ಸರಿಯಾದ ಚಿಕಿತ್ಸೆ ಇಲ್ಲದೇ, ಹಸು ಅಸ್ವಸ್ಥ ಹಸುಗೆ ಪ್ರಾಣ ಅಪಾಯವಾದರೆ ಪಶು ಅಧಿಕಾರಿಗಳೇ ನೇರ ಹೊಣೆ : ಶಿವಾನಂದ ಮಾಲಿ ಪಾಟೀಲ

ಸರಿಯಾದ ಚಿಕಿತ್ಸೆ ಇಲ್ಲದೇ, ಹಸು ಅಸ್ವಸ್ಥ 

ಹಸುಗೆ ಪ್ರಾಣ ಅಪಾಯವಾದರೆ ಪಶು ಅಧಿಕಾರಿಗಳೇ ನೇರ ಹೊಣೆ : ಶಿವಾನಂದ ಮಾಲಿ ಪಾಟೀಲ

ಚಿಂಚೋಳಿ : ತಾಲೂಕಿನ ಐನಾಪೂರ ಗ್ರಾಮದ ರಾಮಶೆಟ್ಟಿ ಸಲಗರ ಅವರ ಮಾಲೀಕತ್ವದ ಗರ್ಭ ಹೊಂದಿರುವ ಹಸುಗೆ ಪಶು ಇಲಾಖೆ ಸರಿಯಾದ ಚಿಕಿತ್ಸೆ ನೀಡದೇ ಇರುವುದರಿಂದ ಕಾಲು ಮತ್ತು ಹೊಟ್ಟೆ ನೋವುನಿಂದ ಅಸ್ವತಗೊಂಡಿದೆ ಎಂದು ರೈತ ಮುಖಂಡ ಶಿವಾನಂದ ಮಾಲಿ ಪಾಟೀಲ ಆರೋಪಿಸಿದ್ದಾರೆ. 

ಬೆಳಿಗ್ಗೆ ಹಸು ನೋವುನಿಂದ ನರಳುತ್ತಿರುವುದನ್ನು ಕಂಡು ಮಾಲೀಕ ರಾಮಶೆಟ್ಟಿ ಸಲಗರ ಹಸುವಿಗೆ ಚಿಕಿತ್ಸೆ ಕೊಡಿಸಲು ಐನಾಪೂರ ಪಶು ಅಧಿಕಾರಿಗಳಿಗೆ ಸಂಪರ್ಕಿಸಿದರು. ಸ್ಥಳಕ್ಕೆ ಕಾಂಟ್ರಾಕ್ಟ್ ಬೇಸ್ ಮೇಲೆ ಕಾರ್ಯನರ್ವಹಿಸುತ್ತಿದ್ದ ಗ್ರಾಮದವರೇ ಆದ ಸಿದ್ದು ಖೋಠಾರ ಅವರು ಬಂದು ಚಿಕಿತ್ಸೆ ನೀಡಲಾಗಿದೆ. ಸಿದ್ದು ಖೋಠಾರ ಅವರಿಗೆ ಯಾವ ನೋವಿಗೆ ಯಾವುದು ಚಿಕಿತ್ಸೆ ನೀಡಿ ಔಷಧ ನೀಡಬೇಕೆಂಬುದು ಅನುಭವದ ಕೊರತೆಯಿಂದಾಗಿ ಹಸು ನೋವಿನಿಂದ ನರಳಿ ಅಸ್ವಸ್ಥಗೊಂಡು ಕುಳಿತಿದ್ದು, ಇದರ ಬಗ್ಗೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಗುತ್ತೇದಾರ ಅವರಿಗೆ ಸಂಪರ್ಕಿಸಿ ತಿಳಿಸಲಾಗಿತು. ಬಂದು ಹುಸುವಿಗೆ ಚಿಕಿತ್ಸೆ ನೀಡಿ, ಉಪಚರಿಸಲಾಗುತ್ತದೆ ಎಂದು ಅಧಿಕಾರಿ ಮಲ್ಲಿಕಾರ್ಜುನ ಗುತ್ತೇದಾರ ಹೇಳಿದರು. ಆದರೆ ದಿನ ಕಳೆದರು ಬಂದು ಹಸುವಿಗೆ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿದರು. ಗರ್ಭ ಹೊಂದಿರುವ ಹಸುಗೆ ಪ್ರಾಣ ಅಪಾಯವಾದರೆ ಅದಕ್ಕೆ ನೇರ ಹೊಣೆ ಪಶು ಅಧಿಕಾರಿಗಳೇ ಆಗುತ್ತಾರೆ ಎಂದು ಗ್ರಾಮದ ರೈತ ಮುಖಂಡ ಶಿವಾನಂದ ಮಾಲಿ ಪಾಟೀಲ ಅವರು ತಿಳಿಸಿದ್ದಾರೆ.