ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕಲಬುರಗಿ: ಸೇಡಂ ಉಪ ವಿಭಾಗದಲ್ಲಿ ಕೆಲಸ ನಿರ್ವ ಹಿಸುತ್ತಿರುವಶರಣಪ್ಪ ತಂದೆ ಮಲ್ಲಿಕಾರ್ಜುನ (ನಿಕಟಪೂರ್ವ ಶಾಖಾಧಿಕಾರಿ ಕುರಕುಂಟಾ) ಇವರನ್ನು ಕೂಡಲೇ ಅಮಾನತ್ತು ಗೊಳಿಸಬೇಕು ಮತ್ತು ಇವರಿಗೆ ಕುಮ್ಮಕ್ಕು ನೀಡುತ್ತಿರುವ ಖಂಡಪ್ಪ ಸೋನವನೆ ಎಸ್.ಸಿ. ಜೆಸ್ಕಾಂ ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ದಿಂದ ಜೇಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಸೇಡಂ ಉಪ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಶರಣಪ್ಪ ತಂದೆ ಮಲ್ಲಿಕಾರ್ಜುನ (ನಿಕಟಪೂರ್ವ ಶಾಖಾಧಿಕಾರಿ ಕುರಕುಂಟಾ) ಇವರು ಅನಧೀಕೃತವಾಗಿ ಕೆಲಸ ಕೈಗೊಂಡು ದುರ್ನಡತೆ ಮತ್ತು ನಿರ್ಲಕ್ಷ್ಯತೆ ತೋರಿ ಇಲಾಖೆಗೆ ಆರ್ಥಿಕ ಹಾನಿ ಮಾಡಿರುವ ಕಾರಣದಿಂದಾಗಿ ಇವರಿಗೆ ದಿನಾಂಕ: 06-02-2025 ರಂದು ಕಾರಣ ಕೇಳುವ ನೋಟಿಸ್ ನಿಡಿ ಅಮಾನತ್ತುಗೊಳಿಸಿ ಇಲಾಖೆ ವಿಚಾರಣೆ ಕೈಗೊಳ್ಳುವಂತೆ ಕಾರ್ಯನಿವಾಹಕ ಅಭಿಯಂತರರು (ವಿ) ಕಾರ್ಯ ಮತ್ತು ಪಾಲನೆ ವಿಭಾಗ, ಗುವಿಸಕಂನಿ, ಸೇಡಂ ಇವರು ಆದೇಶಿಸಿರುತ್ತಾರೆ.

ಬಾಬುದ್ದಿನ ಇವರು ದಿನಾಂಕ: 04/02/2025 ರಂದು ಸ್ಥಳ ಪರಿಶೀಲಿಸಿದಾಗ ಅನಧೀಕೃತವಾಗಿ ನೀವು ಕರ್ತವ್ಯದ ವ್ಯಾಪ್ತಿ ಮೀರಿ ಕುರಕುಂಟಾ ಶಾಖೆ ಯಲ್ಲಿ ಬಂದು ದಿನಾಂಕ: 02/02/2025ರಂದು ಪ್ರೇಮಸಿಮಮ್ ಮಾರ್ಗದಾಳು ಮತ್ತು ಸಾಗರ ಕಿ.ಮಾ. ಇವರನ್ನು ಕರೆದುಕೊಂಡು ಹೋಗಿ ಪರಿವರ್ತಕವನ್ನು ಅನಧಿಕೃತವಾಗಿ ಬದಲಾಯಿಸಿರುತ್ತಾರೆ. ಸದರಿ ಪರಿವರ್ತಕದ ಮೇಲೆ ಭಾರ 20 ಹೆಚ್.ಪಿ.ಗಿಂತ ಕಡಿಮೆ ವಿದ್ಯುತ್ ಭಾರ ಇದ್ದು, ಯಾವುದೇ ಸಕಾರಣವಿಲ್ಲದೆ ವಿದ್ಯುತ್ ಅನ್ನು ಅನಧೀಕೃತವಾಗಿ ಬಳಸಲು ಸಹಾಯ ಮಾಡುವ ಉದ್ದೇಶ ದಿಂದ ಕರ್ತವ್ಯದಲ್ಲಿ ದುರ್ನಡತೆ ಹಾಗೂ ನಿರ್ಲಕ್ಷ್ಯ ತೋರಿ ಇಲಾಖೆಗೆ ಆರ್ಥಿಕವಾಗಿ ಹಾನಿ ಮಾಡಿರುತ್ತಾರೆ.

ಆದರೆ ಸದರಿ ಇಲಾಖೆ ವಿಚಾರಣೆ ನಡೆಸ ಬೇಕಾಗಿರುವಂತ ಅಧಿಕಾರಿಗಳು ಶರಣಪ್ಪ ತಂದೆ ಮಲ್ಲಿಕಾರ್ಜುನ ಇವರಿಂದ ಹಣ ಪಡೆದು ಇವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಕೂಡಲೇ ಇವರ ವಿರುದ್ದ ಮತ್ತೊಮ್ಮೆ ಉನ್ನತ ಅಧಿಕಾರಿಗಳಿಂದ ಇಲಾಖೆ ವಿಚಾರಣೆ ನಡೆಸಬೇಕು ಮತ್ತು ಇವರನ್ನು ಕೂಡಲೇ ಅಮಾನತ್ತುಗೊಳಿಸಬೇಕು.

ಶರಣಪ್ಪ ತಂದೆ ಮಲ್ಲಿಕಾರ್ಜುನ ಅವರಿಗೆ ದೂರವಾಣಿ ಕರೆ ಮಾಡಿದಾಗ, ನನ್ನಿಂದ ತಪ್ಪಾಗಿದೆ ಎಂದು ಹೇಳಿರುವ ಆಡಿಯೋ ಸಂಭಾಷಣೆಯ ಸಾಕ್ಷಿ ನಮ್ಮ ಹತ್ತಿರ ಇರುತ್ತದೆ. ಖಂಡಪ್ಪ ಸೋನವನೆ ಎಸ್.ಸಿ. ಜೆಸ್ಕಾಂ ಇವರಿಗೂ ಸಹ ದೂರವಾಣಿ ಕರೆ ಮಾಡಿ ಮನವಿ ಪತ್ರದ ಕುರಿತು ವಿಚಾರಿಸಿದರೆ, ಇದಕ್ಕೆ ಸಮಯ ಬೇಕಾಗುತ್ತದೆ. ನಾನು ಪ್ರಸ್ತುತ ಸೇಡಂನಲ್ಲಿ ಇದ್ದೇನೆ ಎಂದು ಹೇಳಿರುತ್ತಾರೆ.

ಆದ್ದರಿಂದ ಹಣದ ಆಸೆಗಾಗಿ ಅಕ್ರಮ ಮಾಡಿರುವ ಶರಣಪ್ಪ ತಂದೆ ಮಲ್ಲಿಕಾರ್ಜುನ ಇವರನ್ನು ಕಾಪಾಡುತ್ತಿರುವ ಇವರ ಮೇಲೂ ಸಹ ಸೂಕ್ತ ಕ್ರಮ ಕೈಗೊಳ್ಳಬೇಕು.

ಈ ಕುರಿತು ದಿನಾಂಕ: 15/05/2025 ರಂದು ಮುಖ್ಯ ಇಂಜಿನಿಯರರು ಜೆಸ್ಕಾಂ ಕಲಬುರಗಿ ವಲಯ ಕಲಬುರಗಿ ಮತ್ತು ಅಧೀಕ್ಷಕ ಅಭಿಯಂತರರು, ಚೆಸ್ಕಾಂ ಕಲಬುರಗಿ ವೃತ್ತ ಕಛೇರಿ ಕಲಬುರಗಿ ಈಗಾಗಲೇ ಮನವಿ ಪತ್ರ ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಈ ಮೇಲೆ ತಿಳಿಸಿರುವ ಇಬ್ಬರು ಜೆಸ್ಕಾಂ ಅಧಿಕಾರಿಗಳ ವಿರುದ್ದ ಕೂಡಲೇ ಕ್ರಮಕೈಗೊಳ್ಳ ಬೇಕು ಎಂದು ತಮ್ಮ ಮಾಹಿತಿಗಾಗಿ ಸಲ್ಲಿಸುತ್ತಿದ್ದೇವೆ.

ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಸಂದೀಪ್ ಭರಣಿ, ಸತೀಶ ಕಡೂನ, ಪರ್ವತ, ವೀರೇಶ, ಫಿರೋಜ, ಶಾಂತು, ಪಪ್ಪು ಬಿದ್ದಾಪೂರ, ವಿಶ್ವನಾಥ ದೇಕೂನ ಮುಂತಾದವರು ಉಪಸ್ಥಿತರಿದ್ದರು.