ಪರ್ಯಾಯ ಪೂರ್ವ ಸಂಚಾರ: ಶಿರೂರುಶ್ರೀಗಳಿಗೆ ಅ. 15 ರಂದು ರಾಮ ಮಂದಿರದಲ್ಲಿ ಭವ್ಯ ಸ್ವಾಗತ

ಪರ್ಯಾಯ ಪೂರ್ವ ಸಂಚಾರ: ಶಿರೂರುಶ್ರೀಗಳಿಗೆ ಅ. 15 ರಂದು ರಾಮ ಮಂದಿರದಲ್ಲಿ ಭವ್ಯ ಸ್ವಾಗತ

ಪರ್ಯಾಯ ಪೂರ್ವ ಸಂಚಾರ: ಶಿರೂರುಶ್ರೀಗಳಿಗೆ ಅ. 15 ರಂದು ರಾಮ ಮಂದಿರದಲ್ಲಿ ಭವ್ಯ ಸ್ವಾಗತ

ಕಲಬುರಗಿ : ಉಡುಪಿಯಲ್ಲಿ ಮುಂದಿನ ವರ್ಷ ಜನವರಿ 18ರಂದು ಪರ್ಯಾಯೋತ್ಸವದಲ್ಲಿ ಪ್ರಪ್ರಥಮ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಶಿರೂರು ಮಠದ ಪೂಜ್ಯರಾದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಪರ್ಯಾಯ ಪೂರ್ವ ಸಂಚಾರದ ಅಂಗವಾಗಿ ಬುಧವಾರ (ಅಕ್ಟೋಬರ್ 15 ರಂದು) ಕಲಬುರಗಿಗೆ ಆಗಮಿಸಲಿದ್ದಾರೆ. ರಾಮ ಮಂದಿರದಲ್ಲಿ ಸ್ವಾಮೀಜಿಯವರನ್ನು ಭವ್ಯವಾಗಿ ಸ್ವಾಗತಿಸಲು ಸಿದ್ಧತೆ ನಡೆದಿದೆ. 

   ಶ್ರೀ ಪಾದೂರು ರಾಮಕೃಷ್ಣ ತಂತ್ರಿ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ನ್ಯೂ ಜೇವರ್ಗಿ ರಸ್ತೆಯಲ್ಲಿರುವ ರಾಮಮಂದಿರದಲ್ಲಿ ಬುಧವಾರ (ಅಕ್ಟೋಬರ್ 15ರಂದು) ನಗರಕ್ಕೆ ಪ್ರವೇಶ ಮಾಡುವ ಪೂಜ್ಯ ಸ್ವಾಮೀಜಿಯವರನ್ನು ಸಾಯಂಕಾಲ 5:30ಕ್ಕೆ ಭಕ್ತಿ ಪೂರ್ವಕವಾಗಿ ಸ್ವಾಗತಿಸಲು ಪೂರ್ಣ ಸಿದ್ಧತೆ ಕೈಗೊಳ್ಳಲಾಗಿದೆ. ಕಲಬುರ್ಗಿಯ ಸಾರ್ವಜನಿಕರು, ಸಂಘ-ಸಂಸ್ಥೆಯವರು ಪೂಜ್ಯರನ್ನು ಸ್ವಾಗತಿಸುವ ಹಾಗೂ ನಂತರ ನಡೆಯುವ ತೊಟ್ಟಿಲು ಸೇವೆ ಪೂಜೆ ಅನ್ನಪ್ರಸಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್ ನ ಕಾರ್ಯದರ್ಶಿಗಳಾದ ಕಿಶೋರ್ ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

   ನಂತರ ಪೂಜ್ಯ ಶ್ರೀಗಳು ಕಲಬುರ್ಗಿಯ ವಿದ್ಯಾನಗರದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 16ರಂದು ಪೂಜ್ಯಶ್ರೀಗಳಿಂದ ಸಂಸ್ಥಾನ ಪೂಜೆ ನಡೆಯಲಿದೆ ಶಿರೂರು ಮಠಾಧೀಶರಿಗೆ ಮೊಟ್ಟಮೊದಲ ಪರ್ಯಾಯ ಸರ್ವಜ್ಞ ಪೀಠ ಆರೋಹಣ ವಾಗಿರುವುದರಿಂದ ಪರ್ಯಾಯ ಪೂರ್ವ ಸಂಚಾರದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ದೇಶಪಾಂಡೆ ತಿಳಿಸಿದ್ದಾರೆ.