ಬಾನು ಮುಷ್ತಾಕ್ ಅವರಿಗೆ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಗೌರವ

ಬಾನು ಮುಷ್ತಾಕ್ ಅವರಿಗೆ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ
ಬಳ್ಳಾರಿ – ಡಿಸೆಂಬರ್ನಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಲೇಖಕಿ, ನ್ಯಾಯವಾದಿ ಹಾಗೂ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ನಿರ್ಧಾರ ಜೂನ್ 29ರಂದು ಬಳ್ಳಾರಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ತೆಗೆದುಕೊಳ್ಳಲಾಯಿತು.
ಸಮಿತಿಯ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ ಈ ಮಾಹಿತಿಯನ್ನು ಬಹಿರಂಗಪಡಿಸಿದರು. ಅವರು, “ಈ ವರ್ಷದ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದು ಕನ್ನಡ ಸಾಹಿತ್ಯಕ್ಕೆ ಗೌರವ ತಂದಿರುವುದು,” ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಬಾನು ಮುಷ್ತಾಕ್ ಅವರು ಕಥೆಗಾರ್ತಿ, ಪತ್ರಕರ್ತೆ ಮತ್ತು ಅನುವಾದಕಿಯಾಗಿ ವಿಶಿಷ್ಟ ಸಾಧನೆಗಳನ್ನು ಮಾಡಿರುವವರು. ಐದು ಕಥಾಸಂಕಲನ, ಒಂದು ಪ್ರಬಂಧ ಸಂಕಲನ ಪ್ರಕಟಿಸಿರುವ ಅವರು, ಕೌಟುಂಬಿಕ ತಡೆ ಕಾಯ್ದೆ ಸೇರಿದಂತೆ ಫಾರ್ಸಿ ಮತ್ತು ಉರ್ದು ಮೂಲದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕಥೆ ಆಧಾರಿತ ಗಿರೀಶ್ ಕಾಸರವಳ್ಳಿಯ ‘ಹಸೀನಾ' ಚಿತ್ರ ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದಿದೆ.
ಅವರು ಬರೆದ ‘ಬೆಂಕಿಮಳೆ ,ಎದೆಯ ಹಣತೆ, ಹೆಜ್ಜೆ ಮೂಡಿದ ಹಾದಿ, ಮುಂತಾದ ಕೃತಿಗಳು ಹಲವಾರು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ‘ಕುಬ, ಬಡವರ ಮಗಳು ಹೆಣ್ಣಲ್ಲ’ ಎಂಬ ಕಾದಂಬರಿ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಲಂಕೇಶ್ ಪತ್ರಿಕೆಗೆ 9 ವರ್ಷ ಸೇವೆ ಸಲ್ಲಿಸಿರುವ ಅನುಭವವು ಅವರಿಗೆ ವಿಶಿಷ್ಟ ಸ್ಥಾನವನ್ನು ಒದಗಿಸಿದೆ.
ಈ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ದೀಪ ಬಾಸ್ತಿಯವರಿಗೆ ಗೌರವ ನೀಡಲಾಗುವುದು ಎಂದು ಜೋಷಿ ತಿಳಿಸಿದರು.
ಕ.ಸಾ.ಪ.ಮಾಜಿ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ, ಅಪ್ಪಾರಾವ ಅಕ್ಕೊಣಿ , ಹಾಗೂ ವೀರಭದ್ರ ಸಿಂಪಿ, ಹಾಗೂ ಸಾಹಿತಿಗಳಾದ ಸಿದ್ದಾರಾಮ ಹೊನ್ಕಲ್, ಪ್ರೊ.ಶಿವರಾಜ ಪಾಟೀಲ, ಮೈಪಾಲರೆಡ್ಡಿ ಮುನ್ನೂರ, ಎ.ಕೆ.ರಾಮೇಶ್ವರ, ಪ್ರಭಾಕರ ಜೋಷಿ ಸೇಡಂ,ಪಮನು ಸಗರ,ಚಿ.ಸಿ.ನಿಂಗಣ್ಣ, ಡಾ.ವೀರಶೇಟ್ಟಿ ಗಾರಂಪಳ್ಳಿ, ಡಾ ಆನಂದ ಸಿದ್ದಾಮಣಿ, ಬಿ.ಎಚ್.ನಿರಾಗುಡಿ, ಎಸ್ ಎಲ್ ಪಾಟೀಲ,ಡಾ.ಶರಣಬಸಪ್ಪಾ ವಡ್ಡನಕೇರಿ, ಸುಭಾಶ್ಚಂದ್ರ ಕಶೇಟ್ಟಿ,ಅಂಬಾರಾಯ ಮಡ್ಡೆ, ಸೇರಿದಂತೆ ಅನೇಕರು ಬಾನು ಮುಷ್ತಾಕ್ ಅವರಿಗೆ ಶುಭ ಹಾರೈಸಿದರು
ಸಾಹಿತಿ ಬಾನು ಮುಷ್ತಾಕ್ ಅವರು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಇನ್ನೂ ಒಪ್ಪಿಗೆ ನೀಡಿಲ್ಲ. ಕೆಲವು ದಿನಗಳ ಸಮಯ ಕೇಳಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಇನ್ನು ಕೆಲವು ದಿನ ಕಾದು ನೋಡಬೇಕು.!