ನಾಲ್ಕುಚಕ್ರ ತಂಡದಿಂದ ವೃಕ್ಷ ಅಭಿಯಾನ:

.ನಾಲ್ಕುಚಕ್ರ ತಂಡದಿಂದ ವೃಕ್ಷ ಅಭಿಯಾನ:
ಕಲಬುರಗಿ ನಗರದಲ್ಲಿ ಸತತ 5 ವರ್ಷಗಳಿಂದ ನಾಲ್ಕುಚಕ್ರ ತಂಡದಿಂದ ಸಸಿನೆಡುವ ಮತ್ತು ವಿತರಿಸುವ ಕಾರ್ಯ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯಿಂದ 6ರೂ 12ರೂ ಯಂತೆ ಖರಿದಿ ಮಾಡಿ ಶಾಲಾ ಕಾಲೇಜು ಆವರಣಗಳಲ್ಲಿ ಉದ್ಯಾನವನ ಸರ್ಕಾರಿ ಇಲಾಖೆಗಳಲ್ಲಿ ನೆಡುವ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ.. ಮತ್ತು ಪರಿಸರ ಪ್ರೇಮಿಗಳಿಗೆ ಉಚಿತವಾಗಿ ಹಂಚಲಾಗುತ್ತದೆ. ಜೊತೆಗೆ ಕಲಬುರಗಿ ಜಿಲ್ಲೆಯಾದ್ಯಂತ ಪರಿಸರ ಜಾಗೃತಿ ಹಮ್ಮಿಕೊಳ್ಳುವ ಮೂಲಕ ಪ್ಲಾಸ್ಟಿಕ್ ಬ್ಯಾನ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಿರುವ ಕಾರಣ ಇದನ್ನು ತಗ್ಗಿಸಲು ಎಲ್ಲೆಡೆ ಪರಿಸರ ಕಾಳಜಿ ಮೆರೆಯಲಾಗುತ್ತಿದೆ. ತಂಡದ ಸೇವಕರು ತಮ್ಮ ಬಿಡುವಿನ ಸಮಯದಲ್ಲಿ ಸಮಾಜ ಸೇವೆ ಜೊತೆಗೆ ಮಳೆಗಾಲದ ಪೂರ್ತಿ ಅವಧಿ ಗಿಡ ನೆಡುವ ಕಾರ್ಯ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತುದೆ. ಕಲ್ಯಾಣ ಕರ್ನಾಟಕ ಅತೈ ಕಡಿಮೆ ಭೂಮಿ ಪ್ರದೇಶ ಹೊಂದಿದ್ದು ಸರ್ಕಾರ ಇದನ್ನು ಅಭಿವೃದ್ಧಿ ಪಡಿಸುವ ಪರಿಸರಕ್ಕೆ ಹೆಚ್ಚಿನ ಮಹತ್ವ ಕೊಡುವ ಕೆಲಸ ಮಾಡಬೇಕು. ಇಲ್ಲಿಯವರೆಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಇ ವೃರ್ಷವೂ ಸಸಿಗಳನ್ನು ವಿತರಿಸಲಾಗುವುದು ಪರಿಸರ ಪ್ರೇಮಿಗಳು ಪಡೆಯಬೇಕಾಗಿ ವಿನಂತಿ. ನಾಲ್ಕುಚಕ್ರ ತಂಡದ ಮುಖ್ಯ ಉದ್ದೇಶ ಕಲಬುರಗಿ ನಗರ ಹಸಿರು ಸ್ವಚ್ಛ ನಗರ ಮಾಡುವುದು ಮತ್ತು ಉದ್ಯಾನ ವನಗಳಲ್ಲಿ ಹಸಿರುಕರಣಕ್ಕೆ ಒತ್ತು ನೀಡುವುದು ಮನೆಗೊಂದು ಸಸಿ ಎಬಂತೆ ಲಕ್ಷ ಸಸಿ ನೆಡುವ ಕಾರ್ಯ ಮುಖ್ಯ ಉದ್ದೇಶ.
ತಂಡದ ಮುಖ್ಯಸ್ಥರಾದ ಮಾಲಾ ಕಣ್ಣಿ, ಕಲ್ಯಾಣರಾವ್ ಪಾಟೀಲ್ ಕಣ್ಣಿ, ಮಹೇಶ್ಚಂದ್ರ ಪಾಟೀಲ್ ಕಣ್ಣಿ, ಸದಸ್ಯರಾದ ವಿಜಯಲಕ್ಷ್ಮಿ ಹಿರೇಮಠ, ಜಯಶ್ರೀ ಜೈನ್, ಸಂಗೀತ ಕೊರಳ್ಳಿ, ಪೂರ್ಣಿಮಾ ಹೊಸಳ್ಳಿಕರ್, ವೈಶಾಲಿ ನಾಟಿಕಾರ್, ಶೀಲ ಕಲಬುರಗಿ, ರಾಹೊಲ ರಾಥೊಡ್, ಆನಂದತೀರ್ಥ್ ಜೋಶಿ, ಲಿಂಗರಾಜ್ ಡಾಂಗೆ, ಸುಭಾಷ್ ಮೇತ್ರೆ, ನಾಗರಾಜ್ ಡಾಂಗೆ, ವಿನೋದ್ ಕುಲಕರ್ಣಿ, ಅನಿಲ್ ಬಿದನೂರ್ ಸಕ್ರೀಯವಾಗಿ ತೊಡಗಿಕೊಳ್ಳುವರು.