ನಗರದ ಪ್ರಮುಖ ರಸ್ತೆ ಮೂಲಕ ಅರಿವು ಜಾಥಾ ಈದ್ ಮಿಲಾದ್ : ಡಿಜೆ ಬಳಸಬಾರದು ಮೌಲಾನಾ ಮುಫ್ತಿ ಜಿಶಾನ ನಜ್ಮೀ

ನಗರದ ಪ್ರಮುಖ ರಸ್ತೆ ಮೂಲಕ ಅರಿವು ಜಾಥಾ
ಈದ್ ಮಿಲಾದ್ : ಡಿಜೆ ಬಳಸಬಾರದು ಮೌಲಾನಾ ಮುಫ್ತಿ ಜಿಶಾನ ನಜ್ಮೀ
ಕಲಬುರಗಿ : ಸೆ. 5ರಂದು ಆಚರಿಸುವ (ಈದ್ ಮಿಲಾದ್ ಉನ್ ನಬೀ) ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಹಬ್ಬದ ದಿನ ಯುವಕರು ಯಾವುದೇ ಕಾರಣಕ್ಕೂ ಡಿಜೆ ಬಳಬಾರದು, ನಮ್ಮಿಂದ ಬೇರೆಯವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಮರ್ಕಜ್ ಸುನ್ನಿ ದಾವತೇ ಎ ಇಸ್ಲಾಮಿ ಖತೀಬ್ ಇಮಾಮ್ , ಮೌಲಾನಾ ಮುಫ್ತಿ ಜಿಶಾನ ನಜ್ಮೀ ಅವರು ಹೇಳಿದರು.
ಸುನ್ನಿ ದಾವತೇ ಎ ಇಸ್ಲಾಮೀಯ ಗುಲ್ಬರ್ಗ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮತ್ತು ಬಡಾವಣೆಗಳಲ್ಲಿ ಜಾಥಾ ಮೂಲಕ
ಹಬ್ಬದ ದಿನ ಯುವಕರು ಯಾವುದೇ ಕಾರಣಕ್ಕೂ ಡಿಜೆ ಬಳಬಾರದು, ಎಂದು ಅರಿವು ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಮೌಲಾನಾ ಮುಫ್ತಿ ಜಿಶಾನ ನಜ್ಮೀ ಅವರು ಮಾತನಾಡಿ. ಈದ್ ಮಿಲಾದ್ ಹಬ್ಬವನ್ನು ಯಾರಿಗೂ ತೊಂದರೆ ಆಗದಂತೆ ಆಚರಿಸಲು ತೀರ್ಮಾನಿಸಲಾಗಿದೆ. ಶಾಂತಿ ನಮ್ಮ ಮೂಲ ಧರ್ಮವಾಗಿದೆ. ಈ ನಿಟ್ಟಿನಲ್ಲಿ ಈದ್ ಮಿಲಾದ್ ದಿನದಂದು ಯಾರೇ ಡಿಜೆಗೆ ಅವಕಾಶ ನೀಡಿ ಅಂತ ಮನವಿ ಮಾಡಿದರೇ ಆ ಮನವಿಗೆ ಅವಕಾಶ ನೀಡಬಾರದು ಎಂದು ಹೇಳಿದರು. ಈ ನಿಟ್ಟಿನಲ್ಲಿ ಈದ್ ಮಿಲಾದ್ ದಿನದಂದು ಡಿಜೆ ಬಳಸದೇ ಶಾಂತಿಯ ಸಂದೇಶ ಸಾರಲು ನಾವು ತಿರ್ಮಾನಿಸಿದ್ದೇವೆ ಹೇಳಿದರು.
ಈ ಸಂದರ್ಭದಲ್ಲಿ ಮೌಲಾನಾ ಶೈಬಾಜ್ ನಜ್ಮೀ, ಅರೀಫ್ ಅಕ್ತಾರ,ಮಹ್ಮದ ಇಮ್ರಾನ್, ಸೇರಿದಂತೆ ಇತರರು ಇದ್ದರು.
ಈದ್ ಮಿಲಾದ್ ಹಬ್ಬ ಮುಸಲ್ಮಾನ ಬಾಂಧವರ ಪವಿತ್ರ ಹಬ್ಬವಾಗಿದೆ. ಈ ಪವಿತ್ರ ದಿನದಂದು ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡವುದೇ ನಮ್ಮ ಧ್ಯೇಯವಾಗಿದೆ
ಸೈಯದ್ ಹಫೀಜ್ ಅಜರ್ ಅಲಿ,ಮುಖಂಡ ಸುನ್ನಿ ದಾವತೇ ಎ ಇಸ್ಲಾಮಿ