ಫೆ 26 ರಂದು ಜಯನಗರ ಶಿವಮಂದಿರದಲ್ಲಿ ಶಿವ ಪಾರ್ವತಿ ಕಲ್ಯಾಣೋತ್ಸವ ಆಚರಣೆ.

ಫೆ 26 ರಂದು ಜಯನಗರ ಶಿವಮಂದಿರದಲ್ಲಿ ಶಿವ ಪಾರ್ವತಿ ಕಲ್ಯಾಣೋತ್ಸವ ಆಚರಣೆ.

ಫೆ 26 ರಂದು ಜಯನಗರ ಶಿವಮಂದಿರದಲ್ಲಿ ಶಿವ ಪಾರ್ವತಿ ಕಲ್ಯಾಣೋತ್ಸವ ಆಚರಣೆ.

ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷವೂ ನಗರದ ಜಯನಗರ ಶಿವಮಂದಿರದಲ್ಲಿ ಮಹಾ ಶಿವರಾತ್ರಿ ನಿಮಿತ್ತ ಫೆ.26 ರಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಅದ್ದೂರಿಯಾಗಿ ಶಿವ ಪಾರ್ವತಿ ಕಲ್ಯಾಣೋತ್ಸವ ಜರುಗುವುದು ಎಂದು ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ತಿಳಿಸಿದ್ದಾರೆ.

 ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಳಿಗ್ಗೆ 5 ಗಂಟೆಗೆ ಶಿವನಿಗೆ ರುದ್ರಾಭಿಷೇಕ ನಡೆಯುವುದು.ನಂತರ ಭಕ್ತಾದಿಗಳಿಂದ ಅಭಿಷೇಕ ನಡೆಯುತ್ತವೆ.ಬೆಳಿಗ್ಗೆ 10 ಗಂಟೆಗೆ ಟ್ರಸ್ಟ್ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಬಡಾವಣೆಯ ಮಹಿಳೆಯರ ನೇತೃತ್ವದಲ್ಲಿ ವಿಶೇಷವಾಗಿ ಶಿವ ಪಾರ್ವತಿ ಕಲ್ಯಾಣೋತ್ಸವ ನಡೆಯುವುದು. ಮಂಗಲ ಕಾರ್ಯ ಹಾಗೂ ಧಾರ್ಮಿಕ ವಿಧಿ ವಿಧಾನಗಳು ನಡೆಯುವವು.ಇಂಥ ಆಚರಣೆ ಕೇವಲ ಜಯನಗರ ಶಿವಮಂದಿರದಲ್ಲಿ ಮಾತ್ರ ನೋಡಲು ಸಿಗುವುದು ವಿಶೇಷವಾಗಿದೆ.ಶಾಸಕ ಅಲ್ಲಮಪ್ರಭು ಪಾಟೀಲ್,ಹೊರಾಟಗಾರ ಡಾ.ಲಕ್ಷ್ಮಣ‌ ದಸ್ತಿ ಸೇರಿದಂತೆ ಅನೇಕ ಮುಖಂಡರು, ಪೂಜ್ಯರು, ಗಣ್ಯರು ಉಪಸ್ಥಿತರಿರುವರು.

ಅಂದು ಸಂಜೆ ವಿಶೇಷ ಪೂಜೆ ನಂತರ ರಾತ್ರಿ 8 ಗಂಟೆಗೆ ಜಾಗರಣೆ ಅಂಗವಾಗಿ ಭಜನಾ ತಂಡದ ವತಿಯಿಂದ ಭಕ್ತಿ ಗೀತೆಗಳು, ಭಜನೆ ಹಾಗೂ ಕಲಾವಿದರಿಂದ ಭಾವಗೀತೆಗಳ ಸಂಗೀತ ಸಂಜೆ ನಡೆಯಲಿದೆ.ಈ ಸಂದರ್ಭದಲ್ಲಿ ಅನೇಕ ಗಣ್ಯರು, ಸಾಹಿತಿಗಳು ಉಪಸ್ಥಿತರಿರುವರು.ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯನಗರ ಶಿವಮಂದಿರಕ್ಕೆ ಆಗಮಿಸಿ ಶಿವನ ಆಶೀರ್ವಾದ ಪಡೆಯಬೇಕು ಎಂದು ಅವರು ಕೋರಿದ್ದಾರೆ.