ಮಹಿಳಾ ಶಿಕ್ಷಕಿಗೆ ನೇಮಕ ಮಾಡಬೇಕೆಂದು ಉಪ ನಿರ್ದೇಶಕರಿಗೆ ಮನವಿ

ಮಹಿಳಾ ಶಿಕ್ಷಕಿಗೆ ನೇಮಕ ಮಾಡಬೇಕೆಂದು ಉಪ ನಿರ್ದೇಶಕರಿಗೆ ಮನವಿ
ಕಲಬುರಗಿ: ಕಸ್ತೂರಿ ಬಾ ಗಾಂಧಿ ವಸತಿ ಶಾಲೆಯಲ್ಲಿ ಕೆಜಿಬಿವಿ-4 ವಸತಿ ನಿಲಯದ ಸಹಾಯಕ ನಿಯೋಜನಾ ಅಧಿಕಾರಿ (ಎಪಿಸಿ) ಆಗಿರುವ ಚವ್ಹಾಣ ಅವರನ್ನೆ ತಮ್ಮ ಮೂಲ ಹುದ್ದೆಗೆ ಬಿಡುಗಡೆಗೊಳಿಸುವ ಬಗ್ಗೆ ಹಾಗೂ ವಸತಿ ಶಾಲೆಯಲ್ಲಿ 8ನೇ ತರಗತಿಯಿಂದ 12ನೇ ತರಗತಿ ವರೆಗೆ ಬಾಲಕಿಯರು ವಿದ್ಯಾರ್ಥಿನಿಯರು ಇರುವ ವಸತಿ ನಿಲಯದಲ್ಲಿ ಮಹಿಳಾ ಶಿಕ್ಷಕಿ ಇರುವ ಬದಲು ಪುರುಷ ಶಿಕ್ಷಕ ಇದ್ದು. ನಿರ್ಗತಿಕ ಬಾಲಕಿಯರ ಹಿತದೃಷ್ಟಿಯಿಂದ ಸದರಿ ಈ ಜಾಗಕ್ಕೆ ಮಹಿಳಾ ಶಿಕ್ಷಕಿಗೆ ನೇಮಕ ಮಾಡಬೇಕೆಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷ ಸಚೀನ್ ಎಸ್. ಫರತಾಬಾದ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಗೋಪಾಲ ಚವ್ಹಾಣ ಅವರ ಮೂಲ ಹುದ್ದೆಯು ಅವರಾದ (ಬಿ) ಕೆ.ಪಿ.ಎಸ್.ಸಿ. ಶಾಲೆಯ ಮುಖ್ಯಗುರುಗಳಾಗಿದ್ದು, ಇವರು ಎಪಿಸಿಯ ಕೆಜಿಬಿವಿ-4 ಆರ್ಎಂಎಸ್ ಅವಧಿಯು 2023-24 ರಲ್ಲಿ ಮುಗಿದಿರುತ್ತದೆ. ಆದರೂ ಕೂಡಾ ಇವರು ಎಲ್ಲಾ ತಾಲೂಕಿನಲ್ಲಿ ಮಹಿಳಾ ವಸತಿ ಗೃಹಗಳಿಗೆ ಸರಬರಾಜು ಮಾಡುವ ಟೆಂಡರಗಾರರ ಜೊತೆಗೂಡಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇವರು 2 ವರ್ಷದಿಂದ ಒಂದೆ ಟೆಂಡರನ್ನು ಮುಂದುವರಿಸುತ್ತಿದ್ದಾರೆ. ಟೆಂಡರ್ ಕರೆದರೂ ಮೇಲಾಧಿಕಾರಿಗಳ ತಪ್ಪು ಮಾಹಿತಿ ಕೊಟ್ಟು ಟೆಂಡರನ್ನು ಕೋರ್ಟ ಮೆಟ್ಟಿಲೇರಿ ಹಿಂದಿನ ಟೆಂಡರದಾರರ ಹತ್ತಿರ ಹಣ ವಸೂಲಿ ಮಾಡಿ ಅಧಿಕಾರಿಗಳಿಗೆ ನೀಡುತ್ತಿದ್ದಾರೆ.
ಅಲ್ಲದೇ ಈ ಎಲ್ಲಾ ಹಾಸ್ಟೆಲಗಳಲ್ಲಿ 8ನೇ ತರಗತಿಯಿಂದ 12ನೇ ತರಗತಿಯ ವರೆಗೆ ಹೆಣ್ಣು ಮಕ್ಕಳು ಇರುತ್ತಾರೆ. ಆದರೆ ಇದನ್ನು ಸರಕಾರದ ನಿಯಮವನ್ನು ಗಾಳಿಗೆ ತೂರಿ ಅಲ್ಲದೇ ವಸತಿ ಶಾಲೆಗಳಿಗೆ ಪುರುಷ ಮುಖ್ಯೋಪದ್ಯಾಯರನ್ನು ನೇಮಿಸಿರುತ್ತಾರೆ. ಇದರಿಂದ ಹೆಣ್ಣು ಮಕ್ಕಳು ತಮ್ಮ ವೈಯಕ್ತಿಕ ಸಮಸ್ಯೆಯನ್ನು ಹೇಳದ ಅವರು ತೊಂದರೆಯನ್ನು ನಮ್ಮ ಸಂಘಟನೆಯಲ್ಲಿ ಇರುವ
ಮಹಿಳಾ ಸದಸ್ಯರಿಗೆ ತಮ್ಮ ಸಮಸ್ಯೆಗಳನ್ನು ಬಂದು ತಿಳಿಸಿರುತ್ತಾರೆ. ಅದಕ್ಕಾಗಿ ಇವನ್ನು ಕೂಡಲೇ ಇಲ್ಲಿಂದ ಬಿಡುಗಡೆ ಮಾಡಿ ಅವನ ಮೂಲ ಹುದ್ದೆಗೆ ಕಳುಹಿಸಬೇಕು ಹಾಗೂ ಎಲ್ಲಾ ಹಾಸ್ಟಲಗಳಿಗೆ ಮಹಿಳಾ ಮುಖ್ಯಗುರುಗಳನ್ನು ನೇಮಿಸಬೇಕು ಇಲ್ಲವಾದಲ್ಲಿ ನಾವು ಮುಂದಿನ ಹೋರಾಟವನ್ನು ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ಮಾಡಬೇಕಾಗುತ್ತದೆ. ಅಲ್ಲದೇ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಮನೆಯ ಮುಂದೆ ಸಾಂಕೇತಿಕ ಧರಣಿಯನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ಇಂತಹ ಭ್ರಷ್ಟ ಅಧಿಕಾರಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು.
ಅಲ್ಲದೇ ಹೆಣ್ಣು ಮಕ್ಕಳಿಗೆ ಏನಾದರೂ ಅನಾಹುತವಾದರೆ ಅದಕ್ಕೆ ಜಿಲ್ಲೆಯ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಇವರೇ ನೇರ ಹೊಣೆಗಾರರು. ಹಾಗೂ ವಸತಿ ಶಾಲೆಯಲ್ಲಿ 8ನೇ ತರಗತಿಯಿಂದ 12ನೇ ತರಗತಿ ವರೆಗೆ ಬಾಲಕಿಯರು ವಿದ್ಯಾರ್ಥಿನಿಯರು ಇರುವ ವಸತಿ ನಿಲಯದಲ್ಲಿ ಮಹಿಳಾ ಶಿಕ್ಷಕಿ ಇರುವ ಬದಲು ಪುರುಷ ಶಿಕ್ಷಕ ಇದ್ದು. ಸದರಿ ಈ ಜಾಗಕ್ಕೆ ಮಹಿಳಾ ಶಿಕ್ಷಕಿಗೆ ನೇಮಕ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ; ಸುರೇಶ ಹನಗುಡಿ, ಅಕ್ಷಯ, ಗುಡ್ಡು ಸಿಂಗ್, ಚಿಂಟು ಜಮಾದಾರ, ಅಂಕುಶ, ವಿಕಾಸ, ಅಣವೀರ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು
.