ಗುರು ನೆನಹದಿಂದ ಜೀವನ್ಮುಕ್ತಿ - ಹಾರಕೂಡ ಶ್ರೀ

ಗುರು ನೆನಹದಿಂದ ಜೀವನ್ಮುಕ್ತಿ - ಹಾರಕೂಡ ಶ್ರೀ
ಸಂಸಾರ ಶರಧಿಯಲ್ಲಿ ಮುಳುಗದೆ ನಿಶ್ಚಿತ ದಡ ಸೇರಲು ಗುರುನೆನಹ ನಮ್ಮನ್ನು ಶ್ರೀರಕ್ಷೆಯಾಗಿ ಕಾಪಾಡುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು. ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಹಾರಕೂಡ ಗ್ರಾಮದ ಡಾವರೆ ಮತ್ತು ಸಂಗೊಳಗೆ ಪರಿವಾರದ ಹೆಣ್ಣು ಮಕ್ಕಳಿಂದ ಆಯೋಜಿಸಿದ ಗುರುವಂದನೆ 842ನೇ ತುಲಾಭಾರ ಸಮಾರಂಭದ ಸನ್ನಿಧಾನ ವಹಿಸಿ ಮಾತನಾಡಿದ ಶ್ರೀಗಳು ಜೀವನ ಶರಧಿಯಲ್ಲಿ ಕಷ್ಟ ಸು:ಖಗಳೆಂಬ ನೋವು ನಲಿವುಗಳೆಂಬ, ಅಲೆಗಳು ಬರುವುದು ಸಹಜ, ಆದರೆ ಕಷ್ಟದಲೆ ಬಂದಾಗ ಅಲುಗಾಡದೆ ಸು:ಖದಲೆ ಬಂದಾಗ ಮೈಮರೆಯದೆ ಸಮಚಿತ್ತವೆಂಬ ದೋಣಿಯಲ್ಲಿ ಗುರುವಿನ ನೆನಹವೆಂಬ ಹುಟ್ಟು ಸದಾ ಜಾಗೃತಿಯಿಂದ ಹಾಕುತ್ತಿರಬೇಕು. ಇದರಿಂದ ಗುರುಕಾರುಣ್ಯ ಪ್ರಾಪ್ತವಾಗಿ ಜೀವನ್ಮುಕ್ತಿಯ ದಡ ಸೇರಬಹುದಾಗಿದೆ. ಭಕ್ತಿ ಶ್ರದ್ಧೆ ಘನೀಕರಣಗೊಂಡಷ್ಟು ಗುರು ಕರುಣೆ ಹೊನಲಾಗಿ ಹರಿದು ಬರುತ್ತದೆ. ಡಾವರೆ ಹಾಗೂ ಸಂಗೋಳಗೆ ಪರಿವಾರದ ಹೆಣ್ಣು ಮಕ್ಕಳು ಹಾರಕೂಡ ಅಜ್ಜನವರ ಮೇಲೆ ಇಟ್ಟಿರುವ ಭಕ್ತಿಯಿಂದ ಅವರ ಬಾಳಸಿರಿ ನೂರ್ಮಡಿ ವೃದ್ಧಿಸಲಿ ಎಂದು ಶುಭ ಹಾರೈಸಿದರು. ಅಶ್ವಿನಿ ಬಿರಾದಾರ ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ಬಿ. ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಮೇಘರಾಜ ನಾಗರಾಳೆ, ಹೇಮಲತಾ ಹಿರೇಮಠ, ಶ್ರೀದೇವಿ ಹಿರೇಮಠ, ಕಾಶಪ್ಪ ದೇಗಾಂವ, ರೇವಣ್ಣ ಧನ್ನೂರ, ದುರ್ಯೋಧನ ಸಂಗೋಳಗೆ, ಗುಂಡರಾವ್ ಪಾಟೀಲ ಧನ್ನೂರ ಮುಂತಾದವರು ಉಪಸ್ಥಿತರಿದ್ದರು. ಗೌರಮ್ಮ ಕಾಲೋಜಿ ಸ್ವಾಗತಿಸಿದರು. ನೀಲಾಂಬಿಕಾ ಬಸವರಾಜ ಪಾಟೀಲ ಮತ್ತು ಸುಹಾಸನಿ ಪಾಟೀಲ ಸ್ವಾಗತ ಗೀತೆ ಹಾಡಿದರು. ಅಪೂರ್ವ ಡಾವರೆ ಹಾಗೂ ಶ್ರೀನಿಧಿ ಪಾಟೀಲ ಸಂಸ್ಕೃತಿಕ ನೃತ್ಯ ಪ್ರದರ್ಶನ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು. ಸುಜಾತಾ ಪಾಟೀಲ ನಿರೂಪಣೆ ಮಾಡಿದರು. ಚಿತ್ರ : ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಹಾರಕೂಡ ಗ್ರಾಮದ ಡಾವರೆ ಮತ್ತು ಸಂಗೊಳಗೆ ಪರಿವಾರದ ಹೆಣ್ಣು ಮಕ್ಕಳಿಂದ ಆಯೋಜಿಸಿದ ಗುರುವಂದನೆ ಹಾಗೂ 842ನೇ ತುಲಾಭಾರ ಸಮಾರಂಭವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ಬಿ. ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಮೇಘರಾಜ ನಾಗರಾಳೆ, ಹೇಮಲತಾ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.