ಮಹಿಳೆಗೆ ಸ್ವಾಭಿಮಾನದಿಂದ ಬದುಕುವ ಹಕ್ಕು ಕೊಟ್ಟಿದ್ದು ಡಾ.ಅಂಬೇಡ್ಕರ್

ಮಹಿಳೆಗೆ ಸ್ವಾಭಿಮಾನದಿಂದ ಬದುಕುವ ಹಕ್ಕು ಕೊಟ್ಟಿದ್ದು ಡಾ.ಅಂಬೇಡ್ಕರ್

ಮಹಿಳೆಗೆ ಸ್ವಾಭಿಮಾನದಿಂದ ಬದುಕುವ ಹಕ್ಕು ಕೊಟ್ಟಿದ್ದು ಡಾ.ಅಂಬೇಡ್ಕರ್: ಹೆಬಳಿ 

ಕಲಬುರಗಿ: ಮಹಿಳೆಯರಿಗೆ ಸ್ವಾಭಿಮಾನದಿಂದ ಬದುಕುವ ಹಕ್ಕು ಕೊಟ್ಟಿರುವುದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾತ್ರ ಎಂದು ಉಪನ್ಯಾಸಕ ಶಾಂತಪ್ಪ ಹೆಬಳಿ ಅಭಿಪ್ರಾಯಪಟ್ಟರು.

 ಆಳಂದ ತಾಲ್ಲೂಕಿನ ಕಡಗಂಚಿಯ ಸಾಯಿ ಪ್ರತಾಪ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ ಜಿಡಗಾ ಗ್ರಾಮದ ಶ್ರೀ ಸಿದ್ದರಾಮೇಶ್ವರ ಮಂದಿರದ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಅಂಗವಾಗಿ ಹಮ್ಮಿಕೊಂಡಿದ್ದ 'ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹಿಳೆ ' ಕುರಿತು ವಿಶೇಷ ಉಪನ್ಯಾಸ ಮಾಡಿದರು.

ಡಾ. ಬಿ.ಆರ್.ಅಂಬೇಡ್ಕರ್ ಅವರು ಹಿಂದೂ ಕಾನೂನನ್ನು ವಿರೋಧಿಸುತ್ತಾರೆ, ಏಕೆಂದರೆ ಅದು ಮಹಿಳೆಯರಿಗೆ ಆಸ್ತಿಯ ಹಕ್ಕನ್ನು ನಿರಾಕರಿಸುತ್ತದೆ; ಮಹಿಳೆಯರಿಗೆ ವಿಚ್ಛೇದನದ ಹಕ್ಕನ್ನು ನಿರಾಕರಿಸುತ್ತದೆ ಮತ್ತು ಪುರುಷರಿಗೆ ಹಲವಾರು ವಿವಾಹ ಮಾಡಿಕೊಳ್ಳುವ ಹಕ್ಕನ್ನು ನೀಡುತ್ತದೆ ಮತ್ತು ಇಲ್ಲಿನ ಬಹುಪಾಲು ಕಾನೂನುಗಳು ಪುರುಷ ಪ್ರಧಾನವಾದವುಗಳು ಎಂದು ಖಂಡಿಸಿದ್ದರು ಎಂದು ಹೇಳಿದರು.

  ಹಿಂದೂ ಕೋಡ್ ಬಿಲ್ ಮೂಲಕ ಇದನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತಾರೆ. ಭಾರತೀಯ ಮಹಿಳೆಯರ ಹಿತದೃಷ್ಟಿಯಿಂದ ಮಸೂದೆಯನ್ನು ಅಂಗೀಕರಿಸುವುದು ಮುಖ್ಯ ಎಂದು ಡಾ.ಬಿ. ಆರ್ ಅಂಬೇಡ್ಕರ್ ಒತ್ತಿ ಹೇಳಿದ್ದರು. ಡಾ. ಅಂಬೇಡ್ಕರ್, ನೆಹರೂ ಅವರಿಗೆ ಈ ಮಸೂದೆಯ ಪ್ರಾಮುಖ್ಯತೆಯ ಬಗ್ಗೆ ತಿಳಿ ಹೇಳಿದ್ದಲ್ಲದೆ, ವಿರೋಧಿಗಳನ್ನು ಮನವೊಲಿಸಿ ಮಸೂದೆಯನ್ನು ಅಂಗೀಕರಿಸಿ ಎಂದು ಮನವಿ ಮಾಡಿದ್ದರು. ಈ ಹಿಂದೂ ಕೋಡ್ ಬಿಲ್‌ನ ತಿರುಳು ಮಹಿಳೆಯರ ವಿಮೋಚನೆ ಮಾಡುವಾದಾಗಿತ್ತು, ಆದರೆ ಇದು ಸಾಧ್ಯವಾಗದ ಕಾರಣ ಡಾ. ಅಂಬೇಡ್ಕರ್ ಅವರು ಹೊರ ಹೋಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಸಾಯಿ ಪ್ರತಾಪ್ ಕಲಾ ಮಹಾ ವಿದ್ಯಾಲಯದ ಅಧ್ಯಕ್ಷರಾದ ಡಾ. ಸುನಿಲ್ ಕುಮಾರ್ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು, ಉಪನ್ಯಾಸಕ ಅಂದಪ್ಪ ಧೋನಿ ಸ್ವಾಗತಿಸಿದರು, ಉಪನ್ಯಾಸಕಿ ಕು.ಅನಿತಾ ಚಂಗಟಿ ನಿರೂಪಿಸಿದರು. ಕೆ. ಪ್ರಿಯಾ ವಂದಿಸಿದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಮಾರು 60 ಶಿಬಿರಾರ್ಥಿಗಳು ಭಾಗವಹಿಸಿದ್ದರು. , ನಾಗರೀಕ ತರಬೇತಿ ಶಿಬಿರದ ಅಂಗವಾಗಿ ' ಡಾ. ಅಂಬೇಡ್ಕರ್ ಮತ್ತು ಮಹಿಳೆ ' ಕುರಿತು ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಶಾಂತಪ್ಪ ಹೆಬಳಿ ಮಾತನಾಡಿ,