ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅತಿಥಿ ಶಿಕ್ಷಕರ ನೇಮಕದಲ್ಲಿ ಅಕ್ರಮ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿಂಚೋಳಿ ಕ್ಷೇತ್ರದ ಕಡೆಗೆ ಗಮನಹರಿಸಬೇಕು

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅತಿಥಿ ಶಿಕ್ಷಕರ ನೇಮಕದಲ್ಲಿ ಅಕ್ರಮ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿಂಚೋಳಿ ಕ್ಷೇತ್ರದ ಕಡೆಗೆ ಗಮನಹರಿಸಬೇಕು

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅತಿಥಿ ಶಿಕ್ಷಕರ ನೇಮಕದಲ್ಲಿ ಅಕ್ರಮ

ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿಂಚೋಳಿ ಕ್ಷೇತ್ರದ ಕಡೆಗೆ ಗಮನಹರಿಸಬೇಕು 

ಚಿಂಚೋಳಿ : ಸಾರ್ವಜನಿಕ ಶಿಕ್ಷಣ ಇಲಾಖೆಯು ಅತಿಥಿ ಶಿಕ್ಷಕರ ನೇಮಕದಲ್ಲಿ ಅಕ್ರಮ ವ್ಯಸಗುತ್ತಿದೆ. ಸರಕಾರದ ಸುತ್ತೋಲೆಯಂತೆ ಪ್ರಾಥಮಿಕ ಶಾಲೆ ವಿಭಾಗಕ್ಕೆ ಡಿಇಡಿ, ಪ್ರೌಢ ಶಾಲೆ ವಿಭಾಗಕ್ಕೆ ಬಿಇಡಿ ಶೈಕ್ಷಣಿಕ ವಿದ್ಯಾಹರ್ತೆ ಪಡೆದಿರುವವರನ್ನು ಅತಿ ಶಿಕ್ಷಕರನ್ನಾಗಿ ನೇಮಿಸಿಕೊಳ್ಲಬೇಕೆಂದು ಸರಕಾರದ ಸುತ್ತೋಲೆಯ ಆದೇಶಗಳು ಹೇಳುತ್ತವೆ. ಆದರೆ ಚಿಂಚೋಳಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಸರಕಾರ ಕೊಟ್ಟಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡದೇ ಅವುಗಳನ್ನು ಗಾಳಿಗೆ ತೂರಿ ಡಿಇಡಿ ಜೊತೆಗೆ ಟಿಇಟಿ ಪಾಸ್ ಆಗಿ ಅಹರ್ತೆ ಹೊಂದಿರುವ ಅಭ್ಯರ್ಥಿಗಳ ಮನವಿಗಳನ್ನು ತಿರಸ್ಕರಿಸಿ, ಅತಿ ಶಿಕ್ಷಕರಾಗಲು ಶೈಕ್ಷಣಿಕ ವಿದ್ಯಾಹರ್ತೆ ಪಡೆಯದಿದ್ದರೂ ಅಂತಹವರನ್ನು ಹಣಪಡೆದು ಶಾಲೆಯ ಮುಖ್ಯಗುರುಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ವಿ,ಲಕ್ಷ್ಮಯ್ಯ ಅವರು ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದಾರೆಂದು ಅಹರ್ತೆ ಇರುವ ಅಭ್ಯರ್ಥಿಗಳಿಂದ ಆರೋಪಗಳು ಕೇಳಿ ಬಂದಿವೆ. ಡಿಇಡಿ(D.Ed) ಜೊತೆಗೆ ಟಿಇಟಿ ಅರ್ಹತೆ ಪಡೆದು ಸತತವಾಗಿ ಎರಡು ವರ್ಷಗಳಿಂದ ಅತಿಥಿ ಶಿಕ್ಷಕರಾಗಿ 2025 ಜೂನ್ 12 ರವರೆಗೆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದ ಶಿಕ್ಷಕಿಯನ್ನು ವಜಾಗೊಳಿಸಿ, ಹುದ್ದೆಗೆ ಅಹರ್ತೆ ಇಲ್ಲದ ಅಭ್ಯರ್ಥಿಯನ್ನು ನೇಮಿಸಿಕೊಂಡು ಮುಖ್ಯಗುರು ಮತ್ತು ಬಿಇಓ ಕೂಡಿ ಅಕ್ರಮ ನಡೆಸಿದ್ದಾರೆ. ಇನ್ನೂ ಮೂಲ ಅಂಕಪಟ್ಟಿಗಳನ್ನು ತಿದ್ದುಪಡಿ ಮಾಡಿ, ಅಂಕಗಳು ಹೆಚ್ಚಿಸಿಕೊಂಡು ಅತಿಥಿಶಿಕ್ಷಕ ಸ್ಥಾನಕ್ಕೆ ನೇಮಕಗೊಂಡಿರುವ ಅನುಮಾನಗಳು ಅಭ್ಯರ್ಥಿಗಳಿಂದ ವ್ಯಕ್ತವಾಗಿರುವ ಆರೋಪಗಳು ಕೇಳಿ ಬಂದಿವೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಜಿಲ್ಲೆಯ ಶೈಕ್ಷಣಿಕ ಸುಧಾರಣೆಯ ಅಧಿಕಾರಿಗಳು ಮತ್ತು ಶಿಕ್ಷಣ ಸಚಿವರು ಚಿಂಚೋಳಿ ಕ್ಷೇತ್ರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಅತಿಥಿ ಶಿಕ್ಷಕರ ನೇಮಕದ ಕಡೆಗೆ ಗಮನಹರಿಸಿ, ಅವರ ನೇಮಕ ತಡೆದು ನೈಜ ಮೂಲ ದಾಖಲೆಗಳು ಪರಿಶೀಲಿಸಬೇಕು. ಅತಿಥಿ ಶಿಕ್ಷಕರ ಸ್ಥಾನದಿಂದ ವಂಚಿತಗೊಂಡ ಮೂಲ ಅಹರ್ತೆ ಹೊಂದಿರುವ ಅಭ್ಯರ್ಥಿಗಳಿಗೆ ನೇಮಕದಲ್ಲಿ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರಲ್ಲದೆ, ಸರಕಾರ ಅಲ್ಪಸಂಖ್ಯಾತ ಇಲಾಖೆಯ ಮುರಾರ್ಜಿ ದೇಸಾಯಿ ಮತ್ತು ಮೌಲಾನಾ ಆಜಾದ್ ಶಿಕ್ಷಣ ಸಂಸ್ಥೆಗಳು ನಡೆಸುವ ಮಾದರಿಯಲ್ಲಿಯೇ ಅತಿಥಿ ಶಿಕ್ಷಕರ ನೇಮಕಗೊಳಿಸುವ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಿದೆ.  

ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಅವಿನಾಶ ಜಾಧವ ಅವರ ಕಣ್ಣಿಗೆ ದೂಳು ಚೆಲ್ಲಿದ ಬಿಇಓ : 

ಈ ವರ್ಷ ಚಿಂಚೋಳಿ ಬ್ಲಾಕ್ ಗೆ 361 ಪ್ರಾಥಮಿಕ ವಿಭಾಗದ ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ ದೊರಕಿದೆ. ಪ್ರಾಥಮಿಕ ಶಾಲೆಗಳಲ್ಲಿ ಅತಿಶಿಕ್ಷಕರಾಗಿ ಸತತವಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರನ್ನು ಮೊದಲ ಆದ್ಯತೆ ನೀಡಿ ಈ ವರ್ಷವೂ ಕೂಡ ಅದೇ ಶಾಲೆಗಳಲ್ಲಿಯೇ ಮುಂದುವರೆಸಲಾಗುತ್ತಿದೆ ಎಂದು ಕಳೆದ ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಅವಿನಾಶ ಜಾಧವ ಅವರು ತೆಗೆದುಕೊಂಡ ಕೆಡಿಪಿ ಸಭೆಗೆ ಬಿಇಓ ವಿ.ಲಕ್ಷ್ಮಯ್ಯ ಅವರು ತಿಳಿಸಿದರು. ಡಿಇಡಿ(D.Ed) ಶಿಕ್ಷಣದ ಜೊತೆಗೆ ಟಿಇಟಿ ಅರ್ಹತೆಪಡೆದು ಸತತವಾಗಿ ಎರಡು ವರ್ಷದಿಂದ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದವರನ್ನು ಕರ್ತವ್ಯದಿಂದ ವಜಾಗೊಳಿಸಿ, ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅಹರ್ತೆ ಇಲ್ಲದವರನ್ನು ಅತಿಶಿಕ್ಷಕರಾಗಿ ಬಿಇಓ ಮತ್ತು ಮುಖ್ಯಗುರುಗಳು ನೇಮಿಸಿಕೊಂಡು ಸಂಬಳಕ್ಕೆ ಶಿಫಾರಸ್ಸು ಮಾಡುತ್ತಿದ್ದಾರೆ.