ಕಿಣ್ಣಸರಪೋಸ್ ಗ್ರಾಮದ ಅಭಿವೃದ್ಧಿಗೆ ಶಾಸಕ,ಅಧ್ಯಕ್ಷ ಹಾಗೂ ಪಿಡಿಓ ನಿರ್ಲಕ್ಷ

ಕಿಣ್ಣಸರಪೋಸ್ ಗ್ರಾಮದ ಅಭಿವೃದ್ಧಿಗೆ ಶಾಸಕ,ಅಧ್ಯಕ್ಷ ಹಾಗೂ ಪಿಡಿಓ ನಿರ್ಲಕ್ಷ

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಸೋಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಿಣ್ಣಸರಪೋಸ್ ಗ್ರಾಮದ ಅಭಿವೃದ್ಧಿಗೆ ಶಾಸಕ ಬಸವರಾಜ ಮತ್ತಿಮೂಡ್ ಮತ್ತು ಗ್ರಾಂ ಪಂಚಾಯತ್ ಅಧ್ಯಕ್ಷ ಹಾಗೂ ಪಿಡಿಓ ಸೇರಿ ಸದಸ್ಯರಿಂದ ಗ್ರಾಮಕ್ಕೆ ನಿರ್ಲಕ್ಷ್ಯ.

ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಕಿಣ್ಣಿಸರಪೋಸ್ ಗ್ರಾಮದಲ್ಲಿ 2012ರಲ್ಲಿ ಭರವಸೆಯ ಜತೆಗೆ ಆರಂಭಗೊಂಡ ಗ್ರಾಮ ವಿಕಾಸ್ ಯೋಜನೆ ಇಂದಿಗೂ ಕೇವಲ ಭರವಸೆಯಲ್ಲೇ ಮುಂದುವರೆದಿದೆ. ಯೋಜನೆ ಪ್ರಾರಂಭಗೊಂಡು 13 ವರ್ಷಗಳಾದರೂ ಇಲ್ಲಿಯ ಸ್ಥಜನತೆಗೆ ಶುದ್ಧ ನೀರು, ರಸ್ತೆ, ಚರಂಡಿ, ವಿದ್ಯುತ್ ದಂತಹ ಕನಿಷ್ಠ ಮೂಲಭೂತ ಸೌಕರ್ಯಗಳಿಗೆ ಪರದಾಡುವದು ತಪ್ಪುತ್ತಿಲ್ಲ ಎಂದು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತೀಮೂಡ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಗ್ರಾಮಸ್ಥರು.

ವಿಕಾಸ್ ಯೋಜನೆಯಲ್ಲಿ‌ ಕೈಗೆತ್ತಿಕೊಂಡ ದೇವಾಲಯ ಅಭಿವೃದ್ಧಿ, ಸಿಸಿ ರಸ್ತೆ, ಒಳಚರಂಡಿ, ಕುಡಿಯುವ ನೀರಿನ ಕಾಮಗಾರಿ ಎಲ್ಲವೂ ಅರ್ಧಕ್ಕೆ ನಿಂತ ಸ್ಥಿತಿಯಲ್ಲಿವೆ.. ಜೆಜೆಎಂ ಅಡಿಯಲ್ಲಿ ನೀಡಿದ ನೀರಿನ ಸಂಪರ್ಕವೂ ಅಸ್ಥಿರವಾಗಿ ನೀರಿಗೂ ಬರ ಬಂದಿದೆ. ಶುದ್ಧ ಕುಡಿಯುವ ನೀರು ಬೇಕಾದರೆ ಮೂರು ಕಿಲೋಮೀಟರ್ ದೂರದ ಪಕ್ಕದ ಗ್ರಾಮಕ್ಕೆ ತೆರಳಬೇಕು. ಬಳಿಕ ನೀರಿಗಾಗಿ ದಿನ ಬೆಳಗಾದ್ರೆ ಸಾಕು ಕೊಡ ಹಿಡಿದು ಜಮೀನುಗಳಿಗೆ ಹಾಗೂ ಬಾವಿಗೆ ಹೋಗಬೇಕು.‌

ಅಷ್ಟೇ ಅಲ್ಲ ಗ್ರಾಮಕ್ಕೆ ಸರಿಯಾಗಿ ಬಸ್ ಸಂಚಾರ ಕುಡಾ ಇಲ್ಲ, ವಿದ್ಯುತ್ ಸಮಸ್ಯೆ ಇನ್ನೊಂದು ಸಂಕಟ. ವಾರಗಟ್ಟಲೆ ವಿದ್ಯುತ್ ಇಲ್ಲದೆ ಇರೋದು ಇಲ್ಲಿ ಸರ್ವೆ ಸಾಮಾನ್ಯ. ಚರಂಡಿ ಇಲ್ಲದ ಕಾರಣ ಚರಂಡಿ ನೀರು ಬೀದಿಗಳಲ್ಲಿ ಹರಿಯುವುದು ನೋಡುಗರ ಮನಸ್ಸು ತಳಮಳಗೊಳಿಸುತ್ತದೆ. ರೋಗ ರೂಜಿನಗಳು ಹರಡುವ ಚಿಂತೆ, ಮಳೆಗಾಲದಲ್ಲಿ ಕಾಲು ಜಾರಿ ಬಿಳ್ಳುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿವೆ.

ಚುನಾವಣೆ ಬಂದರೆ ಮಾತ್ರ ಶಾಸಕರ ಭೇಟಿ, ಆದರೆ ಸಮಸ್ಯೆಗಳಿಗೆ ಪರಿಹಾರವಿಲ್ಲ. ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಈ ಊರಿನ ಜನತೆಯನ್ನು ಮರೆತಂತಿದೆ. ಸಮಸ್ಸೆಗಳ ಸುಳಿಯಲ್ಲಿ‌ ಸಿಲುಕಿದರೂ ನಮ್ಮ‌ ಕಡೆ ಶಾಸಕರು‌ ಗಮನ ಹರಿಸುತ್ತಿಲ್ಲ ಅಂತ ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನು ಗ್ರಾಮದಲ್ಲಿರುವ ತೊಂದರೆಗಳನ್ನು ಮೇಲಾಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಿದ್ದಾರೆ ಗ್ರಾಮಸ್ಥರು...

ಇನ್ನಾದರೂ ಶಾಸಕ ಬಸವರಾಜ ಮತ್ತಿಮಡು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ನಿಜವಾದ ‘ವಿಕಾಸ’ ಕಾರ್ಯಗಳಿಗೆ ದಿಕ್ಕು ತೋರಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.