ಕನ್ನಮಂಗಲದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಎನ್ ಯಲ್ಲಪ್ಪರಿಂದ ಬಾಗಿನ ವಿತರಣೆ
ಕನ್ನಮಂಗಲದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಎನ್ ಯಲ್ಲಪ್ಪರಿಂದ ಬಾಗಿನ ವಿತರಣೆ
ಜನನಿ ಪಿಯು ಕಾಲೇಜು, ಜನನಿ ಪಬ್ಲಿಕ್ ಸ್ಕೂಲ್, ಎಲ್ಸಿಆರ್ ಶಾಲೆಯ ಅಧ್ಯಕ್ಷ ಮತ್ತು ಗ್ರೇಟ್ ವಿಷನ್ ಅಕಾಡೆಮಿಯ ಸಂಸ್ಥಾಪಕ ಎನ್ ಯಲ್ಲಪ್ಪ ರವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕನ್ನಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಶೇಷ ಅಗತ್ಯತೆಯುಳ್ಳ ವಿಕಲಚೇತನರಿಗೆ ,ಸ್ತ್ರೀಶಕ್ತಿ ಸಂಘದ ಸದಸ್ಯರುಗಳಿಗೆ ಮತ್ತು ಸುಮಾರು ಒಂದು ಸಾವಿರ ಮಹಿಳೆಯರಿಗೆ ಬಾಗಿನ ವಿತರಿಸಿ,ತಾಯಿ ವರಮಹಾಲಕ್ಷ್ಮಿ ಎಲ್ಲರಿಗೂ ಒಳಿತು ಮಾಡಲೆಂದು ಹಾರೈಸಿದರು .
ಯಲ್ಲಪ್ಪ ರವರು ಶಬರಿ ಆಶ್ರಯ ಧಾಮ ಅನಾಥಾಶ್ರಮ ಮತ್ತು ವೃದ್ಧಾಶ್ರಮದ ಸ್ಥಾಪಕರಾಗಿದ್ದಾರೆ. ಇದು ಅವರ ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಸೇವೆಗೆ ,ಅಚಲ ಸಮರ್ಪಣೆಗೆ ಸಾಕ್ಷಿಯಾಗಿದೆ.
ಕನ್ನಮಂಗಲ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾಗಿ ಸ್ಥಳೀಯ ಸಮುದಾಯದ ಅಭಿವೃದ್ಧಿ ಮತ್ತು ಕಲ್ಯಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ .
ಗ್ರಾಮೀಣ ಅಭಿವೃದ್ಧಿ ಮತ್ತು ರೈತರ ಕಲ್ಯಾಣದೊಂದಿಗೆ ನಿಕಟವಾಗಿ ಕೆಲಸ ಮಾಡುವ ಹಾಲು ಉತ್ಪಾದನಾ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಬಿಜೆಪಿ ಮಹಾದೇವಪುರ ಕ್ಷೇತ್ರದ ಮಾಜಿ ಉಪಾಧ್ಯಕ್ಷರಾಗಿ ಮತ್ತು ಸೀಗೆಹಳ್ಳಿ ಮತ್ತು ಬೆಳತ್ತೂರು ಗ್ರಾಮಗಳ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.