ಬಲೂನ್ ಮಾರಲು ಮೈಸೂರಿಗೆ ಬಂದ ಕಲಬುರಗಿಯ 10 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ: ಕಾನೂನು ಸುವ್ಯವಸ್ಥೆ ಕುಸಿತದ ಕನ್ನಡಿ

ಬಲೂನ್ ಮಾರಲು ಮೈಸೂರಿಗೆ ಬಂದ ಕಲಬುರಗಿಯ 10 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ: ಕಾನೂನು ಸುವ್ಯವಸ್ಥೆ ಕುಸಿತದ ಕನ್ನಡಿ

ಬಲೂನ್ ಮಾರಲು ಮೈಸೂರಿಗೆ ಬಂದ ಕಲಬುರಗಿಯ 10 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ: ಕಾನೂನು ಸುವ್ಯವಸ್ಥೆ ಕುಸಿತದ ಕನ್ನಡಿ

ಕಲಬುರಗಿ: ನಿನ್ನೆ ಮೈಸೂರಿನಲ್ಲಿ ದಸರಾ ಕಾರ್ಯಕ್ರಮದ ಸಂದರ್ಭದಲ್ಲಿ ಬಲೂನ್ ಮಾರಾಟ ಮಾಡಲು ಕಲಬುರಗಿಯಿಂದ ಬಂದ ಹಕ್ಕಿಪಿಕ್ಕಿ ಜನಾಂಗದ 10 ವರ್ಷದ ಹೆಣ್ಣುಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ನಿಜಕ್ಕೂ ಖಂಡನೀಯ ಎಂದು ಬಿಜೆಪಿ ಕರ್ನಾಟಕ ರಾಜ್ಯ ವಕ್ತಾರರಾದ ಡಾ. ಸುಧಾ ಆರ್ ಹಾಲಕಾಯಿ ಅವರು ಹೇಳಿದರು.

ಒಂದು ನಾಗರೀಕ ಸಮಾಜದ ಒಳಗೆ ನಡೆದ ಅತ್ಯಂತ ಭೀಭತ್ಸವಾದ ಕೃತ್ಯವಿದು. ದಸರಾ ಸಂಭ್ರಮದ ವೇಳೆಯಲ್ಲಿ ಮೈಸೂರಿನ ಜನನಿಬಿಡ ಪ್ರದೇಶದಲ್ಲಿ, ಅರಮನೆಯ ಮುಂಭಾಗದಲ್ಲಿಯೇ ಈ ಕೊಲೆ ನಡೆದಿರುವುದು ಕರ್ನಾಟಕ ರಾಜ್ಯದ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ದಿನೇ ದಿನೇ ಕುಸಿತ ಕಂಡಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಂತೂ ದಿನ ನಿತ್ಯ ಕೊಲೆ, ಸುಲಿಗೆ ನಡೆಯುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇದೆ.

ಮತ್ತಷ್ಟು ಮುಂದೆ ಹೋಗಿ ಮೈಸೂರಿನಲ್ಲಿ ಮಾದಕ ದ್ರವ್ಯದ ಕಾರ್ಖಾನೆಗಳೇ ಪ್ರಾರಂಭ ಆಗಿರುವುದು ಮತ್ತಷ್ಟು ಕಳವಳಕಾರಿಯಾಗಿದೆ.

ಈ ಎಲ್ಲ ಘಟನೆಗಳು ಪೊಲೀಸ್ ವ್ಯವಸ್ಥೆಯೇ ಕುಸಿದು ಹೋಗಿರುವುದಕ್ಕೆ ಸಾಕ್ಷಿಯಾಗಿವೆ. ಪೊಲೀಸ್ ವ್ಯವಸ್ಥೆ ಕುಸಿದು ಬೀಳಲು ಸರಕಾರದ ವರ್ಗಾವಣೆ ದಂಧೆಯೇ ಕಾರಣವಾಗಿದೆ. ಕಳೆದ ಎರಡು ವರ್ಷಗಳಲ್ಲಿ ನಡೆದ ವ್ಯಾಪಕ ವರ್ಗಾವಣೆ, ಅದೂ ಪೊಲೀಸ್ ಅಧಿಕಾರಿಗಳ ಮಟ್ಟದಲ್ಲಂತೂ ಪ್ರತಿನಿತ್ಯದ ಸುದ್ದಿಯಾಗಿಯೇ ಹೊರಹೊಮ್ಮಿದೆ. ಇಂತಹ ಒಂದು ಅಸಮರ್ಥ ಆಡಳಿತ ಕಾರಣದಿಂದ ಅಮಾಯಕ ಬಡ ಹೆಣ್ಣುಮಗಳ ಕೊಲೆ ನಡೆದು ಹೋಗಿದೆ. ಇದಕ್ಕೆ ಈ ರಾಜ್ಯ ಸರಕಾರವೇ ಹೊಣೆಗಾರ.

ಕೊಲೆಯಾದ 10 ವರ್ಷದ ಹುಡುಗಿ ರಾಧಿಕಾ ಕಲಬುರ್ಗಿ ಜಿಲ್ಲೆಯವಳು. ಬದುಕನ್ನು ಕಟ್ಟಿಕೊಳ್ಳಲು, ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಬಲೂನ್ ಮಾರಲೆಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದ ಬಡ ಕುಟುಂಬದ ಹೆಣ್ಣುಮಗಳು ಅವಳು. ಬದುಕು ಕಟ್ಟಿಕೊಳ್ಳಲು ಕಲಬುರಗಿಯ ಜನ ಗುಳೇ ಹೋಗುತ್ತಿದ್ದಾರೆ.

ಉದ್ದುದ್ದ ಭಾಷಣ ಮಾಡುವ ಪ್ರಿಯಾಂಕ ಖರ್ಗೆ, ಅವರ ಸ್ವಂತ ಊರಿನಿಂದ ಜನರು ಬದುಕು ಕಟ್ಟಿಕೊಳ್ಳುವುದಕ್ಕಾಗಿ ಗುಳೇ ಹೋಗುತ್ತಿದ್ದರೆ, ಯಾವುದೇ ಕ್ರಮವನ್ನು ವಹಿಸದೆ ಜಗತ್ತಿನ ಬೇರೆಲ್ಲಾ ವಿಷಯಗಳ ಬಗ್ಗೆ ಮೂಗುತೂರಿಸಿ ಮಾತನಾಡುತ್ತಾರೆ. ಮಾನ್ಯ ಪ್ರಿಯಾಂಕ್ ಖರ್ಗೆಯವರೇ, ಒಂದು ಅಮಾಯಕ ಬಾಲಕಿಯ ಭೀಭತ್ಸ ಕೊಲೆ ನಡೆದು ಹೋಗಿದ್ದರೂ ಒಂದು ಶಬ್ದವನ್ನೂ ಮಾತನಾಡದೆ ಮೂಕರಾಗಿದ್ದೀರಲ್ಲಾ, ಯಾಕೆ?

ತಮ್ಮ ಸರಕಾರದ ವೈಫಲ್ಯವೇ ಈ ಮಗುವಿನ ಕೊಲೆಯ ರೂಪದಲ್ಲಿ ಕಂಡುಬರುತ್ತಿದೆ. ಮೊದಲು ಕಲ್ಯಾಣ ಕರ್ನಾಟಕದಿಂದ ಜನರು ಬದುಕು ಕಟ್ಟಿಕೊಳ್ಳಲು ಗುಳೇ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ ಶ್ರೇಯಸ್ಸು ನಿಮಗೆ, ನಿಮ್ಮ ಕುಟುಂಬಕ್ಕೆ ಸಲ್ಲುತ್ತದೆ. ಇದಕ್ಕೆ ಹೊಣೆಗಾರರು ನೀವು.

ತಕ್ಷಣವೇ ಇಂತಹ ಬಡಜನರ ಧ್ವನಿಯಾಗಬೇಕು ನೀವು. ಅದೇ ನಿಜವಾದ ಸಂವಿಧಾನದ ಆಶಯ, ಅಂಬೇಡ್ಕರ್ ಅವರ ಆಶಯ ಕೂಡ ಆಗಿತ್ತು. ಪ್ರತಿನಿತ್ಯ ಅಂಬೇಡ್ಕರ್ ಬಗ್ಗೆ, ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಮಾಡುವ ತಾವು, ನಿಮ್ಮ ಊರಿನಿಂದ ಜನರು ಗುಳೇ ಹೋಗುವುದನ್ನು ತಡೆಯುವಂತಹ ಪ್ರಯತ್ನವನ್ನು ಮಾಡಿದರೆ ನಿಮ್ಮ ರಾಜಕೀಯ ಜೀವನ ಸಾರ್ಥಕ ಅನಿಸುತ್ತದೆ. 

ಮೈಸೂರಿನಲ್ಲಿ ನಡೆದ ಈ ದುರ್ಘಟನೆಗೆ ರಾಜ್ಯದ ಕಾಂಗ್ರೆಸ್ ಸರಕಾರವೇ ಹೊಣೆಯಾಗಿದೆ. ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.