ಗುಟ್ಕಾ ಬ್ಯಾನ್, ಸರ್ಕಾರದ ಕ್ರಮಕ್ಕೆ ಡಾ.ಸುಬೇದಾರ ಸ್ವಾಗತ.

ಗುಟ್ಕಾ ಬ್ಯಾನ್, ಸರ್ಕಾರದ ಕ್ರಮಕ್ಕೆ ಡಾ.ಸುಬೇದಾರ ಸ್ವಾಗತ.

ಗುಟ್ಕಾ ಬ್ಯಾನ್, ಸರ್ಕಾರದ ಕ್ರಮಕ್ಕೆ ಡಾ.ಸುಬೇದಾರ ಸ್ವಾಗತ.

ಶಹಪುರ : ಕರ್ನಾಟಕ ಸರ್ಕಾರ ಗುಟಕಾ ಬ್ಯಾನ್ ಮಾಡಿರುವುದು ನನಗೆ ವೈಯಕ್ತಿಕ ತುಂಬಾ ಸಂತೋಷವಾಗಿದೆ ಎಂದು ಡಾ.ಚಂದ್ರಶೇಖರ ಸುಬೇದಾರ ಹರ್ಷ ವ್ಯಕ್ತಪಡಿಸಿಸಿದರು.

ಸರ್ಕಾರದ ಈ ನಿಲುವಿಗೆ ಸ್ವಾಗತಿಸಿ ಮಾತನಾಡಿದ ಅವರು, ಇದಕ್ಕಿಂತ ಪೂರ್ವದಲ್ಲೆ ಬ್ಯಾನ್ ಮಾಡಿದ್ದರೆ ಎಷ್ಟೋ ಯುವಕರ ಜೀವ ಉಳಿಸಬಹುದಿತ್ತು ಎಂದು ನುಡಿದರು,ಇದರ ಜೊತೆಗೆ ಮಧ್ಯಪಾನವು ಕೂಡ ನಿಷೇಧಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.

ಗುಟ್ಕಾ ಬ್ಯಾನ್ ಮಾಡಿದರೆ ಅಡಿಕೆ ಬೆಳೆಗಾರರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಅಡಿಕೆ ಬೆಳೆಗಾರರು ಸರ್ಕಾರದ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದರು, ಗುಟ್ಕಾ ಬಂದಾದರೆ ಅಡಿಕೆ ಬೆಳೆಗಾರರಿಗೆ ಬೇರೆ ಕೃಷಿ ಮಾಡಬಹುದು ಆದರೆ ಗುಟುಕಾ ಸೇವನೆ ಮಾಡಿದ ಯುವಕರು ಜೀವ ಕಳೆದುಕೊಂಡರೆ ಅದು ಮತ್ತೆ ಬರಲಾರದು ಎಂದು ನುಡಿದರು.

ಗುಟ್ಕಾ ಸೇವನೆಯಿಂದ ಬಾಯಿಯ ಕ್ಯಾನ್ಸರ್ ನಂತಹ ಮಹಾ ರೋಗಗಳಿಗೆ ತುತ್ತಾಗಿ ಅದೇಷ್ಟೋ ಕುಟುಂಬಗಳು ಅನಾಥವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿ ಮಾತನಾಡಿದರು,