ಅದ್ದೂರಿಯಾಗಿ ಜರುಗಿದ ಕರಿಬಸವೇಶ್ವರ ರಥೋತ್ಸವ

ಅದ್ದೂರಿಯಾಗಿ ಜರುಗಿದ ಕರಿಬಸವೇಶ್ವರ ರಥೋತ್ಸವ
ಶಹಾಪುರ : ತಾಲೂಕಿನ ಸಗರ ಗ್ರಾಮದ ಆರಾಧ್ಯ ದೈವ,ಬೇಡಿ ಬಂದ ಭಕ್ತರನ್ನು,ನೊಂದವರನ್ನು, ಸರ್ವಧರ್ಮೀಯರನ್ನು ರಕ್ಷಿಸುವ, ದಾಸೋಹ ಕಾಯಕದ ಜೊತೆಗೆ ಮಾನವ ಧರ್ಮದ ಶ್ರೇಷ್ಠತೆಯ ಸಂದೇಶ ಸಾರಿದ ಒಕ್ಕಲಿಗರ ಹಿರೇಮಠದ ಶ್ರೀ ಕರಬಸವೇಶ್ವರ ಜಾತ್ರ ನಿಮಿತ್ಯ ಶನಿವಾರದಂದು ಸಾಯಂಕಾಲ 6 ಗಂಟೆಗೆ ಅದ್ದೂರಿಯಾಗಿ ಭವ್ಯ ರಥೋತ್ಸವ ಜರಗಿತು.
ಮಠದ ಪೂಜ್ಯರಾದ ಮರುಳ ಮಹಾಂತ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡಿ,
ಕರಿಬಸವೇಶ್ವರ ಮಹಾರಾಜಕಿ ಜೈ
ಘೋಷಣೆಗಳು ಮೊಳಗುತ್ತಿದ್ದಂತೆ ಅಪಾರಭಕ್ತರು ರಥ ಎಳೆಯುವುದರ ಮುಖಾಂತರ ತಮ್ಮ ಹರಕೆ ತೀರಿಸಿಕೊಂಡರು,ಭಕ್ತರು ಉತ್ತತ್ತಿ, ಬಾಳೆಹಣ್ಣು,ರಥಕ್ಕೆ ಎಸೆದು ನಮ್ಮ ಭಕ್ತಿಯನ್ನು ಸಮರ್ಪಿಸಿದರು.
ಕರಿಬಸವೇಶ್ವರ ಮಠ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು,ಮರುಳ ಮಹಾಂತ ಶಿವಾಚಾರ್ಯರ ಸಾನಿಧ್ಯದಲ್ಲಿ ಬೆಳಗ್ಗೆ ಕರ್ತೃ ಗದ್ದುಗೆ ವಿಶೇಷ ಪೂಜೆ,ಅಭಿಷೇಕ ನಡೆಯಿತು,ನಂತರ ಸಾಯಂಕಾಲ ಒಕ್ಕಲಿಗೇರಿ ಹಿರೇಮಠದಿಂದ ಕಳಸ ಮತ್ತು ಕುಂಭ ಮೆರವಣಿಗೆ ಹಾಗೂ ಪಿಡ್ಡಪ್ಪ ನಂದಿಕೋಲ ಅವರ ಮನೆಯಿಂದ ನಂದಿಕೋಲ ಮೆರವಣಿಗೆ,ಮಂಗಳ ವಾದ್ಯ ಮತ್ತು ಕಲಾತಂಡಗಳೊಂದಿಗೆ,ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮಠಕ್ಕೆ ಆಗಮಿಸಿದ ನಂತರ ಭವ್ಯ ರಥೋತ್ಸವ ನೆರವೇರಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ,ಚಂದಣ್ಣ ಸೇರಿ, ನಿಂಗಣ್ಣ ಮುದ್ದಾ,ಮಲ್ಲಣ್ಣ ವಮ್ಮ, ಮಲ್ಲಿಕಾರ್ಜುನ್ ಕೊಬ್ರಿ ಸೇರಿದಂತೆ ಇತರರು ಹಾಜರಿದ್ದರು.