ಇನ್ನೊಬ್ಬರಿಗೆ ಅನ್ಯಾಯ ಮಾಡಲು ನಮ್ಮ ಮನಸ್ಸು ಒಪ್ಪುವುದಿಲ್ಲ : ಪೂಜ್ಯ ಪ್ರಕಾಶ ಮಹಾರಾಜರು

ಇನ್ನೊಬ್ಬರಿಗೆ ಅನ್ಯಾಯ ಮಾಡಲು ನಮ್ಮ ಮನಸ್ಸು ಒಪ್ಪುವುದಿಲ್ಲ : ಪೂಜ್ಯ ಪ್ರಕಾಶ ಮಹಾರಾಜರು
ಕಲಬುರಗಿ: ಆಂಕರ ಆಧ್ಯಾತ್ಮಿಕ ಜೀವನ ನಡೆಸುವುದರಿಂದ ಇನ್ನೊಬ್ಬರಿಗೆ ಅನ್ಯಾಯ ಮಾಡಲು ನಮ್ಮ ಮನಸ್ಸು ಒಪ್ಪುವುದಿಲ್ಲ ಹಾಗೂ ಧರ್ಮದ ಕೆಲಸದಿಂದ ನಮ್ಮ ಮನಸಿಗೆ ನೆಮ್ಮದಿ ಸಿಗುತ್ತದೆ ಎಂದು ಪರಮ ಪೂಜ್ಯ ಪ್ರಕಾಶ ಮಹಾರಾಜರು ಕೈವಲ್ಯ ಕುಟೀರ ವಿಜಯಪುರ ಶ್ರೀಗಳು ಹೇಳಿದರು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಳಬಟ್ಟಿ- ಮಲ್ಲಾಬಿ ಗ್ರಾಮದ ಜಗದ್ಗುರು ಮೌನೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆದಿಶಕ್ತಿ ಕಾಳಿಕಾಂಬ ಶಕ್ತಿ ಪೀಠದಲ್ಲಿ ನಡೆದ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆಧ್ಯಾತ್ಮಿಕ ಜೀವನದಲ್ಲಿ ಅತ್ಮ ದರ್ಶನ ವಿಷಯ ಕುರಿತು ಆಶೀರ್ವಚನ ನೀಡಿದರು.
ವಿಶ್ವಕರ್ಮ ಮಠಾಧಿಪತಿಗಳ ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರು, ಮೂರುಜಾವದೀಶ್ವರ ಮಠದ ರಾಮಚಂದ್ರ ಮಹಾಸ್ವಾಮಿಗಳು, ಆದಿಶಕ್ತಿ ಕಾಳಿಕಾಂಬ ಶಕ್ತಿ ಪೀಠದ ಶರಣ ಶ್ರೀ ನಿಂಗಣ್ಣ ಶರಣರು ಸಾನಿಧ್ಯ ವಹಿಸಿದರು, ಬಿಜೆಪಿ ಒಬಿಸಿ ಮೋರ್ಚಾ ಕಲಬುರ್ಗಿ ನಗರ ಅಧ್ಯಕ್ಷರಾದ ದೇವಿಂದ್ರ ದೇಸಾಯಿ ಕಲ್ಲೂರ ಅಧ್ಯಕ್ಷತೆ ವಹಿಸಿದರು, ಚನ್ನವಿರಯ್ಯ ಹಿರೇಮಠ, ದೇವೇಂದ್ರ ವಿಶ್ವಕರ್ಮ ಅಧ್ಯಕ್ಷರು ವಿಶ್ವಕರ್ಮ ಫೌಂಡೇಶನ್ ಕಲಿಕೇರಿ, ಎಸ್ಎಸ್ ಪಟ್ಟಣಶೆಟ್ಟಿ, ಯಮನಪ್ಪಗೌಡ ತಾಳೆವಾಡಿ, ಗೌಡಪ್ಪಗೌಡ ವಣಿಕ್ಯಾಳ ಜ್ಯೋತಿ ಬೆಳಗಿಸಿದರು,
ಮುಖ್ಯ ಅತಿಥಿಗಳಾಗಿ ಬಳಬಟ್ಟಿ ಗ್ರಾಮದ ವಿಜಯ ಸ್ವಾಮಿ ಹಿರೇಮಠ, ಶಿವರಾಜ್ ಬೆಳಗುಂಪಿ, ಅಂಬರೀಶಗೌಡ ಬೆಳಗುಂಪಿ, ಮಲ್ಲು ಮಲ್ಲೆದ, ಮಲ್ಲಿಕಾರ್ಜುನ ಶಿರವಾಳ, ಮಹೇಶ ಹರನೂರ, ಷಣ್ಮುಖಪ್ಪ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ್ ಹವಾಲ್ದಾರ್ ಲೋಕೇಶ್ ಸಿಲವಂತ್ ಸೇರಿ ಇತರರು ಭಾಗವಹಿಸಿದ್ದರು.
ಬೆಳಗಿನಜಾವದವರಿಗೆ ನಾಡಿನ ಹೆಸರಾಂತ ಕಲಾವಿದರಾದ ಸಿದ್ದು ವಿಶ್ವಕರ್ಮ, ರವಿ ವಿಭೂತಿಯವರಿಂದ ಜಾಗರಣೆ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮವನ್ನು ಡಾ. ಗಂಗಾಧರ ವಿಶ್ವಕರ್ಮ ನಿರೂಪಿಸಿ ವಂದಿಸಿದರು
.