ಸುಮಾರು 24 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಸುಮಾರು 24 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಏಪ್ರಿಲ್.26ರಂದು ಠಾಣಾ ಕುಶನೂರು, ಚಿಂತಾಕಿ, ಬೆಲ್ದಾಳ ಯನಗುಂದಾ, ಖೇರ್ಡಾ, ಡೋಣಗಾಂವ್ ಎಂಪಿ, ರಾಂಪುರ, ಲಾದಾ, ಜಮಲಪುರ, ಏಕಂಬಾ, ರೈಪಳ್ಳಿ, ಚಿರ್ಕಿ ತಾಂಡಾ, ಚಿಕ್ಲಿ ಜೆ, ವಲ್ಲೇಪುರ, ತೆಗಾಂಪೂರ್ ಸೇರಿದಂತೆ ವಿವಿಧ ಗ್ರಾಮಗಳಿಗೆ ಬೇಟಿ ನೀಡಿ ಸುಮಾರು 24 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಸಿ.ಆರ್.ಎಫ್ ಯೋಜನೆಯಡಿ ಠಾಣಾ ಕುಶನೂರ್ ನಿಂದ ಸಂಗಮ್ ವರೆಗೆ ರಸ್ತೆ ಸುಧಾರಣೆ ರೂ.06 ಕೋಟಿ, ಕೆ.ಕೆ.ಆರ್.ಡಿ.ಬಿ ಯೋಜನೆಯಡಿ ಚಿಂತಾಕಿ, ಬೆಳ್ದಲ್, ಯಾನಗುಂದಾ, ಖೇರ್ಡಾ, ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ ರೂ 1.10 ಕೋಟಿ, ಡೋಣಗಾಂವ್ ಎಂಪಿ ಗ್ರಾಮದಲ್ಲಿ ರಸ್ತೆ ನಿರ್ಮಾಣ್ ರೂ 2.30 ಕೋಟಿ ,ರಾಂಪುರ- ಕೋಟಗ್ಯಾಳ ರಸ್ತೆ ಯಿಂದ ಕಮಲನಗರ್ ವರೆಗೆ ರೂ 2.20 ಕೋಟಿ ರಸ್ತೆ ನಿರ್ಮಾಣ್ ಕಾಮಗಾರಿ, ಲಾದಾ ದಿಂದ ಲಾಧಾ ಕ್ರಾಸ್ ವರೆಗೆ ರಸ್ತೆ ನಿರ್ಮಾಣ್ ರೂ 1 ಕೋಟಿ ಜಮಲಪುರ ಗ್ರಾಮದಿಂದ ಹೋಗುವು ರಸ್ತೆ ನಿರ್ಮಾಣ್ ರೂ 3ಕೋಟಿ, ಏಕಂಬಾ ಗ್ರಾಮದಿಂದ ಔರಾದ್ ರಸ್ತೆ ನಿರ್ಮಾಣ್ ರೂ3 ಕೋಟಿ , ರೈಪಳ್ಳಿ ಯಿಂದ ತೆಲಂಗಾಣಾ ಬಾರ್ಡರ್ ವರೆಗೆ ರಸ್ತೆ ನಿರ್ಮಾಣ್ ರೂ2ಕೋಟಿ, ಚಿರ್ಕಿ ತಾಂಡಾದಿAದ ಚಿಮ್ಮೆಗಾಂವ್ ವರೆಗೆ ರಸ್ತೆ ನಿರ್ಮಾಣ್ ರೂ70 ಲಕ್ಷ , ಚಿಕ್ಲಿ ಜೆ ಗ್ರಾಮದಿಂದ ಮಾಣಿಕ್ ತಾಂಡಾ ವರೆಗೆ ರಸ್ತೆ ನಿರ್ಮಾಣ್ ರೂ1.47 ಕೋಟಿ ವಲ್ಲೇಪುರ ಗ್ರಾಮದಿಂದ ಕ್ರಾಸ್ ವರೆಗೆ ರಸ್ತೆ ನಿರ್ಮಾಣ್ ರೂ70 ಲಕ್ಷ , ತೆಗಾಂಪೂರ್ ಗ್ರಾಮದ ಎಂ ಅಯ್ ಟ್ಯಾಂಕ್ ಹತ್ತೀರ್ ಸಿ ಡಿ ನಿರ್ಮಾಣ್ ಕಾಮಗಾರಿ ರೂ25 ಲಕ್ಷ ಹೀಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು
ಕಾಮಗಾರಿ ಅಂದಾಜು ಪಟ್ಟಿಯಲ್ಲಿ ಇರುವಂತೆ ಆಗಬೇಕು. ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಕಾಮಗಾಗಿ ಮುಗಿಸಬೇಕು. ಡಾಂಬರೀಕರಣ, ಕ್ಯೂರಿಂಗ್ ಸರಿಯಾಗಿ ಆಗಬೇಕು. ರಸ್ತೆಯ ಬಗ್ಗೆ ಜನರಿಂದ ಯಾವುದೇ ರೀತಿಯ ದೂರುಗಳು ಬಾರದ ಹಾಗೆ ಅಚ್ಚುಕಟ್ಟಾಗಿ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಸಿದರು
ಗ್ರಾಮ ಸಂಚಾರದ ವೇಳೆಯಲ್ಲಿ ಗ್ರಾಮಸ್ಥರು ನನಗೆ ಮನವಿ ಮಾಡಿಕೊಂಡಿರುವ ಪ್ರಯುಕ್ತ ಈ ಕಾಮಗಾರಿಗಳು ನಾನು ಮುತುವರ್ಜಿ ವಹಿಸಿ ಮಂಜೂರು ಮಾಡಿಸಿದ್ದೇನೆ. ಸಾಕಷ್ಟು ಗ್ರಾಮಗಳ ಜನತೆಯ ಪ್ರಮುಖ ರಸ್ತೆಗಳಾಗಿವೆ ಸಾಕಷ್ಟು ಪ್ರಯಾಣಿಕರು ಸಂಚರಿಸುತ್ತಾರೆ. ಎಲ್ಲರಿಗೂ ಅನುಕೂಲವಾಗಬೇಕೆಂಬ ಉದ್ದೇಶದಿಂದ 24 ಕೋಟಿ ಅನುದಾನದ್ ಉತ್ತಮ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಸಾರ್ವಜನಿಕರು ಕೂಡ ಜವಾಬ್ದಾರಿತನ ಪ್ರದರ್ಶಿಸಬೇಕು. ತಮ್ಮ ಊರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಮೇಲೆ ನಿಗಾ ವಹಿಸಬೇಕು. ಎಲ್ಲಿಯಾದರೂ ಲೋಪಗಳು ಕಾಣಿಸಿದಲ್ಲಿ ತಕ್ಷಣ ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕೆಲಸ ಸರಿಪಡಿಸಲು ಮುಂದಾಗಬೇಕು. ಯೋಜನೆ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕೆಂದು ಶಾಸಕರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಖಂಡೋಬಾ ಕಂಗಟೆ, ಅನೀಲ ಬಿರಾದಾರ, ಶಿವು ವಡೆ ಶಿವು ಝಲ್ಪೆ , ಉದಯ್ ಸೋಲಾಪುರೆ, ಬಂಟಿ ರಾಂಪುರೆ, ರಾಜಕುಮಾರ್ ಅಲಬಿದೆ, ಪ್ರದೀಪ್ ಪವಾರ ಪಂಚಾಯತ್ ರಾಜ್ ಇಲಾಖೆಯ ವೆಂಕಟ್ ಶಿಂಧೆ, ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.