ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೊಸ ಅಧಿಕಾರಿಗೆ ಅಲೆಮಾರಿ ಒಕ್ಕೂಟದಿಂದ ಸನ್ಮಾನ

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೊಸ ಅಧಿಕಾರಿಗೆ ಅಲೆಮಾರಿ ಒಕ್ಕೂಟದಿಂದ ಸನ್ಮಾನ
ಕಲಬುರಗಿ: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೂತನವಾಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸೋಮಶೇಖರ್ ಅವರಿಗೆ ಜಿಲ್ಲಾ ಅಲೆಮಾರಿ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಅಲೆಮಾರಿ ಒಕ್ಕೂಟ ಹಾಗೂ ಕಲಬುರಗಿ ಜಿಲ್ಲಾ ಗೊಲ್ಲ (ಯಾದವ) ಸಮಾಜದ ಜಿಲ್ಲಾಧ್ಯಕ್ಷ ಕುಮಾರ್ ಕೆ.ಯಾದವ್, ಅಲೆಮಾರಿ ಸಮಾಜದ ಜಿಲ್ಲಾ ಅಧ್ಯಕ್ಷ ಹೆಳವರ ಸಮಾಜದ ಸಾಯಬಣ್ಣ ಹೆಳವರ, ಘೀಷಡಿ ಸಮಾಜದ ಅಧ್ಯಕ್ಷ ಚಂದ್ರು ಪವಾರ್, ಕಟಬು ಸಮಾಜದ ಅಧ್ಯಕ್ಷ ಅರುಣಕುಮಾರ್ ಕಟ್ಟಿಮನಿ, ಗೊಂದಲಿ ಸಮಾಜದ ಅಧ್ಯಕ್ಷ ಚಂದ್ರಶೇಖರ ಗೊಂದಲಿ, ಹೆಳವರ ಸಮಾಜದ ಕಾರ್ಯದರ್ಶಿ ಮಲ್ಲಿಕಾರ್ಜುನ ಹೆಳವರ, ಗೊಲ್ಲ (ಯಾದವ) ಸಮಾಜದ ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಸಿ. ಯಾದವ್, ದುರ್ಗಾಮುರ್ಗ ಸಮಾಜದ ಅಧ್ಯಕ್ಷ ಸ್ವಾಮಿ ಸೇರಿದಂತೆ ಇತರರು ಇದ್ದರು.