರ್ಭಿಣಿ ತಾಯಂದಿರಗೆ ಅನುಕೂಲವಾಗಲೆಂದೆ ಇದನ್ನು ವಿನ್ಯಾಸಗೊಳಿಸಲು ಮುಂದಾದೆ ಸದಾ ನನ್ನ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತ ನನ್ನ ತಂದೆ ತಾಯಂದಿರಾದ ಡಾ ಅನ್ನಪೂರ್ಣ ಗೌರಾ,ಡಾ ನೀಲಕಂಠ ಗೌರಾ ಈ ಯ್ಯಾಪಗೆ ತಗಲುವ ವೆಚ್ಚಕ್ಕಾಗಿ ಧನ ಸಹಾಯ ಮಾಡಿದರು ಯ್ಯಾಪ್ ಡೆವಲೆಪರ್ ಗೆಲಾನಿ ಅಸೋಸಿಯೇಟ್ ನವರ ಸಹಾಯದೊಂದಿಗೆ ಇದನ್ನು ಅಭಿವೃದ್ದಿ ಪಡಿಸಿದೆ.

ಆಶಾ ಕಾರ್ಯಕರ್ತರು ಗರ್ಭಿಣಿ ತಾಯಂದಿರ ಆರೋಗ್ಯ ರಕ್ಷಣೆ ಮಾಡುವ ಆಧಾರ ಸ್ತಂಭಗಳು ಈ ಯ್ಯಾಪ ಆಶಾ ಕಾರ್ಯಕರ್ತೆಯರಿಗೂ ಸಹಾಯ ಒದಗಿಸುತ್ತದೆ ಜೊತೆಗೆ ಇಂದು ಕೃತಕ ಬುದ್ಧಿಮತ್ತೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇಯಾದ ಕೊಡೂಗೆ ನೀಡುತ್ತಿದೆ ಅದೇ ರೀತಿ ಆರೋಗ್ಯ ಕ್ಷೇತ್ರದಲ್ಲಿಯೂ ನೋಡುತ್ತೆವೆ. ಅಂತಹವುಗಳನ್ನು ಬಳಸಿಕೊಂಡು ಇಂದಿನ ಈ ಡಿಜಿಟಲ್ ಯುಗದಲ್ಲಿ ತಾಯಂದಿರು ಸುರಕ್ಷಿತವಾಗಿರಲು ಅನುಕೂಲ ಒದಗಿಸುತ್ತದೆ.

ಸರಳವಾದ ಆ್ಯಪ್ ಆಗಿದ್ದು, ಇದು ಈ ಜನರಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಡೇಟಾವನ್ನು ನಮೂದಿಸಲು ಸಹಾಯ ಮಾಡುತ್ತದೆ, ಈ ರೀತಿಯಾಗಿ ಹೆಚ್ಚಿನ ಅಪಾಯದ ಗರ್ಭಧಾರಣೆಯನ್ನು ವೇಗವಾಗಿ ವರದಿ ಮಾಡಲಾಗುತ್ತದೆ, ಉತ್ತಮವಾಗಿ ಟ್ರ್ಯಾಕ್ ಮಾಡಲಾಗುತ್ತದೆ ಮತ್ತು ಅಧಿಕಾರಿಗಳು ಹೆಚ್ಚಿನ ಅಪಾಯದ ತಾಯಂದಿರ ಸಂಖ್ಯೆಯನ್ನು ಸಹ ತಿಳಿದುಕೊಳ್ಳಬಹುದು. ಮತ್ತು ಆ್ಯಪ್ ಈ ತಾಯಂದಿರನ್ನು ಟ್ರ್ಯಾಕ್ ಮಾಡಲು ಮತ್ತು ಅವರಿಗೆ ಸಕಾಲಿಕ ಆರೈಕೆ ಸಿಗುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕರಾದ ಡಾ ಶರಣಬಸಪ್ಪ ಹರವಾಳ ಬಸವೇಶ್ವರ ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ್ ದೇಶಮುಖ್ ನಿರ್ದೇಶಕರಾದ ಡಾ ಮಲ್ಲಿಕಾರ್ಜುನ ಭಂಡಾರ, ಡೀನ್ ಶರಣಗೌಡ ಪಾಟೀಲ್, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ಆನಂದ ಗಾರಂಪಳ್ಳಿ ಉಪಸ್ಥಿತರಿದ್ದರು