ಪತ್ರಕರ್ತ ಸೂರ್ಯಕಾಂತ ಜಮಾದಾರಗೆ ಸ್ನೇಹಶ್ರೀ ಪ್ರಶಸ್ತಿ ಪ್ರದಾನ

ಪತ್ರಕರ್ತ ಸೂರ್ಯಕಾಂತ ಜಮಾದಾರಗೆ ಸ್ನೇಹಶ್ರೀ ಪ್ರಶಸ್ತಿ ಪ್ರದಾನ

ಪತ್ರಕರ್ತ ಸೂರ್ಯಕಾಂತ ಜಮಾದಾರಗೆ ಸ್ನೇಹಶ್ರೀ ಪ್ರಶಸ್ತಿ ಪ್ರದಾ

ಕಲಬುರಗಿ ನಗರದ ಆಳಂದ ರಸ್ತೆಯ ಖಾದ್ರಿಚೌಕ್ ಬಳಿ ಇರುವ ಅಖಿಲ ಕರ್ನಾಟಕ ಸ್ನೇಹಗಾಂಗಾವಾಹಿನಿಯಯ ಕಸ್ತೂರಿಬಾಯಿ ಬುಳ್ಳಾ ಸಾಂಸ್ಕೃತಿಕ ಭವನದಲ್ಲಿ ರವಿವಾರ ನಡೆದ ಅಖಿಲ ಕರ್ನಾಟಕ ಸ್ನೇಹಗಾಂಗಾವಾಹಿನಿಸಂಸ್ಥೆಯ ಸಂಸ್ಥಾಪನ ದಿನಾಚರಣೆ ಸಮಾರಂಭದಲ್ಲಿ ಪತ್ರಕರ್ತ ಸೂರ್ಯ ಕಾಂತ ಜಮಾದಾರ ಅವರಿಗೆ ಸ್ನೇಹಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಲೋಕಸೇವಾ ಆಯೋಗದ ಮಾಜಿ ಸದಸ್ಯರಾದ ಡಾ. ನಾಗಾಬಾಯಿ ಬುಳ್ಳಾ ಅವರು, ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಗಳು, ಬೆಳವಣಿಗೆಗಳು ಆಗುತ್ತಿವೆ. ಆದರೆ, ತಳವರ್ಗದ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಬೆಳವಣಿಗೆ ನೋಡಲು ಸಿಗುತ್ತಿಲ್ಲ. ಆದ್ದರಿಂದ ಆ ಶಿಕ್ಷಣ ಸಂಸ್ಥೆಗಳಿಗೆ ಜನರು ಬೆಂಬಲ ನೀಡಬೇಕು ಎಂದು ಹೇಳಿದರು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲಬುರಗಿ ಉತ್ತರ ವಲಯ ಬಿಇಓ ಸೋಮಶೇಖರ ಹಂಚಿನಾಳ ಮಾತನಾಡಿ, ಶಿಕ್ಷಣ ಎನ್ನುವುದು ಹುಲಿಯ ಹಾಲಿದ್ದಂತೆ ಅದನ್ನು ಎಲ್ಲರೂ ಕುಡಿದಾಗಲೇ ನಮ್ಮ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದ ಸಮಾಜಗಳು ಘರ್ಜಿಸಲು ಸಾಧ್ಯ ಎಂದ ಅವರು, ಸ್ನೇಹಗಂಗಾವಾಹಿನಿ ಶಿಕ್ಷಣ ಸಂಸ್ಥೆಯಿಂದ ಪ್ರೌಢ ಶಾಲೆ ವಿಭಾಗವನ್ನು ಆರಂಭಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳುಂಡಗಿ ಮಾತನಾಡಿದರು. ಸಂಸ್ಥೆಯ ಗೌರವ ಅಧ್ಯಕ್ಷಡಾ. ಬಿ.ಪಿ. ಬುಳ್ಳಾ ಮಾತನಾಡಿ, ಅಂಬೇಡ್ಕರ್ ಅವರು, ಸಾಧನೆಯ, ಭಾರತದ ಇತಿಹಾಸದ ರಥವನ್ನು ನಾನು ಇಲ್ಲಿಯವರೆಗೆ ಎಳೆ ತಂದಿದ್ದೇನೆ ಎಂದು ಆಶಯ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಸೂರ್ಯಕಾಂತ್ ಎಂ.ಜಮಾದಾರ, ಪ್ರಶಸ್ತಿಗಳು ಸಮಾಜದ ಜವಾಬ್ದಾರಿಗಳನ್ನು ಹೆಚ್ಚು ಮಾಡುತ್ತವೆ. ಆ ನಿಟ್ಟಿನಲ್ಲಿ ನನ್ನ ಪ್ರಯತ್ನವನ್ನು ಮಾಡುತ್ತೇನೆ. ಪ್ರತಿಯೊಬ್ಬ ಪತ್ರಕರ್ತ ಒಂದು ಸಮಾಜದನಾಗಿರುವುದು ಸಾಮಾನ್ಯ. ಆದರೆ, ವೃತ್ತಿಯ ಜವಾಬ್ದಾರಿ ನಿಭಾಯಿಸುವಾಗ ಆತ ನಿಷ್ಟುರವಾಗುತ್ತಾನೆ. ಅದನ್ನು ಸಮಾಜದ ಜನರು ಅರ್ಥ ಮಾಡಿಕೊಂಡಾಗ ಒಳ್ಳೆಯ ಸಂಬಂಧ ನಿಭಾಯಿಸಬಹುದು ಎಂದರು.

ಮುಂದಿನ ವರ್ಷದಿಂದ ಸಂಸ್ಥೆಯಲ್ಲಿ ಓದಿ ಉತ್ತಮ ಅಂಕ ಪಡೆಯುವ ವಿದ್ಯಾರ್ಥಿಗೆ ನನ್ನ ತಂದೆ ದಿ.ಮಲಕಪ್ಪ ಹಣಮಂತಪ್ಪ ಜಮಾದಾರ ಸ್ಮರಣಾರ್ಥ ಬಹುಮಾನ ನೀಡುತ್ತೇನೆ. ಅದರಿಂದ ವಿದ್ಯಾರ್ಥಿಗಳ ಮುಂದಿನ ಓದಿಗೆ ತುಸು ಸಹಕಾರ ಸಿಗಲಿದೆ ಎಂದರು.

ಈ ವೇಳೆಯಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಸೈಬಣ್ಣ ಕೆ. ವಡಗೇರಿ, ಉಪಾಧ್ಯಕ್ಷರಾಮಲಿಂಗ ನಾಟೀಕಾರ, ಧರ್ಮರಾಜ್‌ ಜವಳಿ ಸೇರಿದಂತೆ ಅನೇಕರು ಇದ್ದರು.

ಪ್ರಾಸ್ತಾವಿಕವಾಗಿ ಡಾ. ರಾಘವೇಂದ್ರ ಗುಡಗುಂಟಿ ಮಾತನಾಡಿ, ಸಂಸ್ಥೆ ನಡೆದು ಬಂದ ದಾರಿ ಕುರಿತು ಹೇಳಿದರು. ಯಲ್ಲಾಲಿಂಗ ಕೋಬಾಳ ಸ್ವಾಗತಿಸಿದರು. ವಿಜಯಲಕ್ಷ್ಮಿ ಪಾಟೀಲ ವಂದಿಸಿದರು.

ಚಂದ್ರಕಾಂತ ತಳವಾರ ನಿರೂಪಿಸಿದರು. ಸಮಾಜದ ಬಂಧುಗಳು ಹಾಗೂ ಇತರರು ಇದ್ದರು.