ಶ್ರದ್ಧಾಂಜಲಿ ಸಭೆ: ಮಾಜಿ ಸಭಾಪತಿ ಡೇವಿಡ್ ಸಿಮಿಯೋನ್ ಸ್ಮರಣೆಗೆ ಗೌರವ

ಶ್ರದ್ಧಾಂಜಲಿ ಸಭೆ: ಮಾಜಿ ಸಭಾಪತಿ ಡೇವಿಡ್ ಸಿಮಿಯೋನ್ ಸ್ಮರಣೆಗೆ ಗೌರವ

ಶ್ರದ್ಧಾಂಜಲಿ ಸಭೆ: ಮಾಜಿ ಸಭಾಪತಿ ಡೇವಿಡ್ ಸಿಮಿಯೋನ್ ಸ್ಮರಣೆಗೆ ಗೌರವ

ಕಲಬುರಗಿ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಡೇವಿಡ್ ಸಿಮಿಯೋನ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಸೇರಿದಂತೆ ರಾಜಗೋಪಾಲ ರೆಡ್ಡಿ, ಸಂಧ್ಯಾರಾಜು, ಮಹಾತಪ್ಪ ಸಂಗಾವಿ, ಧರ್ಮರಾಜ್ ಹೇರೂರ, ಈರಣ್ಣ ಝಳಕಿ, ಶಫಿಕ್ ಅಹ್ಮದ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ಮಾಜಿ ಸಭಾಪತಿ ಡೇವಿಡ್ ಸಿಮಿಯೋನ್ ಅವರ ರಾಜಕೀಯ ಸೇವೆ ಹಾಗೂ ಸಾಮಾಜಿಕ ಕೊಡುಗೆಗಳನ್ನು ನೆನಪಿಸಿಕೊಂಡು, ಗಣ್ಯರು ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ  ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.