ವಕೀಲರ ಭವನಕ್ಕೆ ಸ್ಥಳವಾಕಾಶ ಕೋರಿ, ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಕೆ

ವಕೀಲರ ಭವನಕ್ಕೆ ಸ್ಥಳವಾಕಾಶ ಕೋರಿ, ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಕೆ
ಚಿಂಚೋಳಿ : ಪಟ್ಟಣದ ಹಳೆಯ ತಹಸೀಲ್ ಕಾರ್ಯಾಲಯದ ಆವರಣದಲ್ಲಿ ವಕೀಲರ ಭವನ ನಿರ್ಮಾಣಕ್ಕೆ ಸ್ಥಳವಾಕಾಶ ಒದಗಿಸಬಕೆಂದು ಆಗ್ರಹಿಸಿ ಚಿಂಚೋಳಿ ತಾಲೂಕ ವಕೀಲರ ಸಂಘದ ಪದಾಧಿಕಾರಿಗಳು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಚಿಂಚೋಳಿ ಗ್ರೇಡ್ -2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ಅವರ ಮೂಲಕ ಮನವಿ ಸಲ್ಲಿಸಿ, ಒತ್ತಾಯಿಸಿದ್ದರು.
ಈಗಾಗಲೇ ತಹಸೀಲ್ ಕಾರ್ಯಾಲಯವು ನೂತನವಾಗಿ ನಿರ್ಮಾಣಗೊಂಡ ಆಡಳಿತ ಸೌಧ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಹಳೆಯ ತಹಸೀಲ್ ಕಾರ್ಯಾಲಯದ ಆವರಣದಲ್ಲಿ ವಕೀಲರ ಭವನಕ್ಕೆ ಬೇಕಾಗಷ್ಟು ಸ್ಥಾಳಾವಕಾಶವಿದ್ದು, ವಕೀಲರಿಗೆ ಭವನ ಅವಶ್ಯಕವಾಗಿದ್ದು, ಭವನ ನಿರ್ಮಾಣಕ್ಕೆ ಸ್ಥಳ ನೀಡಿ ಸಂಘಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ಆಗ್ರಿಹಿಸಿದ್ದಾರೆ.
ಈ ಸಂಧರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಜಗನ್ನಾಥ ಗಂಜಗಿರಿ, ಕಾರ್ಯದರ್ಶಿ ಜಿ. ಕೆ ಗೋಖಲೆ, ವಕೀಲ ಪ್ರವೀಣ ನಮಲ್ಲಿಕರ್, ದೇವಿಂದ್ರ ಜಾಬಿನ್ ಅವರು ಉಪಸ್ಥಿತರಿದ್ದರು.