ಡಾ.ಬಿ.ಆರ್. ಅಂಬೇಡ್ಕರ ರವರ 135 ನೇ ಆಳಂದ ತಾಲೂಕು ಜಯಂತ್ಯೋತ್ಸವ _ಸಮಿತಿಯ ಪದಾಧಿಕಾರಿಗಳಿಗೆ_ ಬಂಜಾರ ಸಮುದಾಯದ ಮುಖಂಡರಿಂದ ಸನ್ಮಾನ
ಡಾ.ಬಿ.ಆರ್. ಅಂಬೇಡ್ಕರ ರವರ 135 ನೇ ಆಳಂದ ತಾಲೂಕು ಜಯಂತ್ಯೋತ್ಸವ _ಸಮಿತಿಯ ಪದಾಧಿಕಾರಿಗಳಿಗೆ_ ಬಂಜಾರ ಸಮುದಾಯದ ಮುಖಂಡರಿಂದ ಸನ್ಮಾನ
ಆಳಂದ :ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ್ ಅಂಬೇಡ್ಕರ ರವರ 135 ನೇ ಆಳಂದ ತಾಲೂಕು ಜಯಂತಿ ಸಮಿತಿಯ ಸರ್ವ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
ಬಂಜಾರ ಸಮುದಾಯದ ಯುವ ಮುಖಂಡ ಸಂಜಯ ನಾಯಕ ಮಾತನಾಡಿ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ನಾವು ನಿಮಗೆ ತನು ಮನ ಧನ ದಿಂದ ಸದಾ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ಪ್ರಚಾರ ಸಮಿತಿಯ ಅಧ್ಯಕ್ಷ ಶಿವಪುತ್ರ ನಡಗೇರಿ ಮಾತನಾಡಿ ನಿಮ್ಮ ಬೆಂಬಲ ಹೀಗೆ ಇರಲಿ ಅಣ್ಣ ತಮ್ಮಂದಿರರಂತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಜಯಂತಿ ವಿಜ್ರಂಭಣೆಯಿಂದ ಆಚರಿಸೋಣ ಎಂದರು.
ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಸೂರ್ಯಕಾಂತ ಸಾಲೇಗಾಂವ ಮಾತನಾಡಿ ನಾವೆಲ್ಲರೂ ಒಂದೇ ಯಾವುದೇ ಭೇದ ಭಾವವಿಲ್ಲದೆ ಸರ್ವರೂ ಸೇರಿ ಜಯಂತಿ ಅದ್ದೂರಿಯಾಗಿ ಆಚರಿಸೋಣ ಎಂದರು.ಈ ಸಂದರ್ಭದಲ್ಲಿ
ಸಂಜಯ ನಾಯಕ. ಶಿವಾಜಿ . ಸುರೇಶ ರಾಠೋಡ, ಶಿವರಾಜ ಕೊರಳ್ಳಿ ವಿನೋದ ಜಾಧವ ಸತೀಶ ಚವ್ಹಾಣ
ಮುಂತಾದವರು ಉಪಸ್ಥಿತರಿದ್ದರು.
ವರದಿ.ಡಾ.ಅವಿನಾಶS. ದೇವನೂರ
